Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರ 'ಮೈಸೂರು ಹುಲಿ'
ಮುಂಬರುವ ದಿನಗಳಲ್ಲಿ ಸ್ಯಾಂಡಲ್ ವುಡ್ ಮಾಸ್ ಮಹಾವೀರರು ಮತ್ತೊಂದು ಸುತ್ತಿನ ಕದನಕ್ಕೆ ಸಜ್ಜಾಗಲಿದ್ದಾರೆ. 'ರಾಜಾಹುಲಿ' ಅನ್ನೋ ಸಿನಿಮಾ ಗೆದ್ದ ನಂತರ 'ಹುಲಿ' ಅನ್ನೋ ಟೈಟಲ್ ನ ಭರಾಟೆ ವಾಣಿಜ್ಯ ಮಂಡಳಿಯಲ್ಲೂ ಸದ್ದು ಮಾಡ್ತಿದೆ.
ಏಪ್ರಿಲ್ ತಿಂಗಳಲ್ಲಿ ಕಿಚ್ಚ ಸುದೀಪ್ ಹಾಗೂ ಗಜಕೇಸರಿ ಕೃಷ್ಣ ಜೋಡಿಯ 'ಹೆಬ್ಬುಲಿ' ಸಿನಿಮಾ ಸೆಟ್ಟೇರಲಿದೆ. ಈ ಮೂಲಕ ಹೆಬ್ಬುಲಿ ಅನ್ನೋ ಟೈಟಲ್ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿದೆ. ಸುದೀಪ್ ಆರ್ಮಿ ಆಫೀಸರ್ ಆಗಿ ಸಾಹಸ ಮೆರೆಯೋ ಚಿತ್ರ ಹೆಬ್ಬುಲಿ. [ಯಶ್ 'ಮಾಸ್ಟರ್ ಪೀಸ್' ಶೂಟಿಂಗ್ ನಿಂತೋಯ್ತಾ?]
ಇನ್ನು 'ರಾಜಾಹುಲಿ' ನಿರ್ಮಾಣ ಮಾಡಿದ್ದ ಕೆ.ಮಂಜು ಯಶ್ ಗೊಂದು ಕಿಸ್ ಕೊಟ್ಟು ಮತ್ತೊಂದು ಸಿನಿಮಾ ಯಶ್ ಜೊತೆ ಮಾಡ್ತೀನಿ ಅಂದಿದ್ರು. ಕೆ ಮಂಜು ಈಗ 'ಮೈಸೂರು ಹುಲಿ' ಅನ್ನೋ ಟೈಟಲ್ ಮೂಲಕ ಯಶ್ ಸಿನಿಮಾ ಮಾಡೋಕೆ ತಯಾರಿ ಮಾಡ್ತಿದ್ದಾರೆ.
ಮೈಸೂರು ಹುಲಿ ಸಿನಿಮಾಗೆ ಸದ್ಯ ಮಾಸ್ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ ಕೆ ಮಂಜು. ಬಹುಶಃ 'ರಾಜಾಹುಲಿ' ನಿರ್ದೇಶಕ ಗುರುದೇಶಪಾಂಡೆರಿಂದಲೇ ಆಕ್ಷನ್ ಕಟ್ ಹೇಳಿಸುವ ಸಾಧ್ಯತೆ ಹೆಚ್ಚು ಅಂತ ಹೇಳಲಾಗ್ತಿದೆ.
ಇನ್ನು ಮತ್ತೊಬ್ಬ ಮಾಸ್ ಮಹಾವೀರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆ ಮಂಡ್ಯ ಅನ್ನೋ ಸಿನಿಮಾ ಮಾಡಿದ್ರು. ಈಗ ಮಂಡ್ಯ ಹುಲಿ ಅನ್ನೋ ಟೈಟಲನ್ನ ನಿರ್ಮಾಪಕರೊಬ್ಬರು ದರ್ಶನ್ ರಿಗಾಗಿ ತೆಗೆದಿಟ್ಟಿದ್ದಾರೆ. ಈ ಮೂರು ಹುಲಿಗಳು ಸ್ಯಾಂಡಲ್ ವುಡ್ ನಲ್ಲಿ ಗರ್ಜಿಸೋ ದಿನಗಳು ದೂರವಿಲ್ಲ.