Just In
Don't Miss!
- Sports
ಐಪಿಎಲ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್
- News
ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಲಯಾಳಂ ಗೆ ಹಾರಿದ ಕೆಜಿಎಫ್ ಗರುಡ: ಮೋಹನ್ಲಾಲ್ ಜೊತೆ ನಟನೆ
ಕೆಜಿಎಫ್ ಚಾಪ್ಟರ್ 1 ನಲ್ಲಿ ಹೀರೋ ರಾಕಿ ಭಾಯ್ ಯಶ್ ಎದುರು ಅಷ್ಟೇ ಖದರ್ ಆಗಿ ನಟಿಸಿದ್ದ ಗರುಡ ಖ್ಯಾತಿಯ ರಾಮಚಂದ್ರ ರಾಜು ಆ ನಂತರ ಸಖತ್ ಅವಕಾಶಗಳನ್ನು ದೋಚಿಕೊಳ್ಳುತ್ತಿದ್ದಾರೆ.
ಇದೀಗ ರಾಮಚಂದ್ರ ರಾಜು ಅಲಿಯಾಸ್ ಗರುಡ ರಾಮ್ ಅವರು ಮಲಯಾಳಂ ಗೆ ಹಾರಿದ್ದಾರೆ. ಮಲಯಾಳಂ ನ ಸೂಪರ್ ಸ್ಟಾರ್ ನಟನ ಎದುರು ವಿಲನ್ ಆಗಲಿದ್ದಾರೆ ಗರುಡ ರಾಮ್.
ಮಲಯಾಳಂ ನ ಸ್ಟಾರ್ ನಿರ್ದೇಶಕರಲ್ಲೊಬ್ಬರಾದ ಉನ್ನಿಕೃಷ್ಣನ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಮೋಹನ್ಲಾಲ್ ಎದುರು ಗರುಡ ರಾಮ್ ನಟಿಸಲಿದ್ದಾರೆ. ಸಿನಿಮಾದಲ್ಲಿ ಅವರದ್ದು ವಿಲನ್ ಪಾತ್ರ ಎನ್ನಲಾಗುತ್ತಿದೆ.
ಮೋಹನ್ಲಾಲ್-ಗರುಡ ರಾಮ್ ನಟಿಸುತ್ತಿರುವ ಈ ಸಿನಿಮಾಕ್ಕೆ 'ಅರಟ್ಟು' ಎಂದು ಹೆಸರಿಡಲಾಗಿದ್ದು. ಸಿನಿಮಾದ ಚಿತ್ರೀಕರಣ ಸಾಗಿದೆ. ಇದೇ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡತಿ ಶ್ರದ್ಧಾ ಶ್ರೀನಾಥ್ ಸಹ ನಟಿಸುತ್ತಿದ್ದಾರೆ.
'ಅರಟ್ಟು' ಆಕ್ಷನ್ ಸಿನಿಮಾ ಆಗಿದ್ದು, ನಾಯಕ ಪಾತ್ರಧಾರಿ ಮೋಹನ್ಲಾಲ್ ಪಟ್ಟಣದಿಂದ ಹಳ್ಳಿಯೊಂದಕ್ಕೆ ಒಂದು ಘನ ಉದ್ದೇಶ ಪೂರೈಸುವ ಸಲುವಾಗಿ ಹೋಗಿ, ಅಲ್ಲಿನ ಸ್ಥಳೀಯರೊಂದಿಗೆ ಹೋರಾಟಕ್ಕೆ ಇಳಿಯುವ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಸಾಕಷ್ಟು ಕಾಮಿಡಿ ದೃಶ್ಯಗಳು ಸಹ ಇವೆ ಎಂದಿದ್ದಾರೆ ನಿರ್ದೇಶಕ.