Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೈರಲ್ ಮಾಡೋದಲ್ಲ, ಗಿಡ ನೆಟ್ಟರೆ ನಂಗೆ ಖುಷಿಯಾಗುತ್ತೆ - ನಿನಾದ್
''ನಾನು ಕಾಡಿನ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆದ್ರೆ, ಅದಕ್ಕೆ ಲೈಕ್ ಬಂದ್ರೆ, ಏನು ಪ್ರಯೋಜನ?. ಆ ವಿಡಿಯೋ ನೋಡಿ ಯಾರಾದರೂ ಬದಲಾದರೇ ನನಗೆ ಖುಷಿ ಆಗುತ್ತದೆ.'' ಎಂದು ನಿನಾದ್ ತನ್ನ ಮಾತುಗಳ ಮೂಲಕವೇ ಮನಸ್ಸು ಗೆದ್ದ ಹುಡುಗ.
ನಿನಾದ್ ಚಿತ್ರದುರ್ಗದ ಮಾತಿನ ಚತುರ. ಯಾವುದೇ ವಿಷಯ ನೀಡಿದರೂ ತುಂಬ ಚೆನ್ನಾಗಿ ಮಾತನಾಡುತ್ತಾನೆ. ತನ್ನ ಮಾತುಗಳ ಮೂಲಕ ಕರ್ನಾಟಕಕ್ಕೆ ಸಂದೇಶ ನೀಡುತ್ತಾನೆ. ''ನಮ್ಮ ಟ್ಯಾಲೆಂಟ್ ನೋಡಿ ಬೇರೆಯವರು ಚೆನ್ನಾಗಿ ಮಾಡುತ್ತೀಯಾ ಎಂದಾಗ ಖುಷಿ, ಹೆಮ್ಮೆ'' ಆಗುತ್ತದೆ ಅಂತ್ತಾನೆ ನಿನಾದ್.
'ಡ್ರಾಮಾ ಜೂನಿಯರ್'ನಲ್ಲಿ ಫೇಲ್, 'ಕನ್ನಡದ ಕಣ್ಮಣಿ'ಯಲ್ಲಿ ಫೈನಲಿಸ್ಟ್
ನಿನಾದ್ ಒಂದು ಸಂಚಿಕೆಯಲ್ಲಿ ಕಾಡಿನ ಬಗ್ಗೆ ಮಾತನಾಡಿದ್ದ. ಆ ಸಂಚಿಕೆ ಆತನಿಗೆ ಒಳ್ಳೆಯ ಹೆಸರು ನೀಡಿತ್ತು. ಈ ಬಗ್ಗೆ ಕೇಳಿದ್ದರೆ ನಿನಾದ್ ''ನನ್ನ ವಿಡಿಯೋ ವೈರಲ್ ಆಗುವುದಕ್ಕಿಂತ ಗಿಡ ನೆಟ್ಟರೆ ನನಗೆ ಖುಷಿ ಆಗುತ್ತದೆ'' ಎನ್ನುತ್ತಾನೆ.
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಮಣ್ಣಿನ ಮಗ ಈ ಪವನ್
ರಾಜಕಾರಣಿಗಳು ನೀಡುವ ಸಮಸ್ಯೆ, ಗಂಡು ಮಕ್ಕಳಿಗೆ ಹೆಚ್ಚು ಜವಾಬ್ದಾರಿ, ಕಾಡು ನಮ್ದಲ್ವ, ಕುಟುಂಬದಲ್ಲಿ ಮಗ ಹೆಚ್ಚು ಖುಷಿ ನೀಡುತ್ತಾನೆ, ನಿದ್ದೆ ಗೆಡಿಸುವಂತೆ ಮಾಡುವುದು ಕನಸು, ಮತದಾರ ಈ ವಿಷಯಗಳ ಬಗ್ಗೆ ನಿನಾದ್ ಮಾತನಾಡಿದ್ದಾನೆ.
''ಅರಣ್ಯ ಅಂದರೆ ನನಗೆ ಇಷ್ಟ. ಅದಕ್ಕೆ ನಾನು ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಆಸೆ. ಅದಕ್ಕೆ ಮುಂದೆ ಅರಣ್ಯ ಅಧಿಕಾರಿ ಆಗಬೇಕು ಎನ್ನುವುದು ನನ್ನ ಗುರಿ.'' ಅಂತಾನೆ ಈ ಪುಟ್ಟ ಬಾಲಕ.