'ಚಾಂಪಿಯನ್' ಆಗಲು ಹೋಗಿ ತಾಚಿಕೊಂಡ 'ಪೈಪೋಟಿ'
ಕೆಲ ನಿರ್ದೇಶಕರು ಹಾಗೇನೇ ಒಂದು ಸಿನಿಮಾವನ್ನ ಅಂದುಕೊಂಡಂತೆ ಅಚ್ಚುಕಟ್ಟಾಗಿ ಮುಗಿಸೋ ಮೊದಲೇ ಮತ್ತೊಂದು ಸಿನಿಮಾವನ್ನ ಘೋಷಣೆ ಮಾಡಿಬಿಡ್ತಾರೆ. ಅದ್ರ ಉದ್ದೇಶ ಈ ಸಿನಿಮಾ ರಿಲೀಸ್ ಜೊತೆಗೆ ಇನ್ನೊಂದು ಸಿನಿಮಾ ಕೂಡ ನಿಧಾನಕ್ಕೆ ಜನ್ರ ಮನಸ್ಸಿಗೆ ಲಗ್ಗೆ ಇಡಲಿ, ಪ್ರಚಾರ ಪಡ್ಕೊಳ್ಳಬೇಕು ಅನ್ನೋ ಕಾರಣಕ್ಕೆ.
ಇದ್ರಿಂದಾಗಿ ರಿಲೀಸ್ ಆಗ್ಬೇಕಿರೋ ಸಿನಿಮಾವನ್ನ ನಿರ್ಮಾಪಕರ, ವಿತರಕರ ತಲೆಗೆ ಕಟ್ಟಿಬಿಡೋ ನಿರ್ದೇಶಕರು ಮತ್ತು ನಟ, ನಟಿಯರು ನಮಗೆ ಸಂಭಾವನೆ ಬಂದಿದೆ ನಮ್ಮ ಜವಾಬ್ದಾರಿ ಮುಗೀತು ಅನ್ನೋ ತರಹ ವರ್ತಿಸೋಕೆ ಶುರುಮಾಡಿಬಿಡ್ತಾರೆ. [ಲಂಡನ್ ನಲ್ಲಿ ಜಗ್ಗೇಶ್ ಪುತ್ರನ ವಿವಾಹ ಮಹೋತ್ಸವ]

ಇದಕ್ಕೊಂದು ಇತ್ತೀಚೆಗಿನ ಉದಾಹರಣೆ ಅಂದ್ರೆ ರಾಮ್ ನಾರಾಯಣ್ ನಿರ್ದೇಶನದ ಸಿನಿಮಾ 'ಪೈಪೋಟಿ' ಗೆಲುವಿನ ರುಚಿ ಕಾಣ್ತಿಲ್ಲ. ಚಿತ್ರಮಂದಿರಗಳ ಕಾದಾಟದ ನಡುವೆ ಚಿಂದಿಯಾದ ಚಿತ್ರ ರಿಲೀಸ್ ಗೂ ಮೊದಲೇ 'ಚಾಂಪಿಯನ್' ಅನ್ನೋ ಚಿತ್ರವನ್ನ ಅನೌನ್ಸ್ ಮಾಡ್ತು.

ಆದ್ರೆ ಎಷ್ಟೇ ಪ್ರಯತ್ನಪಟ್ಟರೂ 'ಪೈಪೋಟಿ'ಯಲ್ಲಿ ಚಿತ್ರತಂಡ ಅಷ್ಟಕ್ಕಷ್ಟೇ ಅನ್ನಿಸಿಕೊಳ್ತಿದೆ. ಪೈಪೋಟಿ ತಂಡ ಹಾಗೆ ಮಾಡ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಎಲ್ರೂ ಮಾಡೋದು ಇದೇ ಬೇಜವಾಬ್ದಾರಿ ಕೆಲಸ ಅದಕ್ಕೇ ಚಿತ್ರಗಳು ಸೋಲ್ತಿವೆ ಅನ್ನೋದು ಗಾಂಧಿನಗರದ ಗಲ್ಲಿ ಗಾಸಿಪ್.


Click it and Unblock the Notifications











