ಯೋಗರಾಜ್ ಭಟ್ ಆಕ್ಷನ್ ಕಟ್ ನಲ್ಲಿ ಸುದೀಪ್

ಆದರೆ ಈಗ ಕಿಚ್ಚ ಸುದೀಪ್ ನಾಯಕ ನಟ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲವಾದರೂ, ಭಟ್ಟರ ಮುಂದಿನ ಚಿತ್ರಕ್ಕೆ ಸುದೀಪ್ ನಾಯಕ ನಟ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಲೇಜು ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯುವುದರಲ್ಲಿ ಭಟ್ಟರು ಎತ್ತಿದ ಕೈ.
ಆದರೆ ಸುದೀಪ್ ಮಾಸ್ ಹೀರೋ. ಅವರಿಗೆ ಯಾವ ರೀತಿ ಕಥೆ ಹೆಣೆಯುತ್ತಾರೋ ಏನೋ ಎಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಎನ್ ಕುಮಾರ್ ಹಾಗೂ ಕರಿಸುಬ್ಬು ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಬಹುಶಃ ಇದೇ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ.
ಯೋಗರಾಜ್ ಭಟ್ಟರು ಸುದೀಪ್ ಜೊತೆ ಚಿತ್ರ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರಂಗ ಎಸ್ಸೆಸ್ಸೆಲ್ಸಿ ಚಿತ್ರವನ್ನು ಮಾಡಿದ್ದರು. ಈಗ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಇತ್ತಿಚೆಗೆ ಖಾಸಗಿ ವಾಹಿನಿಗಾಗಿ ಭಟ್ಟರು 'ಬಚ್ಚನ್' ಚಿತ್ರ ಕುರಿತು ಸುದೀಪ್ ಅವರನ್ನು ಸಂದರ್ಶಿಸಿದರು.
ನಿರ್ಮಾಪಕ ಎನ್ ಕುಮಾರ್ ಅವರು ಸುದೀಪ್ ಡೇಟ್ಸ್ ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರಂತೆ. ಈಗ ಕಾಲ ಕೂಡಿಬಂದಿದೆ ಎನ್ನಿಸುತ್ತದೆ. ಹಾಗಾಗಿ ಯಶ್ ಅವರನ್ನು ಕೈಬಿಟ್ಟು ಸುದೀಪ್ ಅವರಿಗೆ ಮಣೆಹಾಕಲು ಮುಂದಾಗಿದ್ದಾರೆ ಎನ್ನುತ್ತದೆ ಗಾಂಧಿನಗರದ ಇನ್ನೊಂದು ಪಂಗಡ.
ಇವೆಲ್ಲ ಬೆಳವಣಿಗೆಗಳನ್ನು ನೋಡಿದರೆ ಸುದೀಪ್ ಗೆ ಭಟ್ಟರು ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಅಂದಹಾಗೆ ಇದು ಏಪ್ರಿಲ್ ಫೂಲ್ ಸುದ್ದಿಯಂತೂ ಖಂಡಿತ ಆಗಲಿಕ್ಕಿಲ್ಲ. ಆದರೂ ಅಚ್ಚರಿಯಿಲ್ಲ! (ಏಜೆನ್ಸೀಸ್)


Click it and Unblock the Notifications











