Don't Miss!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿನಯ ಚಕ್ರವರ್ತಿ ಸುದೀಪ್ ಗೆ ಎಂಎಲ್ಸಿ ಸೀಟು?
20-05-2012ಕ್ಕೆ ನಟ ಪ್ರಣಯರಾಜ ಡಾ.ಶ್ರೀನಾಥ್ ಅವರ ಎಂಎಲ್ಸಿ ಅಧಿಕಾರವಧಿ ಮುಗಿದಿದೆ. ಖಾಲಿ ಉಳಿದಿರುವ ಸ್ಥಾನ ತುಂಬಲು ಸಿನಿಮಾ ಕ್ಷೇತ್ರದಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ. ಕೇಳಿಬರುತ್ತಿರುವ ಸಿನೆಮಾ ತಾರೆಗಳ ಹೆಸರುಗಳಲ್ಲಿ ಸುದೀಪ್ ಮುಂಚೂಣಿಯಲ್ಲಿದೆ.
ಪಟ್ಟಿಯಲ್ಲಿ ಹಲವಾರು ಹೆಸರುಗಳು ಕೇಳಿಬಂದಿವೆ. ಮುಖ್ಯವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧ, ನಟ ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್, ಮುಖ್ಯಮಂತ್ರಿ ಚಂದ್ರು, ಮದನ್ ಪಟೇಲ್ ಹೆಸರುಗಳು ಚಾಲ್ತಿಯಲ್ಲಿವೆ.
ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಸುದೀಪ್ ಸೂಕ್ತ ಎಂದು ಭಾವಿಸಲಾಗಿದೆ. ಇನ್ನು ಸೀನಿಯಾರಿಟಿ ದೃಷ್ಠಿಯಲ್ಲಿ ನೋಡುವುದಾದರೆ ದ್ವಾರಕೀಶ್ ಅವರನ್ನು ನಾಮಿನೇಟ್ ಮಾಡಬಹುದು. ಇನ್ನು ಸಾಂಸ್ಕೃತಿಕವಾಗಿ ಕೇಳಿಬರುತ್ತಿರುವ ಹೆಸರು ನಟ, ನಿರ್ದೇಶಕ, ನಿರ್ಮಾಪಕ ಮದನ್ ಪಟೇಲ್.
ಒಟ್ಟಾರೆಯಾಗಿ ಯಾರನ್ನು ಎಂಎಲ್ಸಿ ಸೀಟಿಗೆ ನಾಮಿನೇಟ್ ಮಾಡಬೇಕು ಎಂಬುದು ಬಿಜೆಪಿ ಪಾಳಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ತಾರಾ ಹಾಗೂ ಮುಖ್ಯಮಂತ್ರಿ ಚಂದ್ರು ಅವರಿಗೆ ಈಗಾಗಲೆ ಅವರದೇ ಆದ ಜವಾಬ್ದಾರಿಗಳಿವೆ. ಹಾಗಾಗಿ ಸುದೀಪ್ ಅವರ ಆಯ್ಕೆ ಬಹುತೇಕ ಸುಗಮ ಎನ್ನಲಾಗಿದೆ.
ಈ ಹಿಂದೊಮ್ಮೆ ಸುದೀಪ್ 'ಸಿನಿಮಾ ಜಗತ್ತು ಸಾಕಾಗಿದೆ ನಿವೃತ್ತಿ ಘೋಷಿಸುತ್ತೇನೆ' ಎಂದು ಟ್ವೀಟಿಸಿದ್ದೇ ತಡ ಜನ ಏನೇನೋ ಮಾತನಾಡಿಕೊಳ್ಳಲು ಶುರು ಮಾಡಿದರು. ಅವರೇನು ನಿವೃತ್ತಿ ಘೋಷಿಸಿ ಹಿಮಾಲಯಕ್ಕೆ ಹೋಗುತ್ತೇನೆ ಎಂದೇನು ಹೇಳಿರಲಿಲ್ಲ. ಆದರೂ ಜನ ರಾಜಕೀಯಕ್ಕೆ ಸೇರುತ್ತಾರೆ ಎಂದೇ ಭಾವಿಸಿದ್ದರು.
ಆದರೆ ಅವರು ಅಂದುಕೊಂಡಂತೆ ಏನೂ ಆಗಲಿಲ್ಲ. ಸುದೀಪ್ ತಮ್ಮ ಪಾಡಿಗೆ ತಾವು ಚಿತ್ರಗಳಲ್ಲಿ ತೊಡಗಿಕೊಂಡರು. ಅತ್ತ ಜೆಡಿಎಸ್ ಇತ್ತ ಬಿಜೆಪಿ ಇನ್ನೊಂದು ಕಡೆ ಕಾಂಗ್ರೆಸ್ ಸುದೀಪ್ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಇಳಿಸುವ ವ್ಯರ್ಥ ಕಸರತ್ತ ವಿಫಲವಾಗಿದ್ದವು.
ಸದ್ಯಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಡುವ ಆಲೋಚನೆ ಇಲ್ಲ. ರಾಜಕೀಯದಲ್ಲಿ ತನ್ನದೇ ಆದಂತಹ ಸಾಮಾಜಿಕ ಕಾಳಜಿ ಇರಬೇಕು. ಅದೆಲ್ಲಾ ತಮಗೆ ಈಗ ಸಾಧ್ಯವಾಗುವುದಿಲ್ಲ. ಮುಂದೆ ನೋಡಣ. ಆದರೆ ಸದ್ಯಕ್ಕಂತೂ ರಾಜಕೀಯ ಪ್ರವೇಶ ಇಲ್ಲ ಎಂದು ಗೋಣು ಆಡಿಸಿದ್ದರು. ಈಗ ಕಾಲ ಕೂಡಿಬಂದಿದೆಯಾ? (ಏಜೆನ್ಸೀಸ್)