Don't Miss!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೀಣಾ ಮಲಿಕ್ ತುಟಿ ಕಚ್ಚಿದ ಅಕ್ಷಯ್; ಮುಂದೇನು ಗತಿ?
ಇತ್ತೀಚಿಗಷ್ಟೇ 'ಎ' ಸರ್ಟಿಫಿಕೇಟ್ ಚಿತ್ರಗಳನ್ನು ಟಿವಿಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಸೆನ್ಸಾರ್ ಮಂಡಳಿ ನಿರ್ಬಂಧ ವಿಧಿಸಿದೆ. ಈ ಹೇಳಿಕೆಯ ಬೆನ್ನಲ್ಲೇ ಅಚ್ಚರಿಯ ಸುದ್ದಿಯೊಂದು ಗಾಂಧಿನಗರದಲ್ಲಿ ಸುತ್ತತ್ತಿದೆ. ಅದು ತೀರಾ ಇತ್ತಿಚಿಗೆ ಶೂಟಿಂಗ್ ಮುಗಿಸಿರುವ ವೀಣಾ ಮಲಿಕ್ ಹಾಗೂ ಅಕ್ಷಯ್ ಜೋಡಿ ಚಿತ್ರ ಕನ್ನಡದ 'ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರಕ್ಕೆ ಸಂಬಂಧಿಸಿದ್ದು. ಅದರಲ್ಲಿ 'ಎ' ಸರ್ಟಿಫಿಕೇಟ್ ಗ್ಯಾರಂಟಿ ಎಂಬಂಥ ಕಿಸ್ ದೃಶ್ಯವಿದ ಎಂಬುದು ಸುತ್ತುತ್ತಿರುವ ಸುದ್ದಿ.
ಸುದ್ದಿಯೆಂದರೆ, ಚಿತ್ರದ ನಾಯಕಿ ಪಾಕಿಸ್ತಾನದ ನಟಿ, ಸೆಕ್ಸ್ ಬಾಂಬ್ ವೀಣಾ ಮಲಿಕ್ ತುಟಿಗೆ ನಟ ಅಕ್ಷಯ್ ತಮ್ಮ ತುಟಿ ಸೇರಿಸಿ ಗಾಢವಾಗಿ ಚುಂಬಿಸಿದ್ದಾರೆ. ಈ ಮೂಲಕ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ 'ಗಂಗಾ ಕಾವೇರಿ' ನಟ ಅಕ್ಷಯ್! ಕನ್ನಡದ 'ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದ ನಿರ್ಮಾಪಕರಾಗಿರುವ ವೆಂಕಟಪ್ಪ ಅವರ ಮಗನಾಗಿರುವ ಅಕ್ಷಯ್, ಈ ಚಿತ್ರಕ್ಕೆ ನಾಯಕ ಕೂಡ.
'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಎಂಬ ಹೆಸರಿನ ಚಿತ್ರದಲ್ಲಿ ಚಿತ್ರದ ನಾಯಕ, ನಾಯಕಿಗೆ ಮುತ್ತು ಕೊಡುವುದು ಮಹಾ ಅಪರಾಧವೇ ಎಂಬ ಪ್ರಶ್ನೆಯನ್ನು ಗಾಂಧಿನಗರದ ಮೂಲೆಯಲ್ಲಿರುವ ಕೆಲವರು ಕೇಳುತ್ತಿದ್ದಾರೆ. ಹಿಂದಿಯ 'ದಿ ಡರ್ಟಿ ಪಿಕ್ಚರ್' ರೀಮೇಕ್ ಅಲ್ಲದಿದ್ದರೂ ಅದರ ಭಾರೀ ಯಶಸ್ಸಿನಿಂದ ಪ್ರೇರಿತರಾಗಿ ಕನ್ನಡದಲ್ಲಿ ಪ್ರಾರಂಭಿಸಲಾಗಿರುವ ಚಿತ್ರವಿದು. ಅಂದಮೇಲೆ, ಇಷ್ಟೂ ಇರದಿದ್ದರೆ ಹೇಗೆ? ಇದನ್ನು ಅತಿರೇಕ ಎನ್ನುವುದಾದರೂ ಹೇಗೆ ಎಂಬುದು ಕೆಲವು ಗಾಂಧಿನಗರಿಗರ ಪ್ರಶ್ನೆ!
ಕೋಟಿ ಕೊಟ್ಟು ಪಾಕಿಸ್ತಾನದ ಬೋಲ್ಡ್ ಬೆಡಗಿಯೊಬ್ಬಳನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತಂದು ಸೀರೆ ಉಡಿಸಿ ಕಳಿಸಲು ಸಾಧ್ಯವೇ? ಕನ್ನಡ ಚಿತ್ರಗಳಲ್ಲಿ ಇಂತಹ ದೃಶ್ಯಗಳಿರುವುದು ಅಪರೂಪ. ಇದ್ದರೆ ಸೆನ್ಸಾರ್ ಮಂಡಳಿ ಅಂತಹ ಚಿತ್ರಗಳಿಗೆ 'ಎ' ಪ್ರಮಾಣಪತ್ರ ಕೊಟ್ಟಿರುತ್ತದೆ. ಗೊತ್ತಿದ್ದೂ ನೋಡಲು ಬರುವ ಪ್ರೇಕ್ಷಕರಂತೂ ಸಾಕಷ್ಟಿದ್ದಾರೆ. ಆದರೆ ಇತ್ತೀಚಿಗೆ ಇಂತಹ ಚಿತ್ರಗಳು ಟಿವಿಯಲ್ಲಿ ಕಾಣಿಸಿಕೊಳ್ಳಲಾಗದು ಎಂಬುದಷ್ಟೇ ನಿರ್ಮಾಪಕರನ್ನು ಕಂಗೆಡಿಸುವ ವಿಚಾರ.
ಆದರೆ, ಅದು ತಿಳಿದ ನಂತರವೂ ಅಂತಹ ಚಿತ್ರವನ್ನು ನಿರ್ಮಿಸುವ ಧೈರ್ಯವನ್ನು ನಿರ್ಮಾಪಕರು ಮಾಡಬಾರದು ಎಂದೇನಿಲ್ಲವಲ್ಲ! "ಕಿಸ್ ಕಥೆಗೆ ಪೂರಕವಾಗಿದೆ. ಎಲ್ಲೂ ಅಶ್ಲೀಲತೆಯಿಲ್ಲ" ಎಂದಿದ್ದಾರೆ ವೆಂಕಟ್ಟಪ್ಪ ಪುತ್ರರತ್ನ ಅಕ್ಷಯ್. ಆದರೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದರೆ? ಈ ಪ್ರಶ್ನೆಯನ್ನು ಅಕ್ಷಯ್ ಗೆ ಕೇಳಿದರೆ "ಕಿಸ್ ದೃಶ್ಯಕ್ಕೆ ಕತ್ತರಿ ಪ್ರಯೋಗಿಸಿದರೆ ನಾವು ಆಕ್ಷೇಪಿಸಿ 'ಟ್ರಿಬ್ಯೂನಲ್' ಮೊರೆ ಹೋಗುತ್ತೇವೆ" ಎಂದಿದ್ದಾರೆ. ಒಟ್ಟಿನಲ್ಲಿ ವೀಣಾ-ಅಕ್ಷಯ್ ಗಾಢ ಚುಂಬನ ತೆರೆಯ ಮೇಲೆ ಪ್ರೇಕ್ಷಕರ ಪಾಲಿಗಂತೂ ತಪ್ಪಲಾರದು. (ಏಜೆನ್ಸೀಸ್)