Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಣ್ಣಗಾದ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ
ಈ ವರ್ಷದ ಬಲು ವಿವಾದಿತ ಹಾಗೂ ಅಷ್ಟೇ ಚರ್ಚಾಸ್ಪದ ಸಿನಿಮಾ ಎಂದರೆ 'ನೀರ್ ದೋಸೆ'. ಈ ದೋಸೆ ತಣ್ಣಗಾದರೂ ಬಿಸಿಬಿಸಿ ಸುದ್ದಿಗಳು ಮಾತ್ರ ನಿರಂತರ ಬರುತ್ತಲೇ ಇವೆ. ಹಾಗಾಗಿ ಈ 'ನೀರ್ ದೋಸೆ' ಸೀದು ಹೋಗದಂತೆ ನೋಡುಕೊಂಡು ಬಂದಿರುವುದು ಒಂದು ವಿಶೇಷ.
ಇದೀಗ
ಮತ್ತೊಮ್ಮೆ
'ದೋಸೆ'ಯನ್ನು
ಬಿಸಿ
ಮಾಡುವ
ಸಮಯ
ಬಂದಿದೆ.
ಲಕ್ಕಿ
ಸ್ಟಾರ್
ರಮ್ಯಾ
ಬಿಟ್ಟು
ಹೋದ
'ನೀರ್
ದೋಸೆ'
ಈಗ
ಮತ್ತೆ
ರಾಗಿಣಿ
ದ್ವಿವೇದಿ
ಪ್ಲೇಟ್
ಗೆ
ರವಾನೆಯಾಗುತ್ತಿದೆ.
ಚಿತ್ರದ
ನಿರ್ದೇಶಕ
ವಿಜಯ್
ಪ್ರಸಾದ್
ಅವರು
ರಾಗಿಣಿ
ಕೈಗೆ
ನೀರ್
ದೋಸೆ
ಕೊಡಲು
ಮುಂದಾಗಿದ್ದಾರೆ
ಎನ್ನುತ್ತವೆ
ಮೂಲಗಳು.
ರಮ್ಯಾ ಅವರು ನೀರ್ ದೋಸೆ ಶೂಟಿಂಗ್ ಗೂ ಹಾಜರಾಗಿದ್ದರು. ಬಳಿಕೆ ತಮಗೆ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ಚಿತ್ರದಿಂದ ಹಿಂದೆ ಸರಿದಿದ್ದರು. ಬಳಿಕ ಫಿಲಂ ಚೇಂಬರ್ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸಲು ನಾನಾ ಕಸರತ್ತುಗಳನ್ನು ಮಾಡಿದರೂ ಸಾಧ್ಯವಾಗಲಿಲ್ಲ.
ರಮ್ಯಾ ಅವರಿಗೆ ಅಡ್ವಾನ್ಸ್ ಹಣವನ್ನೂ ಕೊಡಲಾಗಿತ್ತಂತೆ. ಜೊತೆಗೆ ಕಾಸ್ಟ್ಯೂಮ್ ಡಿಸೈನ್ ಗೆಂದೇ ಲಕ್ಷಾಂತರ ದುಡ್ಡು ಪೋಲಾಗಿತ್ತು. ಈ ಎಲ್ಲಾ ನಷ್ಟವನ್ನೂ ಸರಿದೂಗಿಸಿಕೊಳ್ಳಲು ಸಾಧ್ಯವಾಗದೆ 'ನೀರ್ ದೋಸೆ' ಹುಳಿ ದೋಸೆಯಾಗಿದ್ದು ಗೊತ್ತೇ ಇದೆ.
ಇದೀಗ ರಾಗಿಣಿ ಅವರನ್ನು ಕರೆತರಲು ಚಿತ್ರತಂಡ ಮುಂದಾಗಿದೆ. ಆದರೆ ರಾಗಿಣಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ನೀರ್ ದೋಸೆ ಮೆಲ್ಲಲು ರಾಗಿಣಿ ಬಿಸಿಬಿಸಿ ತುಪ್ಪ ಸವರಲೂಬಹುದು ಅಥವಾ ತಿರಸ್ಕರಿಸಲೂ ಬಹುದು ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)