Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ ಜೊತೆ ಸಂಜಯ್ ದತ್ ಚಿತ್ರ
ಬಾಲಿವುಡ್ ನಟ ಸಂಜಯ್ ದತ್ ಕನ್ನಡಕ್ಕೆ ಬರಲಿದ್ದಾರೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಸುಳಿದಾಡುತ್ತಿದೆ. ಸಂಜಯ್ ದತ್ ಅವರನ್ನು ಕನ್ನಡಕ್ಕೆ ಕರೆಯುತ್ತಿರುವ ಚಿತ್ರದ ಹೆಸರು 'ಚಕ್ರವರ್ತಿ'. ದುನಿಯಾ ವಿಜಯ್ ನಾಯಕತ್ವದ ಈ ಚಿತ್ರವನ್ನು ಯಶಸ್ವಿ ಚಿತ್ರ ಸಾರಥಿಯ ಸಂಭಾಷಣೆಕಾರ ಚಿಂತನ್ ನಿರ್ದೇಶಿಸಲಿದ್ದಾರೆ. ಸದ್ಯದಲ್ಲೇ ಚಕ್ರವರ್ತಿ ಚಿತ್ರ ಸೆಟ್ಟೇರಲಿದೆ.
ದುನಿಯಾ ವಿಜಯ್ ಎದುರು ಖಳನಟರಾಗಿ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕರೆತರುವ ಪ್ರಯತ್ನ ಒಂದು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ಸಂಜಯ್ ದತ್ ಮ್ಯಾನೇಜರ್ ಜತೆ ಚಕ್ರವರ್ತಿ ಚಿತ್ರದ ನಿರ್ಮಾಪಕರಾದ ಪ್ರಸಾದ್ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಆ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಆದರೆ ಬರಬಹುದೆಂಬ ಆಸೆ ಹಾಗೂ ಪ್ರಯತ್ನ ಎರಡೂ ಮುಂದುವರಿದಿದೆ.
ಇತ್ತೀಚಿಗಷ್ಟೇ ಅಣ್ಣಾ ಬಾಂಡ್ ಚಿತ್ರದಲ್ಲಿ ಬಾಲಿವುಡ್ ನಟ ಜಾಕಿಶ್ರಾಫ್ ಮಿಂಚಿದ್ದರು. ಈಗ ಸಂಜಯ್ ದತ್ ಅವರನ್ನು ಕರೆದುತರುವ ಪ್ರಯತ್ನ ನಡೆಯುತ್ತಿದೆ. ಆಶ್ಚರ್ಯವೆಂದರೆ ಅಣ್ಣಾಬಾಂಡ್ ನಲ್ಲಿ ಜಾಕಿ ಶ್ರಾಫ್ ಮಾಡಿದಂತಹ ಪಾತ್ರವೇ, ಚಕ್ರವರ್ತಿ ಚಿತ್ರದಲ್ಲಿ ಸಂಜಯ್ ದತ್ ಪಾಲಿಗಿದೆ. ಸಂಜಯ್ ಒಪ್ಪುತ್ತಾರಾ ಎಂಬುದು ಸದ್ಯದ ಪ್ರಶ್ನೆ!
ಹಿಂದಿಯ 'ಅಗ್ನಿಪಥ್' ಚಿತ್ರದಲ್ಲಿನ ಸಂಜಯ್ ದತ್ ಅಭಿನಯ ನೋಡಿ ನಿರ್ಮಾಪಕ ಪ್ರಸಾದ್ ಚಕಿತರಾಗಿದ್ದಾರೆ. ಹೀಗಾಗಿ ತಮ್ಮ ನಿರ್ಮಾಣದ ಚಕ್ರವರ್ತಿಗೆ ಸಂಜಯ್ ದತ್ ಅವರೇ ಸೂಕ್ತ ಆಯ್ಕೆ ಎಂಬುದು ಪ್ರಸಾದ್ ಅಂಬೋಣ. ಸಂಜಯ್ ದತ್ ಭಾಗದ ಸಂಪೂರ್ಣ ಚಿತ್ರೀಕರಣವನ್ನು ದುಬೈನಲ್ಲಿ ನಡೆಸಲು (ಸಂಜೂ ಬಾಬಾ ಒಪ್ಪಿದರೆ! )ನಿರ್ದೇಶಕ ಚಿಂತನ್ ಚಿಂತನೆ ನಡೆಸಿದ್ದಾರೆ.
ಸದ್ಯಕ್ಕೆ ಸಂಜಯ್ ದತ್ ಮಲೇಶ್ಯಾದಲ್ಲಿದ್ದಾರೆ. ಭಾರತಕ್ಕೆ ಅವರು ಬಂದ ನಂತರ ಈ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ. "ಸದ್ಯಕ್ಕೆ ನಾವು ಸಂಜಯ್ ದತ್ ಅವರನ್ನೇ ಆ ಪಾತ್ರಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ" ಎಂದಿದ್ದಾರೆ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕ ಎನಿಸಲಿರುವ ಚಿಂತನ್.
ಸಂಜಯ್ ದತ್ 'ಸಾಧ್ಯವಿಲ್ಲ' ಅಂದುಬಿಟ್ಟರೆ ನಂತರದ ಆಯ್ಕೆಯಾಗಿ ಕಮಲ್ ಹಾಸನ್ ಎಂದಿದ್ದಾರೆ ಚಿಂತನ್. ಚಕ್ರವರ್ತಿ ಚಿತ್ರಕ್ಕೆ ನಾಯಕಿ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಸದ್ಯಕ್ಕೆ ಕೇಳಿಬರುತ್ತಿರುವ ಹೆಸರು ಪ್ರಿಯಾಮಣಿ. ನಾಯಕ್ ವಿಜಯ್ ಅವರಿಗಂತೂ ಸಂಜಯ್ ದತ್ ಬರಬಹುದೆಂಬ ಸುದ್ದಿಯೇ ಸಖತ್ ಖುಷಿ ನೀಡಿದೆಯಂತೆ. ಇಷ್ಟಾದ ಮೇಲೂ ಕಟ್ಟಕಡೆಗೆ ಮೂಡುವ ಪ್ರಶ್ನೆ, 'ಸಂಜಯ್ ದತ್ ಕನ್ನಡಕ್ಕೆ ಬರುತ್ತಾರಾ?' (ಒನ್ ಇಂಡಿಯಾ ಕನ್ನಡ)