Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಯಲಲಿತಾ ಮನಗೆದ್ದಿದ್ದ ಬಹುಭಾಷಾ ಗಾಯಕಿ ಸಂಗೀತಾ ಸಜಿತ್ ನಿಧನ: ಕಂಬನಿ ಮಿಡಿದ ಚಿತ್ರರಂಗ
ಮಲಯಾಳಂ ಚಿತ್ರರಂಗದ ಸುಪ್ರಸಿದ್ಧ ಗಾಯಕಿ ಸಂಗೀತಾ ಸುಜಿತ್ ಅನಾರೋಗ್ಯದಿಂದ ಇಂದು( ಮೇ 222) ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಗಾಯಕಿ ಬಳಲುತ್ತಿದ್ದರು. ಸಂಗೀತಾ ಸಜಿತ್ ಅವರ ಸಹೋದರಿ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸಮಸ್ಯೆ ಉಲ್ಭಣಗೊಂಡಿದ್ದರಿಂದ ಇಂದು ( ಮೇ 22) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಂಗೀತಾ ಸಜಿತ್ ಇದೂವರೆಗೂ ಸುಮಾರು 200ಕ್ಕೂ ಅಧಿಕ ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ಹಾಡನ್ನು ಹಾಡಿದ್ದರೂ, ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಹಾಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಕನ್ನಡ ಭಾಷೆಯಲ್ಲೂ ಸಂಗೀತಾ ಸಜಿತ್ ಹಾಡಿದ್ದಾರೆ.
ಹಸಿರು ಡ್ರೆಸ್ನಲ್ಲಿ ಹಾಟ್ ಲುಕ್ ಕೊಟ್ಟ ಮೀರಾ ಜಾಸ್ಮಿನ್ ಫೋಟೊಗಳು ವೈರಲ್
ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ ನೀಡಿದ್ದ 'ಮಿಸ್ಟರ್ ರೋಮಿಯೋ' ಅನ್ನುವ ತಮಿಳು ಸಿನಿಮಾಗೆ ಹಾಡಿದ್ದರು. ಈ ಚಿತ್ರದ "ತನ್ನೇರೈ ಕಾಥಲಿಕ್ಕುಂ... " ಎಂಬ ಹಾಡು ಸಂಗೀತಾ ಸಜಿತ್ ಅವರ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಹಿಟ್ ಕಂಡ ಹಾಡು.
RIP Sangeetha Sajith !! 🙏🏼
— Jakes Bejoy (@JxBe) May 22, 2022
അയ്യപ്പനും കോശിയിലെ താളം പോയ് തപ്പും പോയ്,. കുരുതിയിലെ തീം സോങ് എന്നിവയാണ് സംഗീത സജിത്ത് അവസാനമായി മലയാളത്തിൽ പാടിയത്.
ആദരാഞ്ജലികൾ. pic.twitter.com/gU8YesOu2Q
1998ರಲ್ಲಿ ತೆರೆಕಂಡಿದ್ದ ಮಲಯಾಳಂ ಸಿನಿಮಾ ' ಎನ್ನು ಸ್ವಂತಂ ಜಾನಕಿಕುಟ್ಟಿ' ಸಿನಿಮಾದ "ಅಂಬಲಿ ಪೂವೆಟ್ಟಂ... " ಎಂಬ ಹಾಡು 90 ದಶಕದ ಕೊನೆಯಲ್ಲಿ ಸೂಪರ್ ಹಿಟ್ ಆಗಿತ್ತು. ಮಲಯಾಳಂ ಸಿನಿ ರಸಿಕರು ಈ ಹಾಡನ್ನು ಗುನುಗುತ್ತಿದ್ದರು. ತನ್ನ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಗಾಯಕಿ ನಿಧನದಿಂದ ಮಲಯಾಳ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.
ವಂಚಕನೊಂದಿಗೆ ವ್ಯವಹಾರ ಸ್ಟಾರ್ ನಟ ಮೋಹನ್ಲಾಲ್ಗೆ ಇಡಿ ನೋಟಿಸ್
ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಅಭಿನಯದ 'ಪಳಸ್ಸಿರಾಜ' ಸಿನಿಮಾದ ಹಾಡು " ಒಡತಾಂಡಿಲ್ ಥಾಲಂ ಕೊಟ್ಟುಂ..", 'ರಕ್ಕಿಲಿಪಟ್ಟು' ಸಿನಿಮಾದ "ಧುಮ್ ಧುಮ್ ಧುಮ್ ದೊರೆಯತ್ತೋ...", 'ಕಕ್ಕ ಕುಯಿಲ್' ಸಿನಿಮಾದ "ಆಲಾರೆ ಗೋವಿಂದ...", ಹೀಗೆ ಮಲಯಾಳಂ ಚಿತ್ರರಂಗದ ಸೂಪರ್ ಹಿಟ್ ಹಾಡುಗಳಿಗೆ ಸಂಗೀತಾ ಸಜಿತ್ ಧ್ವನಿಯಾಗಿದ್ದರು.
ಯುವನಟಿ ಅನುಮಾನಾಸ್ಪದ ಸಾವು: ಪೊಲೀಸರ ವಶಕ್ಕೆ ಪತಿ
ಹಿಂದೊಮ್ಮೆ 'ಜ್ಞಾನಪಳತೆ ಪಿಳಿಂತ್' ಎಂಬ ಕೆ ಬಿ ಸುಂದರಂಬಲ್ ಅವರ ಹಾಡನ್ನು ಸಂಗೀತಾ ಸಜಿತ್ ಹಾಡಿದ್ದರು. ಈ ಹಾಡಿನಿಂದ ಸಂಗೀತಾ ಸಜಿತ್ ಫೇಮಸ್ ಆಗಿದ್ದರು. ಈ ಹಾಡನ್ನು ತಮಿಳುನಾಡು ಸರ್ಕಾರದ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಂಗೀತಾ ಹಾಡಿದ್ದರು. ಅಂದಿನ ತಮಿಳುನಾಡಿನ ಮುಖ್ಯ ಮಂತ್ರಿಯಾಗಿದ್ದ ಜಯಲಲಿತಾ ಇವರ ಧ್ವನಿ ಮರುಳಾಗಿ, ಅದೇ ಕಾರ್ಯಕ್ರಮದಲ್ಲಿ 10 ಸವರನ್ ಬಂಗಾರದ ಸೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ 'ಕುರುಥಿ' ಸಿನಿಮಾದ ಥೀಮ್ ಹಾಡಿಗೆ ಧ್ವನಿಯಾಗಿದ್ದರು. ಅದೇ ಇವರ ಕೊನೆಯ ಹಾಡಾಗಿತ್ತು. ಕೇರಳದ ತಿರುವನಂತಪುರಂನ ತೈಕಾಡ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.