Don't Miss!
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- News
ರಾಣೆಬೆನ್ನೂರು: "ಮೈಸೂರ ಹುಲಿ" ಎಂದೇ ಪ್ರಸಿದ್ಧಿಯಾಗಿದ್ದ ಹೋರಿ ಇನ್ನಿಲ್ಲ, ಮುಗಿಲು ಮುಟ್ಟಿದ ಆಕ್ರಂದನ
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು ತಾರೆ ಕೃತಿ ಜೊತೆ ಅನೂಪ್ ಸೀಳಿನ್ ಸಪ್ತಪದಿ
ಭರತನಾಟ್ಯ ಕಲಾವಿದೆಯೂ ಆಗಿರುವ ಕೃತಿ ಅವರು ತಮಿಳಿನ 'ಅಳಗರಸ್ವಾಮಿಯಿನ್ ಕುದಿರೈ' ಹಾಗೂ 'ಕೊಂಡುತಾನ್ ಕೊಡುತಾನ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಇವರಿಬ್ಬರ ಮದುವೆ ನಿಶ್ಚಿತಾರ್ಥವೂ ನೆರವೇರಿತು.
ಬೆಂಗಳೂರು ವಿಜಯನಗರದ ಬಂಟ್ಸ್ ಅಸೋಸಿಯೇಷನ್ ನಲ್ಲಿ ಅಕ್ಟೋಬರ್ 22ರಂದು ಮದುವೆ ಸಮಾರಂಭ ನಡೆಯಲಿದೆ. ಅಂದು ಸಂಜೆ 7.30ಕ್ಕೆ ಆರತಕ್ಷತೆ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದಾರೆ.
ಕಿಚ್ಚ ಸುದೀಪ್ ಹಾಗೂ ಮಮತಾ ಮೋಹನ್ ದಾಸ್ ಜೋಡಿಯ 'ಗೂಳಿ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಅನೂಪ್ ಸೀಳಿನ್ ಪರಿಚಿತರಾಗಿದ್ದರು. ಬಳಿಕ ಅವರ ಸಂಗೀತ ನಿರ್ದೇಶನದ ಹತ್ತಾರು ಚಿತ್ರಗಳ ಹಾಡುಗಳು ಹಿಟ್ ಆಗಿವೆ.
ಎದ್ದೇಳು ಮಂಜುನಾಥ, ಪ್ರೀತ್ಸೆ ಪ್ರೀತ್ಸೆ, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಮನಸಾಲಜಿ, ಗಲ್ಲ ಸಿದ್ಲಿಂಗು, ಪ್ರೇಮಗಾಮಿ ಹಾಗೂ ಜನ್ಮ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದರು.
ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿರುವ 'ಪರಾರಿ' ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ ಅನೂಪ್. ಮಾಜಿ ನ್ಯಾಯಮೂರ್ತಿ ಹಾಗೂ ಕನ್ನಡದ ಬರಹಗಾರ ಕೋ.ಚನ್ನಬಸಪ್ಪ ಅವರ ಹತ್ತಿರದ ಸಂಬಂಧಿಕರು ಅನೂಪ್ ಸೀಳಿನ್.
ಕೃತಿ ಅವರು ಕನ್ನಡದ 'ಸರಿಗಮಪ' ಎಂಬ ಚಿತ್ರಕ್ಕೂ ಸಹಿಹಾಕಿದ್ದರು. ಆದರೆ ಕಾರಣಾಂತರಗಳಿಂದ ಅವರು ಚಿತ್ರವನ್ನು ಮಧ್ಯದಲ್ಲೇ ಕೈಬಿಟ್ಟಿದ್ದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ. (ಒನ್ಇಂಡಿಯಾ ಕನ್ನಡ)