ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
'ಕನ್ನಡದ ಕಣ್ಮಣಿ' ಮಾತಿನ ಕಾರ್ಯಕ್ರಮ. ಈ ಮಾತಿನ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಶೈಲಿಯ ಮಾತುಗಳನ್ನು ತುಂಬಿಸುವವರು ವರದ. ಈ ಹುಡುಗಿ ವೇದಿಕೆ ಏರಿದರು ಅಂದರೆ, ಸೆಂಚುರಿ ಹೊಡೆಯದೆ ವಾಪಸ್ ಹೋಗುವುದಿಲ್ಲ.
ಯಾವುದೇ ವಿಷಯ ನೀಡಿದರೂ, ಅದ್ಬುತವಾಗಿ ತಮ್ಮ ಉತ್ತರ ಕರ್ನಾಟಕದ ಮಾತುಗಳ ಮೂಲಕ ಗಮನ ಸೆಳೆಯುತ್ತಾರೆ. ತಪ್ಪು ಹಾದಿಯಲ್ಲಿ ನೆಡೆಯುವವರಿಗೆ ತಮ್ಮ ಮಾತಿನ ಮೂಲಕ ಚಾಟಿ ಏಟು ನೀಡಿದ್ದಾರೆ.
ಬಿಜಾಪುರದ ಹುಡುಗಿಯಾದ ವರದ ತನ್ನ ಊರಿನಲ್ಲಿ ನಡೆದ ಆಡಿಷನ್ ನಲ್ಲಿ ಆಯ್ಕೆ ಆಗಿ ಈಗ ಅಂತಿಮ ಹಂತಕ್ಕೆ ಬಂದಿದ್ದಾರೆ. ಮೊದಲ ಸಂಚಿಕೆಯಲ್ಲಿ ಈಕೆ ಮಾತನಾಡಿದ ಮೀಸಲಾತಿ ವಿಷಯ ದೊಡ್ಡ ಚರ್ಚೆ ಆಗಿತ್ತು.

ಮೀಸಲಾತಿ, ಹಾರ್ಡ್ ವರ್ಕ್, ಸರ್ಕಾರಕ್ಕೆ ಅನಗತ್ಯವಾಗಿ ದೂರುವುದು ಬೇಡ, ವಿಜ್ಞಾನದಿಂದ ಆಗುವ ಅನಾನುಕೂಲಗಳು, ಕನ್ನಡ ಉಳಿಸಿ, ಪೊಲೀಸ್ ಸರಳ ಮದುವೆ ಈ ವಿಷಯಗಳ ಬಗ್ಗೆ ವರದ ಕನ್ನಡದ ಕಣ್ಮಣಿಯಲ್ಲಿ ಮಾತನಾಡಿದ್ದಾರೆ.
ಒಂದು ವಿಷಯ ನೀಡಿದಾಗ ತನ್ನ ಪಾಯಿಂಟ್ ಜೊತೆಗೆ ಅಪ್ಪ, ಅಮ್ಮ, ಮಾಮನ ಸಹಾಯ ಪಡೆಯುತ್ತಾಳಂತೆ. ತನ್ನ ಮಾತಿನ ಜೊತೆಗೆ ಪಂಚ್, ಜೋಕ್ ಸೇರಿಸಲು ಪ್ರಯತ್ನ ಮಾಡುತ್ತಾಳಂತೆ. ಹಾಗಾಗಿ, ಅವರ ಮಾತು ಅಷ್ಟೊಂದು ಚೆನ್ನಾಗಿ ಬರುತ್ತಿದೆ.
ಕಾರ್ಯಕ್ರಮಲ್ಲಿ ಮೂರು ದೊಡ್ಡ ತೀರ್ಪುಗಾರರ ಮುಂದೆ ಮಾತನಾಡುವುದೇ ಖುಷಿ ನೀಡಿದೆಯಂತೆ. ಜೊತೆಗೆ ತಮ್ಮ
ಉತ್ತರ ಕರ್ನಾಟಕದಲ್ಲಿ ಭಾಷೆ, ರೊಟ್ಟಿ ವರದಗೆ ಬಹಳ ಇಷ್ಟವಂತೆ.
ಶಾಲೆಯ ಪ್ರತಿಭಾ ಕಾರಂಜಿಯ ಆಶು ಭಾಷಣ ಸ್ಪರ್ಧೆ ತನಗೆ ಈ ಹಂತಕ್ಕೆ ಬರಲು ಸಹಾಯ ಆಗಿದೆ ಎಂದರು ವರದ.


Click it and Unblock the Notifications











