Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಮಣ್ಣಿನ ಮಗ ಈ ಪವನ್
ಸಾಧನೆ ಮಾಡಬೇಕು ಎನ್ನುವ ಹಠ ಇದ್ದರೇ, ಏನೇ ಕಷ್ಟ ಇದ್ದರೂ, ಬಡತನ ಇದ್ದರೂ ಅದನ್ನು ಮೀರಿ ಬೆಳೆಯಬಹುದು. ಈಗ ಆ ರೀತಿ ಸಾಧನೆ ಮಾಡಿ 'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಮಣ್ಣಿನ ಮಗ ಆಗಿದ್ದಾನೆ ಪವನ್.
ಪವನ್ ಜೀ ಕನ್ನಡ ವಾಹಿನಿಯ 'ಕನ್ನಡದ ಕಣ್ಮಣಿ' ಕಾರ್ಯಕ್ರಮ ಫೈನಲ್ ಹಂತಕ್ಕೆ ಬಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಎಮ್ಮೆಹಟ್ಟಿ ಎಂಬ ಸಣ್ಣ ಗ್ರಾಮದ ಹುಡುಗ ಇಂದು ಇಡೀ ಕರ್ನಾಟಕದ ತುಂಬ ಫೇಮಸ್ ಆಗಿದ್ದಾನೆ.
'ಡ್ರಾಮಾ ಜೂನಿಯರ್'ನಲ್ಲಿ ಫೇಲ್, 'ಕನ್ನಡದ ಕಣ್ಮಣಿ'ಯಲ್ಲಿ ಫೈನಲಿಸ್ಟ್
ಸರ್ಕಾರಿ ಶಾಲೆಯಲ್ಲಿ ಮಾಡುವ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದ ಪವನ್ ನನ್ನು ಆತನ ಶಾಲಾ ಶಿಕ್ಷಕಿ ಯಶೋಧ ಬೆಂಗಳೂರಿಗೆ 'ಕನ್ನಡ ಕಣ್ಮಣಿ' ಕಾರ್ಯಕ್ರಮಕ್ಕೆ ಕಳುಹಿಸುವ ತಯಾರಿ ಮಾಡುತ್ತಾರೆ ಆದರೆ, ಅದು ಸಾಧ್ಯ ಆಗುವುದಿಲ್ಲ. ನಂತರ ಚಿತ್ರದುರ್ಗದಲ್ಲಿ ನಡೆದ ಆಡಿಷನ್ ನಲ್ಲಿ ಪವನ್ ಆಯ್ಕೆ ಆಗುತ್ತಾನೆ. ಹೀಗೆ ಶುರುವಾದ ಆತನ ಜರ್ನಿ ಈಗ ಫೈನಲ್ ಹಂತದವರೆಗೆ ಕರೆದು ತಂದಿದೆ.
ಬಡ ರೈತನ ಕುಟುಂಬದಲ್ಲಿ ಹುಟ್ಟಿದ ಪವನ್ ತಾನು ಕೂಡ ಅಪ್ಪನ ಜೊತೆಗೆ ಕೆಲಸ ಮಾಡುತ್ತಾನೆ. ಆಗಾಗ ತರಕಾರಿ ಮಾರುತ್ತಾನೆ. ಹೊಲದಲ್ಲಿ ಕೆಲಸ ಮಾಡುವುದು ಮಾತ್ರವಲ್ಲ ಅದೇ ವಿಷಯವನ್ನು ಮೈಕ್ ಮುಂದೆ ಮಾತನಾಡಿ ಮಣ್ಣಿನ ಮಗ ಎಂಬ ಬಿರುದು ಪಡೆದಿದ್ದಾನೆ.
ಸಂದರ್ಶನ: ಬೇರೆ ಶೋಗಳು TRPಗೆ ಆದ್ರೆ, 'ಕನ್ನಡದ ಕಣ್ಮಣಿ' ಆತ್ಮತೃಪ್ತಿಗೆ
ತಂದೆ ತಾಯಿಯರೇ ಮಕ್ಕಳ ಯಶಸ್ಸಿಗೆ ಕಾರಣ, ರೈತರು, ಜಂಗ್ ಫುಡ್, ಕುಟುಂಬದ ಸಂತೋಷದಲ್ಲಿ ಮಗನ ಮಾತ್ರ, ಲೈನ್ ಮ್ಯಾನ್ ಹೀಗೆ ಎಲ್ಲ ವಿಷಯದ ಮೂಲಕ ಪವನ್ ಪಂಚ್ ಕೊಟ್ಟಿದ್ದಾರೆ.
''ನನ್ನ ಮೇಲೆ ಆಸೆ ಇಟ್ಟುಕೊಂಡ ಅಪ್ಪ, ಅಮ್ಮ ಹಾಗೂ ಕುಟುಂಬಕ್ಕೆ ಹೆಸರು ತರಬೇಕು.'' ಎಂಬುದು ಪವನ್ ಬದುಕಿನ ಗುರಿ.