Don't Miss!
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೈಡಿಗ್ ಹೋಗೋ ಯಶ್ ಅಂದ್ರಾ ಎಸ್ ನಾರಾಯಣ್?
ಇತ್ತೀಚೆಗೆ 'ರಾಕಿಂಗ್ ಸ್ಟಾರ್' ಯಶ್ಗೆ ಹೋಲುವಂತಹಾ ಒಂದು ಒಳ್ಳೆಯ ಕಥೆ ಮಾಡಿಕೊಂಡು 'ಕಲಾ ಸಾಮ್ರಾಟ್' ಎಸ್ ನಾರಾಯಣ್ ಕಥೆ ಕೇಳಿ ಕಾಲ್ಶೀಟ್ ಕೊಡುವಂತೆ ಸಂಪರ್ಕಿಸಿದ್ದಾರೆ. ಸದ್ಯ ಎರಡರಿಂದ ಮೂರು ವರ್ಷಗಳಿಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಯಶ್ ನೊಡೋಣ ಇರಿ ಸಾರ್ ಅಂದಿದ್ದಾರೆ.
ನನಗೆ ಹಾಗೆಲ್ಲ 'ಕಾಲ್ಶೀಟ್ ಕಷ್ಟ ಆಗಲ್ಲ' ಅಂತ ಹೇಳ್ತಾರೆ ಅಂದುಕೊಂಡಿದ್ದ ಎಸ್ ನಾರಾಯಣ್ರಿಗೆ, ಯಶ್ ಹಾಕಿದ ಡೈಲಾಗ್ ಯಾಕೋ ಕಷ್ಟ ಅನ್ನಿಸಿದೆ. ಇದರಿಂದ ನಾರಾಯಣ್ ಹೊಸಬರ ಸಿನಿಮಾ ನಿರ್ದೇಶನ ಮಾಡೋಕೆ ಒಪ್ಪಿಕೊಂಡಿದ್ದಾರೆ. ಆ ಸಿನಿಮಾದ ಜಾಹೀರಾತಿನಲ್ಲಿ ಸೈಡ್ಗೆ ಹೋಗೋ ರಾಕಿಂಗ್ ಅಣ್ಣ ಡಾನ್ಸಲ್ ಕಿಂಗ್' ಅನ್ನೋ ಲೈನ್ ಬರೆಸಿದ್ದಾರೆ. ಹೀಗಂತ ಇವತ್ತಿನ ಪತ್ರಿಕೆಗಳ ಜಾಹಿರಾತು ನೋಡಿ ಚಿತ್ರಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದಾರೆ. [ಯಾರು ಅತ್ಯುತ್ತಮ ನಟ: ಯಶ್ ಅಥವಾ ಪುನೀತ್?]
ನಿಜಕ್ಕೂ ಎಸ್ ನಾರಾಯಣ್ ಯಶ್ ವಿರುದ್ಧ ತಿರುಗಿ ಬಿದ್ದಿದ್ದಾರಾ? ಯಶ್ ಅವರು ಎಸ್ ನಾರಾಯಣ್ರಿಗೆ ಕಾಲ್ಶೀಟ್ ಕೊಡೋಕೆ ನೋ ಅಂದ್ರಾ? ಇದು ಸದ್ಯದ ಪ್ರಶ್ನೆ. ಆದರೆ ಇವತ್ತು ರಾಜ್ಯದ ಪ್ರಮುಖ ಪತ್ರಿಕೆಯೊಂದರಲ್ಲಿ ಕಾಣಿಸಿಕೊಂಡಿರುವ ಜಾಹೀರಾತಿನಲ್ಲಿ ಜೆ ಡಿ' ಎನ್ನುವ ಸಿನಿಮಾ ಕಲಾಸಾಮ್ರಾಟ್ ಎಸ್ ನಾರಾಯಣ್ರ 50ನೇ ಸಿನಿಮಾ ಅಂತ ಕಾಣಿಸಿಕೊಂಡಿದೆ.
ಡಾನ್ ಎಂಟ್ರಿ ಎನ್ನುವ ಟ್ಯಾಗ್ಲೈನ್ ಕೊಟ್ಟಿರುವ ಚಿತ್ರದ ಮುಹೂರ್ತ ಜೂನ್ 23ರಂದು, ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇನ್ನು ಚಿತ್ರಕ್ಕೆ 'ಹಾರ್ಟ್ ಅಟ್ಯಾಕ್ ಮೂವಿ' ಎನ್ನುವ ಕಿಕ್ಕರ್ ಇಟ್ಟಿದ್ದು, ಮೇಲಿರುವ ಡೈಲಾಗ್ ಮಾತ್ರ ಯಶ್ ಅಭಿಮಾನಿಗಳ ಹಾರ್ಟ್ಗೇ ಅಟ್ಯಾಕ್ ಮಾಡಿದಂತಿದೆ!
ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಲಿದ್ದಾರೆ. ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ರಚಿಸಿದ್ದಾರೆ. ಈ ಜಟಾಪಟಿಗಳೇನೇ ಇರಲಿ, ಯಶ್ ಮತ್ತು ಎಸ್ ನಾರಾಯಣ್ ಇಬ್ಬರೂ ಸೇರಿ ಒಂದು ಮಹೋನ್ನತ ಚಿತ್ರ ನೀಡಲಿ. [ವೆಂಕಟ್ ವಿರುದ್ಧ ಚಾಟಿ ಬೀಸಿದ ನಿರ್ದೇಶಕ ಎಸ್ ನಾರಾಯಣ್]