Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಲೈಗರ್' ಸೋಲಿನ ಬಳಿಕ ಪುರಿ ಜಗನ್ನಾಥ್ ನಿರ್ದೇಶನ ಮಾಡೋದ್ಯಾರಿಗೆ? ಟಾಲಿವುಡ್ 3 ಸ್ಟಾರ್ಗಳು ಯಾರು?
ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ಸಿನಿಮಾ ಸೆಟ್ಟೇರಿದಾಗ ನಿರೀಕ್ಷೆಯೇನು ಕಮ್ಮಿಯಿರಲಿಲ್ಲ. ಈ ಜೋಡಿಸ ಬಾಕ್ಸಾಫೀಸ್ನಲ್ಲಿ ಏನೋ ಸದ್ದು ಮಾಡುತ್ತೆ ಅಂತ ಭವಿಷ್ಯ ನುಡಿದವರು ಅದೆಷ್ಟೊ ಮಂದಿ. ಆದರೆ, ಬಿಡುಗಡೆ ಬಳಿಕ ಆ ಎಲ್ಲಾ ಲೆಕ್ಕಾಚಾರಗಳೂ ತಲೆ ಕೆಳಗಾಗಿದ್ದವು.
'ಲೈಗರ್' ಪುರಿ ಜಗನ್ನಾಥ್ ವೃತ್ತಿ ಬದುಕಿನ ಅತ್ಯಂತ ಕೆಟ್ಟ ಸಿನಿಮಾ ಅಂತ ಅನಿಸಿಕೊಂಡಿದೆ. ಹೀಗಾಗಿ ವಿಜಯ್ ದೇವರಕೊಂಡ ಜೊತೆ ಮಾಡಬೇಕಿದ್ದ ಮತ್ತೊಂದು ಸಿನಿಮಾ ಅಲ್ಲಿಗೆ ಮೊಟಕುಗೊಳಿಸಲಾಗಿದೆ.
'ಲೈಗರ್' ಸೋಲಿನಿಂದ ನಂಬಿದವರು ದೂರಾದರು: ಚಿರಂಜೀವಿ ಎದುರು ಪುರಿ ಜಗನ್ನಾಥ್ ಭಾವುಕ
ಒಂದು ಕಾಲದಲ್ಲಿ ಪುರಿ ಜಗನ್ನಾಥ್ ಸಿನಿಮಾ ಅಂದ್ರೆ, ಬಾಕ್ಸಾಫೀಸ್ನಲ್ಲಿ ಬ್ಲಾಕ್ಬಸ್ಟರ್ ಆಗೋದು ಪಕ್ಕಾ ಅಂತಿದ್ದರು. ತನ್ನ ಸಿನಿಮಾದ ಹೀರೊಗಳನ್ನು ರಗಡ್ ಲುಕ್ನಲ್ಲಿ ತೋರಿಸಿ ಮಾಸ್ ಸಿನಿಮಾ ನೀಡುತ್ತಿದ್ದರು. ಅದೇ ನಿರ್ದೇಶಕ ಸೋಲಿನ ಸುಳಿಗೆ ಸಿಲುಕಿದ್ದಾರೆ. ಆದ್ರೀಗ ಮೂವರು ಹೀರೊಗಳಲ್ಲಿ ಒಬ್ಬರಿಗೆ ಪುರಿ ಜಗನ್ನಾಥ್ ಮುಂದಿನ ಸಿನಿಮಾ ಮಾಡುತ್ತಾರೆ ಅನ್ನೋ ಗುಸುಗುಸು ಟಾಲಿವುಡ್ನಲ್ಲಿ ಕೇಳಿ ಬರುತ್ತಿದೆ.
ಪುರಿ ಜಗನ್ನಾಥ್ ಮುಂದಿನ ಸಿನಿಮಾ ಯಾರಿಗೆ?
ಹೀನಾಯ ಸೋಲಿನ ಬಳಿಕ ಪುರಿ ಜಗನ್ನಾಥ್ ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಮೂವರು ಹೀರೊಗಳ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಟಾಲಿವುಡ್ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಪುರಿ ಜಗನ್ನಾಥ್ ತಮ್ಮ ಮುಂದಿನ ಸಿನಿಮಾಗೆ ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅಥವಾ ಮೆಗಾ ಪವರ್ಸ್ಟಾರ್ ರಾಮ್ ಚರಣ್ಗೆ ಅಪ್ರೋಚ್ ಮಾಡಲಿದ್ದಾರೆ. ಈ ಇಬ್ಬರು ನಟರಲ್ಲಿ ಒಬ್ಬರು ಪುರಿ ಸಿನಿಮಾ ಒಪ್ಪಿಕೊಳ್ಳಬಹುದು ಎಂದೂ ಸುದ್ದಿ ಹಬ್ಬಿದೆ. ಆದರೆ, ಅಧಿಕೃತವಾಗಿ ಯಾವುದೂ ಹೊರಬಿದ್ದಿಲ್ಲ.
ಸಂಭಾವನೆ ಹಣವನ್ನು ನಿರ್ಮಾಪಕರಿಗೆ ವಾಪಸ್ ಕೊಟ್ಟ ವಿಜಯ್ ದೇವರಕೊಂಡ!
ಯುವ ನಟನ ಮೇಲೂ ಪುರಿ ಕಣ್ಣು
ಟಾಲಿವುಡ್ನಲ್ಲಿ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಯುವ ನಟನ ಮೇಲೂ ಪುರಿ ಜಗನ್ನಾಥ್ ಕಣ್ಣಿಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆ ನಟ ಮತ್ಯಾರೂ ಅಲ್ಲ ವಿಶ್ವಕ್ ಸೇನ್. ಈ ಯುವ ನಟ ಟಾಲಿವುಡ್ನಲ್ಲಿ ವಿಭಿನ್ನ ಸಿನಿಮಾಗಳನ್ನು ನೀಡುವ ನಟ. ಈ ನಟನಿಗೂ ಮಾಸ್ ಡೈರೆಕ್ಟರ್ ಅಗತ್ಯವಿದೆ. ಹಾಗಾಗಿ ವಿಶ್ವಕ್ ಸೇನ್ ಕೂಡ ಈ ಸಿನಿಮಾವನ್ನು ಒಪ್ಪಿಕೊಳ್ಳಬಹುದು ಎಂದು ಅಂದಾಜಿಸಲಾಗುತ್ತಿದೆ.
ಪುರಿಗೆ ಭರವಸೆ ಕೊಟ್ಟ ಚಿರಂಜೀವಿ!
ಪುರಿ ಜಗನ್ನಾಥ್ ಹಾಗೂ ಚಿರಂಜೀವಿ ಇಬ್ಬರೂ ಈ ಹಿಂದೆನೇ ಒಂದು ಸಿನಿಮಾ ಮಾಡಬೇಕಿತ್ತು. ಅದುವೇ 'ಆಟೋ ಜಾನಿ'. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಇತ್ತೀಚೆಗೆ 'ಗಾಡ್ ಫಾದರ್' ಸಿನಿಮಾದ ಪ್ರಚಾರದ ವೇಳೆ ಪುರಿ ಜಗನ್ನಾಥ್ಗೆ ಮೆಗಾಸ್ಟಾರ್ ಚಿರಂಜೀವಿ ಮತ್ತೆ ಆ ಸಿನಿಮಾ ಬಗ್ಗೆ ಕೇಳಿದ್ದರು. " ಆಟೋ ಜಾನಿ ಸಿನಿಮಾವನ್ನು ಅಲ್ಲಿಗೆ ಕೈ ಬಿಟ್ಟಿದ್ದೇನೆ. ಅದಕ್ಕಿಂತ ಇನ್ನೂ ಅದ್ಭುತವಾದ ಕಥೆ ಮೇಲೆ ಕೆಲಸ ಮಾಡುತ್ತಿದ್ದೇನೆ." ಎಂದು ಪುರಿ ಜಗನ್ನಾಥ್ ಹೇಳಿದ್ದರು. ಆಗ ಚಿರಂಜೀವಿ ಒಟ್ಟಿಗೆ ಸಿನಿಮಾ ಮಾಡುವ ಭರವಸೆ ನೀಡಿದ್ದರು.
'ಒಟ್ಟಿಗೆ ಸಿನಿಮಾ ಮಾಡೋಣ'
ಪುರಿ ಜಗನ್ನಾಥ್ ಜೊತೆ ಮಾತಾಡುವಾಗ ಮೆಗಾ ಸ್ಟಾರ್ ಚಿರಂಜೀವಿ ಭರವಸೆಯನ್ನು ನೀಡಿದ್ದಾರೆ. " ಯಾವಾಗ ಬೇಕಿದ್ದರೂ ಒಟ್ಟಿಗೆ ಕೆಲಸ ಮಾಡೋಣ. ನಿಮಗೆ ಯಾವಾಗಲೂ ಸ್ವಾಗತ. ಬೇರೆಯೊಂದು ಕಥೆಯೊಂದಿಗೆ ಬನ್ನಿ ಚರ್ಚೆ ಮಾಡೋಣ" ಅಂತ ಚಿರಂಜೀವಿ ನಿರ್ದೇಶಕ ಪುರಿ ಜಗನ್ನಾಥ್ಗೆ ಭರವಸೆ ನೀಡಿದ್ದಾರೆ. ಸದ್ಯದಲ್ಲೇ ಪುರಿ ಜಗನ್ನಾಥ್ ಮತ್ತೆ ಹೊಸ ಸಿನಿಮಾಗೆ ಕೈ ಹಾಕುವ ಎಲ್ಲಾ ಸಾಧ್ಯತೆಗಳೂ ಇವೆ.