ವೈರಲ್ ಮಾಡೋದಲ್ಲ, ಗಿಡ ನೆಟ್ಟರೆ ನಂಗೆ ಖುಷಿಯಾಗುತ್ತೆ - ನಿನಾದ್

''ನಾನು ಕಾಡಿನ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆದ್ರೆ, ಅದಕ್ಕೆ ಲೈಕ್ ಬಂದ್ರೆ, ಏನು ಪ್ರಯೋಜನ?. ಆ ವಿಡಿಯೋ ನೋಡಿ ಯಾರಾದರೂ ಬದಲಾದರೇ ನನಗೆ ಖುಷಿ ಆಗುತ್ತದೆ.'' ಎಂದು ನಿನಾದ್ ತನ್ನ ಮಾತುಗಳ ಮೂಲಕವೇ ಮನಸ್ಸು ಗೆದ್ದ ಹುಡುಗ.

ನಿನಾದ್ ಚಿತ್ರದುರ್ಗದ ಮಾತಿನ ಚತುರ. ಯಾವುದೇ ವಿಷಯ ನೀಡಿದರೂ ತುಂಬ ಚೆನ್ನಾಗಿ ಮಾತನಾಡುತ್ತಾನೆ. ತನ್ನ ಮಾತುಗಳ ಮೂಲಕ ಕರ್ನಾಟಕಕ್ಕೆ ಸಂದೇಶ ನೀಡುತ್ತಾನೆ. ''ನಮ್ಮ ಟ್ಯಾಲೆಂಟ್ ನೋಡಿ ಬೇರೆಯವರು ಚೆನ್ನಾಗಿ ಮಾಡುತ್ತೀಯಾ ಎಂದಾಗ ಖುಷಿ, ಹೆಮ್ಮೆ'' ಆಗುತ್ತದೆ ಅಂತ್ತಾನೆ ನಿನಾದ್.

kannadada kanmani contestant ninad interview

ನಿನಾದ್ ಒಂದು ಸಂಚಿಕೆಯಲ್ಲಿ ಕಾಡಿನ ಬಗ್ಗೆ ಮಾತನಾಡಿದ್ದ. ಆ ಸಂಚಿಕೆ ಆತನಿಗೆ ಒಳ್ಳೆಯ ಹೆಸರು ನೀಡಿತ್ತು. ಈ ಬಗ್ಗೆ ಕೇಳಿದ್ದರೆ ನಿನಾದ್ ''ನನ್ನ ವಿಡಿಯೋ ವೈರಲ್ ಆಗುವುದಕ್ಕಿಂತ ಗಿಡ ನೆಟ್ಟರೆ ನನಗೆ ಖುಷಿ ಆಗುತ್ತದೆ'' ಎನ್ನುತ್ತಾನೆ.

ರಾಜಕಾರಣಿಗಳು ನೀಡುವ ಸಮಸ್ಯೆ, ಗಂಡು ಮಕ್ಕಳಿಗೆ ಹೆಚ್ಚು ಜವಾಬ್ದಾರಿ, ಕಾಡು ನಮ್ದಲ್ವ, ಕುಟುಂಬದಲ್ಲಿ ಮಗ ಹೆಚ್ಚು ಖುಷಿ ನೀಡುತ್ತಾನೆ, ನಿದ್ದೆ ಗೆಡಿಸುವಂತೆ ಮಾಡುವುದು ಕನಸು, ಮತದಾರ ಈ ವಿಷಯಗಳ ಬಗ್ಗೆ ನಿನಾದ್ ಮಾತನಾಡಿದ್ದಾನೆ.

kannadada kanmani contestant ninad interview

''ಅರಣ್ಯ ಅಂದರೆ ನನಗೆ ಇಷ್ಟ. ಅದಕ್ಕೆ ನಾನು ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಆಸೆ. ಅದಕ್ಕೆ ಮುಂದೆ ಅರಣ್ಯ ಅಧಿಕಾರಿ ಆಗಬೇಕು ಎನ್ನುವುದು ನನ್ನ ಗುರಿ.'' ಅಂತಾನೆ ಈ ಪುಟ್ಟ ಬಾಲಕ.

More from Filmibeat

English summary
Zee kannada channel 'Kannadada Kanmani' contestant Ninad interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X