twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ್ ಹಾಡಿಗೆ ದನಿಗೂಡಿಸಿದ ನಟ ಉಪೇಂದ್ರ-ಅನಿರುದ್ಧ್

    |

    ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಎವರ್‌ಗ್ರೀನ್ ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ ದನಿಗೂಡಿಸಿದ್ದಾರೆ. ವಿಷ್ಣು ನಟನೆಯಲ್ಲಿ ಮೂಡಿ ಬಂದಿದ್ದ 'ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು...' ಹಾಡನ್ನು ಉಪ್ಪಿ ಹಾಡಿದ್ದಾರೆ.

    ನಟ ಉಪೇಂದ್ರ, ಅನಿರುದ್ಧ್, ವಿಜಯ್ ರಾಘವೇಂದ್ರ ಮೂವರು ಸೇರಿ ಈ ಹಾಡಿಗೆ ದನಿಗೂಡಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅನಿರುದ್ಧ್ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

    'ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಪ್ರಾಣವೇ ಆಗಿದ್ದರು'- ಸುಮಲತಾ'ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಪ್ರಾಣವೇ ಆಗಿದ್ದರು'- ಸುಮಲತಾ

    ಇದು ಯಾವ ಸಂದರ್ಭ, ಎಲ್ಲಿ ಮತ್ತು ಯಾವಾಗ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಈ ಎಲ್ಲರ ಒಟ್ಟಿಗೆ ಸೇರಿದ ಸಮಯದಲ್ಲಿ ಈ ಹಾಡನ್ನು ಅನಿರುದ್ಧ್ ಹಾಡಿದ್ದಾರೆ. ಜೊತೆಯಲ್ಲಿ ಉಪೇಂದ್ರ ಮತ್ತು ವಿಜಯ ರಾಘವೇಂದ್ರ ಅವರು ದನಿಗೂಡಿಸಿದ್ದಾರೆ.

     Actor Upendra sang Vishnuvardhans song

    ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಚಿತ್ರರಂಗದ ಮೂವರು ಜಂಟಲ್‌ಮ್ಯಾನ್ ಒಂದೇ ಕಡೆ ಹಾಗೂ ವಿಷ್ಣು ದಾದಾ ಹಾಡನ್ನು ಹಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

    ಅಂದ್ಹಾಗೆ, ಉಪೇಂದ್ರ-ಅನಿರುದ್ಧ್-ವಿಜಯರಾಘವೇಂದ್ರ ಅವರು ಹಾಡಿರುವ ಹಾಡು ಹೊಂಬಿಸಿಲು ಚಿತ್ರದ 'ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು........'.

    ಗೀತಪ್ರಿಯ ಅವರು ಸಾಹಿತ್ಯ ರಚಿಸಿದ್ದ ಈ ಹಾಡಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದರು. ವಿಷ್ಣುವರ್ಧನ್ ಮತ್ತು ಆರತಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

    English summary
    Kannada Actor Upendra sang Dr Vishnuvardhan's 'Neerabittu Nelada Mele' song with anirudh and Vijay ragahvendra.
    Friday, October 30, 2020, 17:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X