Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ : ಬೇಂದ್ರೆ ಜನ್ಮದಿನಕ್ಕೆ ಕುರುಡು ಕಾಂಚಾಣಕ್ಕೆ ಹೊಸ ರೂಪ
''ಕುರುಡು ಕಾಂಚಾಣಾ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೋ'' ಹಾಡು ಯಾರಿಗೆ ತಾನೇ ತಿಳಿದಿಲ್ಲ. ವರಕವಿ ದ ರಾ ಬೇಂದ್ರೆ ಅವರ ಈ ಜನಪ್ರಿಯ ಹಾಡು ಈಗ ಹೊಸ ರೂಪ ಪಡೆದುಕೊಂಡಿದೆ.
'ಆ ಒಂದು ನೋಟು' ಎಂಬ ಕನ್ನಡ ಸಿನಿಮಾದಲ್ಲಿ 'ಕುರುಡು ಕಾಂಚಾಣಾ ಕುಣಿಯುತಲಿತ್ತು..' ಹಾಡು ಬಳಸಿಕೊಂಡಿದ್ದು, ಈ ದಿನ ಬೇಂದ್ರೆ ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ಲಹರಿ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಹಾಡಿಗೆ ಸಿಕ್ಕಿದೆ.
ಬೇಂದ್ರೆ ಅಂದ್ರ ಕನ್ನಡ, ಬೇಂದ್ರೆ ಅಂದ್ರ ಕನ್ನಡಿ
ಕೌಶಿಕ್ ಹಾಡಿಗೆ ಸಂಗೀತ ನೀಡಿದ್ದಾರೆ. ಕಲಾವತಿ ಪುತ್ರನ್ ಅವರ ಧ್ವನಿ ಹಾಡಿಗೆ ಶಕ್ತಿ ತುಂಬಿದೆ. ಈ ಹಿಂದೆ ಸಿ ಅಶ್ವತ್ ಸಹ ವರಕವಿಯ ಈ ಹಾಡಿಗೆ ಜೀವ ನೀಡಿದ್ದರು. ಈಗ ಈ ಸಿನಿಮಾ ಮೂಲಕ ಸಹ ಕುರುಡು ಕಾಂಚಾಣಾ ಎಲ್ಲರನ್ನು ಕುಣಿಸುತ್ತಿದೆ.
ರತ್ನತನಯ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಹರೀಶ್ ಕೆ ಗೌಡ ಸಹ ನಿರ್ದೇಶನ ಸಿನಿಮಾಗೆ ಇದೆ. ಎಮ್ ಕೆ ಜಗದೀಶ್ ಮತ್ತು ಪ್ರೇಮ್ ನಾಥ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
ಎರಡು ಸಾವಿರ ರೂಪಾಯಿ ಚಿತ್ರದ ಪ್ರಮುಖ ವಿಷಯವಾಗಿದ್ದು, ಅದರ ಸುತ್ತ ಸಿನಿಮಾದ ಪಾತ್ರಗಳು ಸುತ್ತುತ್ತದೆಯಂತೆ.