Don't Miss!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಪೂಜಾ ಗಾಂಧಿ ಕಿರಿಕಿರಿ ಪಿರಿಪಿರಿಗೆ ಜೈ ಹಿಂದ್
ಶಾಕ್ ಆದ ಪೂಜಾ ಗಾಂಧಿ ಹೇಳಿದ್ದೇನೆಂದರೆ, "ಶ್ರೀನಿವಾಸ್ ಅವರಿಗೆ ನಾನು ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದೆ. ದಂಡುಪಾಳ್ಯ ಚಿತ್ರದ ಪ್ರಚಾರ, ಯೂರೋಪ್, ದುಬೈ, ರಾಜಕೀಯ ಚಟುವಟಿಕೆಗಳು...ಹೀಗೆ ನಾನಾ ಕೆಲಸಗಳ ಕಾರಣ ಅವರಿಗೆ ಸ್ವಲ್ಪ ಸಮಯ ಕೇಳಿದ್ದೆ. ನನ್ನ ಡೇಟ್ಸ್ ನೋಡಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಎಂದು ಹೇಳಿದ್ದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳುವಂತೆ ವಿನಂತಿಸಿಕೊಂಡಿದ್ದೆ".
ಆದರೆ ಈಗ ಏಕಾಏಕಿ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಶ್ರೀನಿವಾಸ್ ಅವರ ಬಗ್ಗೆ ಬಹಳ ಬೇಸರವಾಯಿತು ಎಂದು ತಮ್ಮ ಅಸಮಾಧಾನವನ್ನು 'ಜೈ ಹಿಂದ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತೋಡಿಕೊಂಡರು. ಕನ್ನಡ ಚಿತ್ರರಂಗದಲ್ಲಿ ನನ್ನ ಬಗ್ಗೆ ಇದುವರೆಗೂ ಈ ರೀತಿಯ ದೂರು ಕೇಳಿಬಂದಿಲ್ಲ.
ನಾನು ಮಾಡಿದ ಎಲ್ಲಾ ಚಿತ್ರಗಳ ಪ್ರಚಾರಕ್ಕೆ ಹೋಗಿದ್ದೇನೆ. ಇದು ನನ್ನ ಚಿತ್ರ. ಮುಂದೆಯೂ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತೇನೆ. ಆದರೆ ಸುಮ್ಮನೆ ಹೀಗೆ ನನ್ನ ವಿರುದ್ಧ ದೂರು ಕೊಟ್ಟಿದ್ದು ಸರಿಯಲ್ಲ ಎಂದು ಅವರು ತಮ್ಮ ಬೇಸರ ಹೊರಹಾಕಿದರು.
ಇದೆಲ್ಲಾ ಆಗಿದ್ದು ಒಂದು ಸಣ್ಣ ತಪ್ಪಿನಿಂದ. ನಾನು ಒಂದು ಎಸ್ಎಂಎಸ್ ಕಳುಹಿಸಿದೆ. ಅದಕ್ಕೆ ಪೂಜಾ ಕಡೆಯಿಂದ ಉತ್ತರ ಬರಲಿಲ್ಲ. ಕರೆ ಮಾಡಿದಾಗ ಅವರು ಕೇರಳದಲ್ಲಿದ್ದಾರೆ ಎಂಬ ಉತ್ತರ ಸಿಕ್ಕಿತು. ನಾನು ತಪ್ಪಾಗಿ ಅರ್ಥ ಮಾಡಿಕೊಂಡು ಪ್ರಚಾರಕ್ಕೆ ಅವರು ಕೈಕೊಡುತ್ತಿದ್ದಾರೆ. ನಟಿ ಪೂಜಾಗಾಂಧಿ ನಾಟ್ ರೀಚಬಲ್ ಆಗಿದ್ದಾರೆ ಎಂದು ನಿರ್ಮಾಪಕರ ಸಂಘಕ್ಕೆ ಮೊರೆಹೋದೆ.
ದಯವಿಟ್ಟು ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ. ಇದೆಲ್ಲಾ ಆಗಿದ್ದು ನನ್ನ ತಪ್ಪಿನಿಂದಲೇ. ಏನೇ ಮಿಸ್ಟೇಕ್ ಆಗಿದ್ದರೂ ಅದು ನನ್ನಿಂದಲೇ ಎಂದು ಮೇಜರ್ ಶ್ರೀನಿವಾಸ್ ಪೂಜಾರ್ ಕೊನೆಯದಾಗಿ ವಿನಂತಿಸಿಕೊಳ್ಳುವ ಮೂಲಕ 'ಜೈ ಹಿಂದ್' ವಿವಾದಕ್ಕೆ ತೆರೆಬಿದ್ದಿದೆ. (ಏಜೆನ್ಸೀಸ್)