Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಿಸ್ಸಿಂಗ್ ನಟಿ' ಅಂಜಲಿ ಸುತ್ತ ಮತ್ತೊಂದು ವಿವಾದ
ತಮಿಳು ನಿರ್ದೇಶಕ ಕಲಾಂಜಿಯಂ ನಿರ್ದೇಶಿಸುತ್ತಿರುವ 'ಊರು ಸುಟ್ರಿ ಪುರಾಣಂ' ಎಂಬ ಚಿತ್ರದಲ್ಲಿ ಅಂಜಲಿ ನಾಯಕಿ. ಆದರೆ ಈಕೆ ಚಿತ್ರೀಕರಣಕ್ಕೆ ಹಾಜರಾಗದೆ ಕೈಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಂಜಲಿ ವಿರುದ್ಧ ದಕ್ಷಿಣ ಭಾರತ ಕಲಾವಿದರ ಸಂಘದಲ್ಲಿ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.
"ತಮ್ಮ ಚಿತ್ರದ ಕಥಾವಸ್ತು ನಾಯಕಿ ಪ್ರಧಾನವಾದದ್ದು. ಚಿತ್ರೀಕರಣ ಪ್ರಾರಂಭವಾದಂದಿನಿಂದ ಅಂಜಲಿ 15 ದಿನ ಅಭಿನಯಿಸಿದ್ದಾರೆ. ಇನ್ನೂ ಕೊಂಚ ಭಾಗದ ಶೂಟಿಂಗ್ ಬಾಕಿ ಇದೆ. ಆದರೆ ಅಂಜಲಿ ಕೈಕೊಟ್ಟಿದ್ದಾರೆ. ಅವರಿಲ್ಲದೆ ಚಿತ್ರೀಕರಣ ಪೂರ್ಣವಾಗುವುದಿಲ್ಲ. ಈಗ ಶೂಟಿಂಗ್ ಕ್ಯಾನ್ಸಲ್ ಮಾಡಬೇಕಾದ ಪರಿಸ್ಥಿತಿ ಒದಗಿಬಂದಿದೆ" ಎಂದಿದ್ದಾರೆ ನಿರ್ದೇಶಕ.
ಅಂಜಲಿ ಅವರನ್ನು ಫೋನ್ ಮೂಲಕ ಸಂಪರ್ಕಿಸಲಾಯಿತು. ಆದರೆ ಅವರು ನಾಟ್ ರೀಚಬಲ್. ಚಿತ್ರಕ್ಕಾಗಿ ಈಗಾಗಲೆ ರು.40 ಲಕ್ಷ ಖರ್ಚು ಮಾಡಿದ್ದೇವೆ. ಕಲಾವಿದರ ಸಂಘ, ನಿರ್ದೇಶಕರು ಹಾಗೂ ನಿರ್ಮಾಪಕರ ಸಂಘದಲ್ಲೂ ಅಂಜಲಿ ವಿರುದ್ಧ ದೂರು ದಾಖಲಿಸುತ್ತಿದ್ದೇನೆ ಎಂದಿದ್ದಾರೆ ಕಲಂಜಿಯಮ್.
ಇತ್ತೀಚೆಗೆ ತೆರೆಕಂಡ ಕಂಡ ತೆಲುಗಿನ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಚಿತ್ರದ ಮೂಲಕ ಅಂಜಲಿ ಜನಪ್ರಿಯವಾಗಿದ್ದರು. ತನ್ನ ಮಲತಾಯಿ ಭಾರತಿದೇವಿ ಹಾಗೂ ನಿರ್ದೇಶಕ ಕಲಾಂಜಿಯಂ ಎಂಬುವವರು ತಮ್ಮನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಅಂಜಲಿ ಆರೋಪಿಸಿದ್ದರು.
ತನ್ನ ಮಲತಾಯಿ ಭಾರತಿದೇವಿ ಅವರು ತಮ್ಮನ್ನು ಎಟಿಎಂ ಮೆಷಿನ್ ನಂತೆ ಬಳಸಿಕೊಳ್ಳುತ್ತಿದ್ದಾರೆ. ಓವರ್ ಟೈಮ್ ಕೆಲಸ ಮಾಡುವಂತೆ ತನ್ನ ಮೇಲೆ ಒತ್ತಡ ತರುತ್ತಿದ್ದಾರೆ. ತಾನು ಸಂಪಾದಿಸಿದ ದುಡ್ಡಿನಲ್ಲಿ ಆಕೆ ಲಗ್ಜುರಿ ಜೀವನ ಸಾಗಿಸುತ್ತಿದ್ದಾರೆ ಎಂಬ ಆರೋಪಗಳನ್ನು ಅಂಜಲಿ ಮಾಡಿದ್ದರು.