Don't Miss!
- News Lok Sabha election 2024: ಟಿಡಿಪಿ ಅಭ್ಯರ್ಥಿ 5,785 ಕೋಟಿ ಒಡೆಯ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸರಿಗೆ ತೋರಿಸಿದ ಮೇಲಷ್ಟೇ ಈ ಚಿತ್ರ ರಿಲೀಸ್
ಸ್ಯಾಂಡಲ್ ವುಡ್ ನಲ್ಲಿ ವಿವಾದಗಳನ್ನೇ ಮೈಗೆ ಮೆತ್ತಿಕೊಂಡ ಸಿನಿಮಾ ಅದು. ಟೈಟಲ್ ಇಟ್ಟ ದಿನದಿಂದಲೇ ವಿವಾದಗಳು ಶುರುವಾದವು. ವಿವಾದಗಳು ದೂರವಾಗಿದ್ರೆ ಚಿತ್ರ ಐದಾರು ತಿಂಗಳ ಹಿಂದೇನೇ ರಿಲೀಸ್ ಆಗಬೇಕಿತ್ತು. ಚಿತ್ರದ ಹೆಸರು 'ಕರ್ನಾಟಕ ಅಯೋಧ್ಯೆಪುರಂ'.
ಈ ಚಿತ್ರದ ನಿರ್ದೇಶಕ ಲವ ಅವರಿಗೆ ಈಗ ಮತ್ತೊಂದು ಹೊಸ ತಲೆನೋವು ಶುರುವಾಗಿದೆ. ಜೋಶ್ ರಾಕೇಶ್-ಪ್ಯಾಟೆ ಹುಡ್ಗಿ ನಯನಾ ಜೋಡಿಯಾಗಿರೋ ಸಿನಿಮಾದಲ್ಲಿ ಹಲವು ವಿವಾದಾತ್ಮಕ ಅಂಶಗಳಿವೆ ಅನ್ನೋ ಕಾರಣಕ್ಕೆ ಚಿತ್ರಕ್ಕೆ ಕನ್ನಡ ಕಲ್ಪತರು ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. [ಅಯೋಧ್ಯೆಪುರಂ ಶೀರ್ಷಿಕೆಗೆ ಮುಸ್ಲಿಂರ ವಿರೋಧ]
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದಿತ್ತು. ಕರ್ನಾಟಕ ಅಯೋಧ್ಯೆಪುರಂ ಚಿತ್ರದ ನಿರ್ದೇಶಕರು ವಿವಾದಾತ್ಮಕ ಪೋಸ್ಟರ್ ಗಳನ್ನ ಜಾಹೀರಾತುಗಳಲ್ಲಿ ನೀಡೋದಿಲ್ಲ ಅಂತ ಒಪ್ಪಿಕೊಂಡು ಚಿತ್ರವನ್ನ ಈ ವರ್ಷದಲ್ಲೇ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ರು.
ಆದರೆ ಈಗ ವಾಣಿಜ್ಯ ಮಂಡಳಿ ಚಿತ್ರವನ್ನ ಪೊಲೀಸ್ ಅಧಿಕಾರಿಗಳಿಗೆ ತೋರಿಸಬೇಕು ಅನ್ನೋ ಸೂಚನೆಯನ್ನ ನಿರ್ದೇಶಕರಿಗೆ ನೀಡಿದೆಯಂತೆ. ಇದೇನಪ್ಪ ಹೊಸ ತರ್ಲೇ ಅಂತ ನಿರ್ದೇಶಕರು ತಲೆ ಕೆಡಿಸಿಕೊಂಡಿದ್ದಾರೆ.