Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಿ ಸಂಸಾರದಲ್ಲಿ ಹುಳಿ ಹಿಂಡೋಕೆ ಹೊರಟ ರಿಪೋರ್ಟರ್
ಅಭಿಮಾನಿಗಳು ಪ್ರೀತಿಯಿಂದ 'ಕರಿಚಿರತೆ' ಎಂದೇ ಕರೆಯುವ ದುನಿಯಾ ವಿಜಯ್ ಸಂಸಾರವೇನೋ ಒಂದಾಗಿದೆ. ಇತ್ತೀಚೆಗಷ್ಟೇ ಎರಡು ವರ್ಷಗಳ ಅಂತರ ಕಡಿದುಕೊಂಡ ವಿಜಿ ಮತ್ತು ನಾಗರತ್ನ ದಂಪತಿ ಒಂದಾಗಿದ್ದಾರೆ. ಆದ್ರೆ ಈ ಗ್ಯಾಪಲ್ಲೇ ವಿಜಿ ಗರಂ ಆದ ವಿಷಯ ಹೊರಬಂದಿದೆ.
ಆದ್ರೆ ಹೆಂಡತಿ ವಿರುದ್ಧ ಅಲ್ಲ ಮಾಧ್ಯಮದ ರಿಪೋರ್ಟರ್ ಒಬ್ಬರ ವಿರುದ್ಧ. ವಿಜಿ ಡೈವೋರ್ಸ್ ಗೆ ಕೊಟ್ಟ ಬಲವಾದ ಕಾರಣ ತನ್ನ ತಂದೆ ತಾಯಿಯನ್ನ ಹೆಂಡತಿ ಸರಿಯಾಗಿ ನೋಡಿಕೊಳ್ತಿಲ್ಲ ಅನ್ನೋದು. ಆದರೆ ರಿಪೋರ್ಟ್ ಒಬ್ಬರು ಕೇಳಿದ ಪ್ರಶ್ನೆಗೆ ವಿಜಿ ಅಷ್ಟೇ ಅಲ್ಲ ಅಲ್ಲಿದ್ದವರನ್ನೆಲ್ಲಾ ಗಜಿಬಿಜಿ ಗೊಳಿಸಿತು. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]
ವಿಜಿ
ಮತ್ತು
ನಾಗರತ್ನ
ರಾಜಿಯಾದ
ನಂತರ
ವರದಿಗಾರರೊಬ್ಬರು,
"ನಿಮ್ಮ
ಹೆಂಡತಿ
ತಂದೆ
ತಾಯಿಯನ್ನ
ಸರಿಯಾಗಿ
ನೋಡಿಕೊಳ್ಳಲ್ಲ
ಅಂತ
ದೂರವಾದ್ರಿ
ಈಗ
ಒಂದಾಗಿದ್ದೀರಾ
ಇನ್ಮುಂದೆ
ಸರಿಯಾಗಿ
ನೋಡಿಕೊಳ್ತಾರೆ
ಅನ್ನೋ
ಭರವಸೆ
ಇದ್ಯಾ"
ಅಂತ
ಕೇಳಿದ್ದಾರೆ.
ಗಂಡ ಹೆಂಡತಿ ಒಂದಾಗಿರೋ ಟೈಮಲ್ಲಿ ತಾಯಿ ಪಕ್ಕದಲ್ಲೇ ಇರೋ ಟೈಮಲ್ಲಿ ಇದೆಂಥಾ ಪ್ರಶ್ನೆ. ಚೆನ್ನಾಗಿ ಆಗ್ತಿರೋ ಸಂಸಾರದಲ್ಲಿ ಮತ್ತೆ ಹುಳಿ ಹಿಂಡೋಕೆ ಹೊರಡ್ತಿದ್ದಾರೆ ಅಂತ ವಿಜಿ ಗರಂ ಆದ್ರಂತೆ. ಆಗಿದ್ರಲ್ಲೇನು ತಪ್ಪಿಲ್ಲ ಆದ್ರೆ ಸುದ್ದಿ ಸ್ವಲ್ಪ ನಿಧಾನಕ್ಕೆ ಹೊರಬಂದಿದೆ ಅಷ್ಟೇ.
'ಒಡೆದ ಮನಸ್ಸುಗಳು ಈಗಲಾದರೂ ಒಂದಾಗಿವೆಯಲ್ಲಾ'' ಅಂತ ದುನಿಯಾ ವಿಜಿ ಅಭಿಮಾನಿಗಳು ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. ಇತ್ತ ದುನಿಯಾ ವಿಜಿ ಮತ್ತು ನಾಗರತ್ನ ಕೂಡ ಸಿಹಿಹಂಚಿಕೊಂಡು ನಗುಮೊಗದಲ್ಲಿದ್ದಾಗ ಇದೆಂಥಾ ಪ್ರಶ್ನೆ ಎಂಬುದು ಮಾಧ್ಯಮ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.