ದಿಗಂತ್ ಕೈಜಾರಿದ ಅನಾರ್ಕಲಿ ಕಿಟ್ಟಿಗೆ ಸಿಕ್ಕಿದ್ದು ಏಕೆ?

ಯಾಕೋ ದಿಗಿ ಮೈಮೇಲೆ ಮನಸಾರೆ ಹೀರೋ ಬಂದಿರೋ ರೀತಿ ಇತ್ತು ಸನ್ನಿವೇಶ. ಆಮೇಲೆ ಸ್ವಲ್ಪ ಕೂಲ್ ಆದ ಪಂಚರಂಗಿ ಹುಡ್ಗ, ಸಾಧು ಕೋಕಿಲ ಮಾಡಿದ ಅವಾಂತರ ಅಂದ್ರು. ಏನಾಯ್ತು ಅಂದ್ರೆ...
ನಾನು ಹೇಳ್ದೆ "ಪಾರಿಜಾತ" ಮತ್ತೆ "ಲೈಫುಇಷ್ಟೇನೆ" ಚಿತ್ರದಲ್ಲಿ ಬ್ಯುಸಿ ಇದ್ದೀನಿ ಈಗ ಬೇರೆ ಪ್ರಾಜೆಕ್ಟ್ ಒಪ್ಪಿಕೊಳ್ಳೋದು ಕಷ್ಟ ಅಂತಾ, ಪರವಾಗಿಲ್ಲಮ್ಮ, ನೀನು ಫ್ರೀ ಆಗಿರುವ ಟೈಮ್ ಕೊಡು ನಾನು ಕಾಯ್ತೀನಿ ಅಂತಾ ಹೇಳಿದ್ರು. ಆಮೇಲೆ ಆಗಸ್ಟ್ ನಲ್ಲಿ ಮಳೆ ಇರುತ್ತೆ, ಶೂಟಿಂಗ್ ಕಷ್ಟ ಅಡ್ಜಸ್ಟ್ ಮಾಡ್ಕೋ ಬೇರೆ ಡೇಟ್ ಕೊಡು ಅಂದ್ರು. ನಾನು ನೋಡ್ತೀನಿ ಅಂದಿದ್ದೆ.
ಪಂಚರಂಗಿ ಆದ್ಮೇಲೆ ನಾನು ನಾಲ್ಕು ಸಿನಿಮಾ ಮಾಡಿದ್ದೀನಿ. ರಜೆ ಅನ್ನೋದು ಸಿಕ್ಕಿಲ್ಲ. ಆರೋಪ ಮಾಡೋಕೆ, ಕಾರಣ ಹೇಳೋಕೆ ನನ್ನ ಹತ್ರಾನೂ ನೂರಾರು ವಿಷ್ಯ ಇದೆ ಆದ್ರೆ ನಾನು ಸಾಧು ಕೋಕಿಲ ಅಲ್ಲ ಎಂದು ದಿಗಿ ಮುಖ ಆ ಕಡೆ ಮಾಡಿ ಕೂತರು.
ಯೋಗರಾಜ ಭಟ್ಟರ ಜೊತೆ ಮುಂಗಾರು ಮಳೆ, ಗಾಳಿಪಟ, ಮನಸಾರೆ ಹಾಗೂ ಪಂಚರಂಗಿ ಚಿತ್ರ ಮಾಡಿದ್ದೀನಿ. ನಾನು ಕಿರಿಕ್ ಮಾಡುವವನಾಗಿದ್ರೆ ಹೇಗೆ ನಾಲ್ಕು ಸಿನಿಮಾ ಮಾಡೋಕೆ ಸಾಧ್ಯ. ಇದುವರೆವಿಗೂ ಯಾವುದೇ ನಿರ್ದೇಶಕ, ನಿರ್ಮಾಪಕರ ಜೊತೆ ಮನಸ್ತಾಪ ಆಗಿಲ್ಲ. ಇವರು ನೋಡಿದ್ರೆ ನನ್ನ ಮೇಲೆ ಗೂಬೆ ಕೂರಿಸ್ತಾರೆ ಎಂದು ಸದ್ಯಕ್ಕೆ ದಿಗಂತ್ ಕಾಲ್ ಶೀಟ್ ರಾಕ್ ಲೈನ್ ವೆಂಕಟೇಶ್, ಸೌಂದರ್ಯ ಜಗದೀಶ್ ಹಾಗೂ ಇಂದ್ರಜೀತ್ ಲಂಕೇಶ್ ಕೈಲಿದೆ.


Click it and Unblock the Notifications











