Don't Miss!
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಮ್ಮೆ ಮೋಹನ್ ಲಾಲ್; ಮುನಿರತ್ನ ದರ್ಭಾರ್
ಈ ಮೂವರು ತಮ್ಮ ಚಿತ್ರದಲ್ಲಿ ಇರಲೇಬೇಕು ಎಂದು ನಿರ್ಧರಿಸಿರುವ ಮುನಿರತ್ನ, ಮಿಕ್ಕಂತೆ ನಾಯಕ, ನಾಯಕಿ ಹಾಗೂ ತಂತ್ರಜ್ಞರ ಬಳಗದ ಗುಟ್ಟನ್ನು ಮಾಧ್ಯಮಕ್ಕೆ ಬಿಟ್ಟುಕೊಟ್ಟಿಲ್ಲ. ಮುನಿರತ್ನ ನಿರ್ಮಾಣದ ಚಿತ್ರ 'ಕಠಾರಿವೀರ ಸುರಸುಂದರಾಂಗಿ', ಯಶಸ್ವಿ 50 ದಿನಗಳನ್ನು ಪೂರೈಸಿ ಮುಂದಕ್ಕೆ ಹೆಜ್ಜೆಯಿಟ್ಟಿದೆ. ಈ ಚಿತ್ರವು 50 ದಿನಗಳಲ್ಲೇ ರು. 10 ಕೋಟಿಗಿಂತಲೂ ಹೆಚ್ಚು ಹಣ ವಾಪಸ್ ಪಡೆದಿದ್ದಾಗಿ ಮುನಿರತ್ನ ಹೇಳಿದ್ದಾರೆ.
ಬಿಬಿಎಂಪಿ ಕೌನ್ಸಿಲರ್ ಕೂಡ ಆಗಿರುವ ಮುನಿರತ್ನ ಅವರು ನಿರ್ಮಾಪಕರ ಸಂಘದ ಅಧ್ಯಕ್ಷರೂ ಹೌದು. ರಾಜಕೀಯ ಹಿನ್ನಲೆಯಿರುವ ಮುನಿರತ್ನರು ಸದ್ಯ ಕಾಂಗ್ರೆಸ್ ಪಕ್ಷದ ಮೆಂಬರ್ ಕೂಡ ಆಗಿದ್ದು ಮುಂಬರುವ ತಮ್ಮ ಚಿತ್ರದ ಕಥಾವಸ್ತು 'ರಾಜಕೀಯ' ಎಂದಿದ್ದಾರೆ. ಮುನಿರತ್ನರ ಚಿತ್ರದ ಕಥೆ 'ರಾಜಕೀಯ ಸಬ್ಜೆಕ್ಟ್' ಒಳಗೊಂಡಿರುವುದು ಸಾಕಷ್ಟು ಜನರ ಕುತೂಹಲ ಕೆರಳಿಸಿದೆ. ಚಿತ್ರ ಯಾವಾಗ ಪ್ರಾರಂಭ ಎಂಬ ಮಾಹಿತಿ ಸದ್ಯಕ್ಕಿಲ್ಲ.
ಮುನಿರತ್ನ ಏನೇ ಮಾಡಿದರೂ 'ಸ್ಪೆಷಲ್' ಆಗಿರುತ್ತೆ ಎಂಬುದು ಸದ್ಯಕ್ಕೆ ಚಾಲ್ತಿಯಲ್ಲಿರುವ ಮಾತು. ಅದಕ್ಕೆ ತಕ್ಕಂತೆ, ಮೋಹಲ್ ಲಾಲ್, ನಮಿತಾ ಹಾಗೂ ರಂಗಾಯಣ ರಘು ಕಾಂಬಿನೇಷನ್ ಈಗಾಗಲೇ ಸಿದ್ಧ ಮಾಡಿಕೊಂಡಿರುವ ಮುನಿರತ್ನ, ನಾಯಕ-ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಬಹುದೆಂಬ ಕುತೂಹಲ ಈಗ ಎಲ್ಲರಲ್ಲಿದೆ. ಆಮೇಲೆ ಮುನಿರತ್ನ ಮಾಡಬಹುದಾದ ಪ್ರಚಾರಕ್ಕೆ ಈಗಲೇ ಗಾಂಧಿನಗರ ಬೆಚ್ಚಿಬಿದ್ದಿದೆ. (ಒನ್ ಇಂಡಿಯಾ ಕನ್ನಡ)