Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸ್ ಕುಟುಂಬದಿಂದ ಬಂದು ಹೀರೋ ಆದ ಹುಡುಗ
ಇತ್ತೀಚೆಗಷ್ಟೇ ಅನುಕ್ತ' ಎನ್ನುವ ಸಿನಿಮಾ ಟ್ರೇಲರ್ ಮೂಲಕ ಸುದ್ದಿ ಮಾಡಿತ್ತು. ಆದರೆ, ಚಿತ್ರ ತೆರೆ ಕಂಡಾಗ ಚಿತ್ರ ನೋಡಿದವರು ಯಾಕೋ ಪೂರ್ತಿಯಾಗಿ ಒಪ್ಪಿಕೊಳ್ಳಲಿಲ್ಲ. ಅವರು ಇಷ್ಟ ಪಟ್ಟಿದ್ದು ಚಿತ್ರದ ಮೇಕಿಂಗ್ ಮತ್ತು ನಾಯಕನನ್ನು ಮಾತ್ರ. ಆದರೆ ಅವೆರಡರಿಂದ ಚಿತ್ರ ಗೆಲ್ಲಲಿಲ್ಲ. ಆದರೆ ಕನ್ನಡಕ್ಕೆ ಮತ್ತೊಬ್ಬ ಆರಡಿ ಮೀರಿದ ನಾಯಕ ಸಿಕ್ಕಿದ್ದಂತೂ ನಿಜ.
ಆತನ ಹೆಸರು ಕಾರ್ತಿಕ್ ಅತ್ತಾವರ. ನಾಯಕನಾಗಿ ಮೊದಲ ಚಿತ್ರವಾದರೂ ಕಿರುತೆರೆ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡವರು ಇವರು. ಅನುಕ್ತ ಯಶಸ್ವಿಯಾಗಿದ್ದರೆ ಕಾರ್ತಿಕ್ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗುತ್ತಿತ್ತು. ಆದರೆ ಈಗ ಒಂದಷ್ಟು ಹೊಸ ಯೋಜನೆಗಳನ್ನು ತಲೆ ತುಂಬಿಸಿಕೊಂಡು ಹೊಸ ದಾರಿ ಹುಡುಕುವ ಪ್ರಯತ್ನದಲ್ಲಿದ್ದಾರೆ. ಅವರ ಯೋಜನೆ, ಯೋಚನೆಗಳ ಕುರಿತು ನಡೆಸಲಾದ ಮಾತು ಕತೆ ಇದು. ಮುಂದೆ ಓದಿ..
`ಅನುಕ್ತ' ನಿಮ್ಮ ಮೊದಲ ಚಿತ್ರವಾಗಿತ್ತೇ?
ಕನ್ನಡದಲ್ಲಿ ಹೌದು ಎಂದೇ ಹೇಳಬಹುದು. ಆದರೆ ‘ರಿಕ್ಷಾ ಡ್ರೈವರ್' ಎನ್ನುವ ತುಳು ಚಿತ್ರಕ್ಕೆ ನಿರ್ದೇಶಕ ಹ.ಸು ರಾಜಶೇಖರ್ ಅವರು ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದ್ದರು. ಹಾಗೆ ನಾಯಕನಾಗಿ ನಟಿಸಿದ ಚಿತ್ರಕ್ಕೆ ಶ್ರೇಷ್ಠ ಚಿತ್ರವಾಗಿ ರಾಜ್ಯ ಪ್ರಶಸ್ತಿಯೂ ದೊರಕಿತ್ತು. ಆದರೆ ಚಿತ್ರರಂಗದ ಸಂಪರ್ಕ ಅಥವಾ ಬಣ್ಣದ ಲೋಕದ ಯಾವುದೇ ಹಿನ್ನೆಲೆ ಇರದ ಕಾರಣ ಮತ್ತೆ ಚಿತ್ರರಂಗದಲ್ಲಿ ಮುಂದುವರಿಯುವ ಅವಕಾಶಗಳಿರಲಿಲ್ಲ. ಅದರ ಬಳಿಕ ಸಿಕ್ಕಂಥ ಅವಕಾಶವೇ 'ಅನುಕ್ತ'.
ನಿಮ್ಮ ಕೌಟುಂಬಿಕ ಹಿನ್ನೆಲೆ ಹೇಳಿ
ನಾನು ಪೊಲೀಸ್ ಕುಟುಂಬದಿಂದ ಬಂದವನು. ಯಾಕೆಂದರೆ ನನ್ನ ತಂದೆ ಕೃಷ್ಣ ಅತ್ತಾವರ ಮಂಗಳೂರಿನ ಕೊಟ್ಟಾರದಲ್ಲಿ ಲೋಕಾಯುಕ್ತದಲ್ಲಿ ವೃತ್ತಿಯಲ್ಲಿದ್ದವರು. ಬಳಿಕ ಪ್ರಮೋಶನ್ ಪಡೆದು ಸಬ್ ಇನ್ಸ್ಪೆಕ್ಟರ್ ಆಗಿ ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಆದರೆ ಏಕೈಕ ಪುತ್ರನಾದ ನನ್ನ ಆಸಕ್ತಿ ಮಾತ್ರ ಸಿನಿಮಾ ಕ್ಷೇತ್ರದಲ್ಲಿತ್ತು. ವಿಶೇಷ ಏನೆಂದರೆ ‘ಅನುಕ್ತ' ಚಿತ್ರದಲ್ಲಿ ನನಗೆ ಪೊಲೀಸ್ ತನಿಖಾಕಾರಿಯಾಗಿಯೇ ನಟಿಸುವ ಅವಕಾಶ ದೊರಕಿತ್ತು. ನನ್ನ ತಾಯಿಯ ಹೆಸರು ಸರಸ್ವತಿ. ತಂಗಿ ಕೃತ್ತಿಕಾ ವಿವಾಹವಾಗಿ ವಿದೇಶದಲ್ಲಿ ನೆಲೆಸಿದ್ದಾಳೆ.
ರಂಗಭೂಮಿ ಮತ್ತು ಸಿನಿಮಾ : ಒಂದೇ ನಾಣ್ಯದ ಎರಡು ಮುಖಗಳು
ಕಿರುತೆರೆಯಲ್ಲಿ ಕೂಡ ನೀವು ಒಂದಷ್ಟು ಗುರುತಿಸಿಕೊಂಡಿರುವ ಬಗ್ಗೆ?
'ರಿಕ್ಷಾ ಡ್ರೈವರ್' ಸಿನಿಮಾದಲ್ಲಿ ನಾನು ನಟಿಸಿದಾಗ ನನ್ನ ಕುರಿತಾಗಿ ಪತ್ರಕರ್ತೆಯೊಬ್ಬರು ಬರೆದ ಲೇಖನ ನೋಡಿಯೇ ‘ಯಶೋಧೆ' ಎನ್ನುವ ಕಿರುತೆರೆ ಧಾರಾವಾಹಿಗೆ ನಾಯಕರನ್ನಾಗಿಸಿದವರು ನಿರ್ದೇಶಕ ವಿನೋದ್ ದೊಂಡಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಸಾರವಾದ ಯಶಸ್ವಿ ಧಾರಾವಾಹಿಗೆ ಬಿಗ್ ಬಾಸ್ ಪ್ರವೇಶವಾಗುವ ಮೂಲಕ ರಾತ್ರಿ ಒಂಬತ್ತು ಗಂಟೆಯ ಸಮಯವನ್ನು ತೊರೆಯಬೇಕಾಗಿ ಬಂತು. ಆದರೆ ಮುಂದೆ ಹತ್ತು ಗಂಟೆಗೆ ಬದಲಾಯಿಸಬೇಕು ಎಂದಾಗ ನಿರ್ದೇಶಕರು ಆಸಕ್ತಿ ಕಳೆದುಕೊಂಡು, ಸಮಯ ಬದಲಾವಣೆಗಿಂತ ವೈಂಡಪ್ ಮಾಡೋದೇ ಬೆಟರ್ ಎಂದರು. ವಿನೋದ್ ಅವರೇ ನಿರ್ಮಾಪಕರು ಕೂಡ ಆಗಿರುವ ಕಾರಣ ಅವರು ‘ಯಶೋಧೆಗೆ ಇತಿಶ್ರೀ ಹಾಡಿದರು. ಹಾಗೆ ನಾನು ಮಂಗಳೂರಿಗೆ ವಾಪಾಸಾಗಬೇಕಾಗಿ ಬಂದಿತ್ತು. ಇದರ ನಡುವೆ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ ಪ್ರಶಂಸೆ ಕೂಡ ಪಡೆದುಕೊಂಡಿದ್ದೆ. ಅದು ನನ್ನ ಜೀವನದಲ್ಲಿ ಮರೆಯಲಾಗದ ಸಂದರ್ಭ.
ನಟನೆ, ನೃತ್ಯದ ಜೊತೆಗೆ ಕತೆಯನ್ನೂ ಬರೆಯುತ್ತೀರಿ. ಇದೆಲ್ಲ ಹೇಗೆ ಸಾಧ್ಯವಾಯಿತು?
ಮಂಗಳೂರಿನಲ್ಲಿ ಕಾರ್ತಿಕ್ ನನಗೆ ಯಶಸ್ಸು ಕೊಟ್ಟಂಥ ಚಿತ್ರ ‘ರಿಕ್ಷಾ ಡ್ರೈವರ್.' ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ಸಂತೋಷ ಕುಮಾರ್ ಕೊಂಚಾಡಿಯವರೊಂದಿಗೆ ಸೇರಿ ಒಂದು ಕತೆ ಬರೆಯಲು ಮುಂದಾದೆ. ಹಾಗೆ ಸೃಷ್ಟಿಯಾದ ಕತೆಯೇ ಅನುಕ್ತ! ನನಗೆ ನಿರ್ದೇಶನದಲ್ಲಿಯೂ ಆಸಕ್ತಿ ಇದ್ದು ಈಗಾಗಲೇ ಒಂದು ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ಅದರ ಹೆಸರು ಅನಮೋಲ್. ಹೌದು, ಅದೊಂದು ಹಿಂದಿ ಕಿರುಚಿತ್ರ. ಹದಿನೈದು ನಿಮಿಷಗಳ ಅವಧಿಯನ್ನು ಹೊಂದಿರುವ ಈ ಚಿತ್ರದಲ್ಲಿರುವ ವೃದ್ಧಾಶ್ರಮಕ್ಕೆ ಸಂಬಂಧಿಸಿದ ಕತೆಯಿದೆ. ಯುನಿವರ್ಸಲ್ ಸಬ್ಜೆಕ್ಟ್ ಗಮನಿಸಿದ ಸ್ನೇಹಿತರು ಚಿತ್ರವನ್ನು ಹಿಂದಿಯಲ್ಲಿ ತೆಗೆದರೆ ದೇಶದಾದ್ಯಂತ ಒಳ್ಳೆಯ ರೀಚ್ ಪಡೆಯುವ ಸಾಧ್ಯತೆ ಇದೆ ಎಂದರು. ಹಾಗಾಗಿ ಚಿತ್ರವನ್ನು ಹಿಂದಿಯಲ್ಲಿ ಮಾಡಿದ್ದೇನೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಆನಂದ್ ಆಡಿಯೋಗೆ 20 ವರ್ಷ : ಅತಿ ಹೆಚ್ಚು ಮಾರಾಟವಾದ ಕ್ಯಾಸೆಟ್ ಇದು!
ನಿಮ್ಮ ಮುಂದಿನ ಕನಸುಗಳೇನು?
ನನಗೆ ಸಿನಿಮಾ ಎಂದರೆ ನಟನೆ ಮಾತ್ರ ಕನಸಲ್ಲ. ಒಂದೊಳ್ಳೆಯ ಚಿತ್ರಕತೆಗೆ ತಂತ್ರಜ್ಞನಾಗಿ ಹಿಂದೆಯೇ ಇದ್ದು ಕೆಲಸ ಮಾಡುವುದಕ್ಕೂ ಸಿದ್ಧನಿದ್ದೇನೆ. ಸದ್ಯಕ್ಕೆ ಮಂಗಳೂರಿಗೆ ವಾಪಾಸಾಗಿದ್ದು ಕತೆ, ಚಿತ್ರಕತೆ ಮಾಡುತ್ತಿದ್ದೇನೆ.