Don't Miss!
- News ಕೊಳ್ಳೇಗಾಲ ಶಾಸಕರ ಕಾರು ಅಪಘಾತ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ
ಆರಂಭದಿಂದಲೂ 'ನೀರ್ ದೋಸೆ' ಚಿತ್ರಕ್ಕೆ ಯಾಕೋ ಏನೋ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಲೇ ಇವೆ. ಪ್ರೇಕ್ಷಕರು ಮಾತ್ರ 'ನೀರ್ ದೋಸೆ'ಯನ್ನು ನೆನೆದು ನೆನೆದು ಬಾಯಿ ಚಪ್ಪರಿಸುತ್ತಲೇ ಇದ್ದಾರೆ. ಇದೀಗ ಮತ್ತೆ 'ನೀರ್ ದೋಸೆ'ಗೆ ಮುಹೂರ್ತ ಕೂಡಿಬಂದಿದೆ.
ಈ ಚಿತ್ರದ ನಾಯಕಿ ಲಕ್ಕಿ ಸ್ಟಾರ್ ರಮ್ಯಾ ಲೋಕಸಭಾ ಚುನಾವಣೆಯಲ್ಲಿ ಬಿಜಿಯಾಗಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ತುಪ್ಪದ ಬೆಡಗಿ ರಾಗಿಣಿಯನ್ನು ಆಯ್ಕೆ ಮಾಡಲು ಚಿತ್ರತಂಡ ಮುಂದಾಗಿದೆ. ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಶೂಟಿಂಗ್ ಶೇ.60ರಷ್ಟು ಮುಗಿದಿದೆ. [ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು]
ನಿಮಗೆ ಗೊತ್ತಿದೆಯೋ ಇಲ್ವೋ ನಮಗೆ ಗೊತ್ತಿಲ್ಲ. 2013ರಲ್ಲಿ ಅತ್ಯಂತ ಹೆಚ್ಚು ಬಾರಿ ಕಾಂಟ್ರರ್ಸಿಗಳಿಗೆ ಸುದ್ದಿಯಾದ ಚಿತ್ರ ಅಂದ್ರೆ ಅದು 'ನೀರ್ ದೋಸೆ'. ವಿವಾದಗಳನ್ನೇ ಹೊದ್ದು ಮಲಗಿದ ಚಿತ್ರ ಅದು. ಆದರೆ ಯಾಕೋ ಚಿತ್ರ ವಿವಾದಗಳನ್ನ ಮಾತ್ರ ಅಲ್ಲ. ನಿಜವಾಗಿಯೂ ಕಂಬಳಿಯನ್ನ ಹೊದ್ದು ಮಲಗುತ್ತೆ ಅನ್ನಿಸ್ತಾ ಇದೆ.
ಒಂದು ಕಡೆ ರಮ್ಯಾ ಮೇಡಂ ನಾನು ಸಿನಿಮಾದ ಶೂಟಿಂಗ್ ಮುಗಿಸಿಕೊಡ್ತೀನಿ ಅಂದಿದ್ದಾರೆ. ಆದರೆ ನಿರ್ದೇಶಕ ವಿಜಯ ಪ್ರಸಾದ್ ಮಾತ್ರ ವಾಣಿಜ್ಯ ಮಂಡಳಿಯನ್ನ ನಾಲ್ಕು ಬಾರಿ ಅಲೆದು ಚಪ್ಪಲಿ ಸವೆಸಿಕೊಂಡಿದ್ದಾರೆ. ವಿವಾದ ಬಗೆಹರಿಸಿಕೊಳ್ಳೋಕೆ ವಾಣಿಜ್ಯ ಮಂಡಳಿಗೇನೇ ಮೆನೇಜರ್ ಕಳಿಸಿದ್ದ ರಮ್ಯಾ ಮೇಡಂ ಇನ್ನು ಶೂಟಿಂಗ್ ಗೆ ಬರ್ತಾರಾ ಅಂತ ನಿರ್ದೇಶಕರು ಕಾದಿದ್ದೇ ಬಂತು.