Don't Miss!
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಗೀತಾಸಕ್ತರದಾಹ ನೀಗುತ್ತಿರುವ ಹಂಸಲೇಖ!
ಸಂಗೀತ ಸಂಯೋಜಕ, ಚಿತ್ರ ಸಾಹಿತಿ ಹಂಸಲೇಖ ಅವರ ಸಂಗೀತ ಕಳಕಳಿಯನ್ನು ಬೆಟ್ಟು ಮಾಡಿ ತೋರಿಸುವಂತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸಂಗೀತಕ್ಕೆಂದೇ ಒಂದು ಕಾಲೇಜನ್ನು ಅವರು ತೆರೆದಿದ್ದಾರೆ. 'ಹಂಸಲೇಖಾ ಪ್ರದರ್ಶನ ಕಲೆಗಳ ಕಾಲೇಜು ಮತ್ತು ಸಂಶೋಧನಾ ಕೇಂದ್ರ' ಬೆಂಗಳೂರಿನ ಮಹಾಲಕ್ಷ್ಮಿಪುರಂನಲ್ಲಿ ತಲೆಎತ್ತಿದೆ.
ಅಂದಹಾಗೆ ಈ ಕಾಲೇಜು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ. ಜೂ.24, 2004ರಲ್ಲಿ ಕಾರ್ಯಾರಂಭ ಮಾಡಿದ ಈ ಕಾಲೇಜು ಹಲವಾರು ಸಂಗೀತಾಸಕ್ತರ ದಾಹವನ್ನು ತಣಿಸಿದೆ ಎನ್ನಬಹುದು.ಸಂಗೀತ, ನಾಟಕ ಕಲೆಗಳನ್ನು ಕರಗತ ಮಾಡಿಸಿ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿದೆ.
''ಪ್ರದರ್ಶನ ಕಲೆ ಮತ್ತು ಸಂಗೀತ ನನ್ನ ನೆಚ್ಚಿನ ಕ್ಷೇತ್ರಗಳು. ಈ ಕ್ಷೇತ್ರಗಳಲ್ಲಿ ವೃತ್ತಿಜೀವನ ಆರಂಭಿಸಬೇಕೆಂದಿರುವ ಆಸಕ್ತರಿಗೆ ಸಂಗೀತ ಕಲಿಸಬೇಕು ಎಂಬುದು ನನ್ನ ಇಚ್ಛೆ ''ಎನ್ನುತ್ತಾರೆ ಹಂಸಲೇಖ. ಕರ್ನಾಟಕ ಸರಕಾರ ಸಂಗೀತ ವಿವಿಯನ್ನು ತೆರೆಯಲು ಹೆಣಗಾಡುತ್ತಿದೆ. ಹಂಸಲೇಖ ಅದಕ್ಕೂ ಮುನ್ನ ಕಾಲೇಜು ತೆರೆದು ಸಂಪೂರ್ಣವಾಗಿ ಸಂಗೀತ ಕಲಿಕೆಯಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.
(ದಟ್ಸ್ ಕನ್ನಡ ಚಿತ್ರವಾರ್ತೆ)