Just In
Don't Miss!
- News
ಕೊರೊನಾ ಲಸಿಕೆಗಿದೆ ಎಕ್ಸ್ಪೈರಿ ಡೇಟ್, ಅಭಿಯಾನ ವೇಗಗೊಳಿಸಲು ಸಲಹೆ
- Automobiles
ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್
- Sports
ನ್ಯೂಜಿಲೆಂಡ್ ಕ್ರಿಕೆಟ್ನ 'ಸೂಪರ್ ಸ್ಮ್ಯಾಶ್' ಜೊತೆ ಡ್ರೀಮ್11 ಒಪ್ಪಂದ
- Lifestyle
ಹೊಟ್ಟೆಯ ಕೊಬ್ಬು ಕರಗಿಸಲು ನಿಮಗೆ ಸಹಾಯ ಮಾಡುತ್ತೆ ತೆಂಗಿನೆಣ್ಣೆ!!!
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Finance
ರಾಜಸ್ಥಾನದ ಈ ನಗರದಲ್ಲಿ ಲೀಟರ್ ಗೆ ರು. 100 ದಾಟಿತು ಬ್ರ್ಯಾಂಡೆಡ್ ಪೆಟ್ರೋಲ್ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತಕ್ಕೆ 'ಅವತಾರ್' ನಿರ್ದೇಶಕ ಜೇಮ್ಸ್ ಕೆಮೆರಾನ್
'ಟೈಟಾನಿಕ್', 'ದಿ ಟರ್ಮಿನೇಟರ್', 'ಏಲಿಯನ್ಸ್', 'ಅವತಾರ್'ನಂತಹ ಅದ್ಭುತ ಚಿತ್ರಗಳನ್ನು ಕೊಟ್ಟಂತಹ ಕೆನಡಿಯನ್ ನಿರ್ದೇಶಕ ಜೇಮ್ಸ್ ಕೆಮೆರಾನ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಬಂದಂತಹ ಇತ್ತೀಚಿನ 'ಅವತಾರ್' ಚಿತ್ರ ಅವರ ಹಿಂದಿನ 'ಟೈಟಾನಿಕ್' ಚಿತ್ರದ ಬಾಕ್ಸಾಫೀಸ್ ಗಳಿಕೆಯನ್ನು ಚಿಂದಿಮಾಡಿತ್ತು.
ಅಂದಹಾಗೆ ಯಾವುದೇ ಚಿತ್ರವನ್ನು ನಿರ್ದೇಶಿಸಲು ಕೆಮರಾನ್ ಭಾರತಕ್ಕೆ ಬರುತ್ತಿಲ್ಲ. ಮಹಾರಾಷ್ಟ್ರದ ಲವಾಸದಲ್ಲಿ ಡಿಸೆಂಬರ್ 10 ರಿಂದ 12ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಮನರಂಜನೆ ಬಗ್ಗೆ ಕೆಮರಾನ್ ಮಾತನಾಡಲಿದ್ದಾರೆ.
ಖ್ಯಾತ ಗಣಿತಜ್ಞ ಆನಂದ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ರೂಪಿಸಿದ ಸೂಪರ್ 30 ಕಾರ್ಯಕ್ರಮ ವಿಶ್ವದಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತ ಶಿಕ್ಷಣ ನೀಡಲು ಈ ಕಾರ್ಯಕ್ರಮ ನೆರವಾಗುತ್ತಿದೆ. ಕೆಮರಾನ್ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವ ಬಗ್ಗೆ ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ.