Don't Miss!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- News Bride Kidnap Video: ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವಿನ ಅಪಹರಣಕ್ಕೆ ಯತ್ನ: ವಿಡಿಯೋ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೀರ ಮದಕರಿ' ಶತದಿನೋತ್ಸವಕ್ಕೆ ಚಿತ್ರತಂಡಬಹಿಷ್ಕಾರ!
'ವೀರ ಮದಕರಿ' ಚಿತ್ರ ಶತಕದ ಸಂಭ್ರಮದಲ್ಲಿದೆ. ಮುಂದಿನ ವಾರ ಹಾಸನದಲ್ಲಿ ಶತದಿನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳಲು ಸಿದ್ಧವಾಗಿದೆ. ಆದರೆ 'ವೀರ ಮದಕರಿ' ಚಿತ್ರತಂಡ ಶನದಿನೋತ್ಸವ ಸಂಭ್ರಮವನ್ನು ಬಹಿಷ್ಕರಿಸಲು ತೀರ್ಮಾನಿಸಿದೆ. ನಿರ್ಮಾಪಕ ದಿನೇಶ್ ಗಾಂಧಿ ಬಗ್ಗೆ ಇಡೀ ಚಿತ್ರತಂಡ ಸಿಡಿದೆದ್ದಿದೆ.
ಬಾಕಿ ಸಂಭಾವನೆಯನ್ನು ದಿನೇಶ್ ಗಾಂಧಿ ಇನ್ನೂ ಕೊಟ್ಟಿಲ್ಲ ಎಂಬುದು ತಂತ್ರಜ್ಞರು ಮತ್ತು ಕಲಾವಿದರ ಪ್ರಮುಖ ಆರೋಪ. ಹಾಗಾಗಿ ಶತದಿನೋತ್ಸವ ಸಂಭ್ರಮಕ್ಕೆ ಅವರು ಬಹಿಷ್ಕಾರ ಹಾಕಿದ್ದಾರೆ. ಚಿತ್ರ ಬಿಡುಗಡೆಯಾದ ದಿನದಿಂದಲೂ ನಟ ಸುದೀಪ್ ಸಂಭಾವನೆ ವಿಚಾರವಾಗಿ ದಿನೇಶ್ ಜತೆ ಗುದ್ದಾಡುತ್ತಲೇ ಇದ್ದಾರೆ. ದಿನೇಶ್ ಗಾಂಧಿ ಮತ್ತು ಚಿತ್ರತಂಡದ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ.
ವೀರ ಮದಕರಿ ಚಿತ್ರ ತೆರೆಕಾಣುವುದಕ್ಕೂ ಮುನ್ನ ದಿನೇಶ್ ಆರ್ಥಿಕ ಸಂಕಷ್ಟದಲ್ಲಿದ್ದರು. ಹಾಗಾಗಿ ಸಂಭಾವನೆ ವಿಚಾರವಾಗಿ ಚಿತ್ರತಂಡ ಯಾವುದೇ ಕ್ಯಾತೆ ತೆಗೆದಿರಲಿಲ್ಲ. ವಿತರಕರಿಗೆ ಮಾರಾಟವಾದ ಬಳಿಕ ಹಣ ಕೊಡುವುದಾಗಿ ಕಲಾವಿದರು ಮತ್ತು ತಂತ್ರಜ್ಞರಿಗೆ ಭರವಸೆ ಕೊಟ್ಟಿದ್ದರು. ಚಿತ್ರ ಈಗ ಶತದಿನೋತ್ಸವದ ಸಂಭ್ರಮದಲ್ಲಿದೆ. ಹೀಗಿದ್ದೂ ದಿನೇಶ್ ಗಾಂಧಿ ಬಾಕಿ ಹಣದ ಮಾತನ್ನೇ ಮರೆದಿದ್ದಾರೆ ಎಂಬುದು ಚಿತ್ರತಂಡದ ದೂರು. ಸುದೀಪ್ ಗೂ ಸಂಭಾವನೆ ಹಣ ಬಾಕಿ ಇದೆ ಎಂಬ ಮಾತು ಕೇಳಿಬಂದಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)