Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೇಮಿಗಳ ಇಂಚರ ಪ್ರೀತಿಯ ಹಂಗಾಮ
ಹದಿಹರೆಯದ ಹುಚ್ಚು ವಯಸ್ಸದು. ಪ್ರೀತಿಯ ಬಲೆಯಲ್ಲಿ ಬಿದ್ದ ಪ್ರೇಮಿಗಳು ಬಾನಲ್ಲಿ ಹಾರುವ ಹಕ್ಕಿಗಳ ಹಾಗೆ ಒಮ್ಮೆ ಜಗಳ ಮತ್ತೊಮ್ಮೆ ಪ್ರೀತಿ ಹೀಗೆ ಯುವಜೋಡಿ ವಿವೇಕ್ರಾಜ್ ಹಾಗೂ ಶುಭಾಪುಂಜಾ ನಟನೆಯ ಪ್ರೀತಿಯ ಹಂಗಾಮ ಚಿತ್ರ ಕೂಡ ಸಾಗುತ್ತದೆ. ಕವಿರಾಜ್ ಬರೆದಿರುವ ಹಾಡುಗಳು ಜನಪ್ರಿಯತೆ ಗಳಿಸುವ ಎಲ್ಲ ಲಕ್ಷಣಗಳಿವೆ.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಜೊತೆಗೆ ನಾಯಕನಾಗಿ ಕೂಡ ವಿವೇಕ್ ರಾಜ್ ಕಾಣಿಸಲಿದ್ದಾರೆ. ಪ್ರೀತಿಯ ಹಂಗಾಮ ಚಿತ್ರದ ಧ್ವನಿಸುರಳಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ಶುಭ ಹಾರೈಸಲು ನಿರ್ಮಾಪಕ ಗಂಗರಾಜು, ಹಿರಿಯ ನಿರ್ದೇಶಕ ನಾಗಾಭರಣ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.
ಮೊದಲ ಬಾರಿಗೆ ಪತ್ರಕರ್ತೆಪಾತ್ರ ಮಾಡಿರುವ ಶುಭಾ ಪೂಂಜಾ, ಸಿನಿ ಪತ್ರಕರ್ತರು ಪರದಾಟದ ಅನುಭವ ಸಿಕ್ಕ ಮೇಲೆ ನಿಜಕ್ಕೂ ನಿಮ್ಮ ಕೆಲಸ ತುಂಬಾ ಕಷ್ಟ ಎಂದು ಸುದ್ದಿಗಾರರ ಕಡೆ ತಿರುಗಿ ಹೇಳಿ ಮನಸಾರೆ ನಕ್ಕರು. ತುಂಬಾ ಲವಲವಿಕೆಯ ಪಾತ್ರ, ನಿರ್ದೇಶಕ ವಿವೇಕ್ ರಾಜ್ ಸೊಗಸಾಗಿ ಕಥೆ ಹೆಣೆದಿದ್ದಾರೆ ಎಂದು ವಿವೇಕ್ ಗೆ ಶುಭಾ ಫುಲ್ ಮಾರ್ಕ್ ಕೊಟ್ಟರು.ಬಹುತೇಕ ಕಥೆಗಳು ಪ್ರೀತಿ ಸುತ್ತಲೇ ಸುತ್ತಿದರೂ ನಿರೂಪಣೆಯಲ್ಲಿ ಸ್ವಂತಿಕೆ ಮೆರೆಯಬೇಕು. ಚಿತ್ರದ ಹಾಡುಗಳು ಭರವಸೆ ಮೂಡಿಸುವಂತಿದೆ ಎಂದು ನಾಗಾಭರಣ, ಚಿತ್ರ ತಂಡವನ್ನು ಹರಸಿದರು.