Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿಗೆ 'ಗಾಡ್ ಫಾದರ್' ಎ ಆರ್ ರೆಹಮಾನ್
ಶನಿವಾರ, ಮೇ 02, 2012 ರಂದು ಬೆಂಗಳೂರಿಗೆ ಆಗಮಿಸಿ ಅಚ್ಚಕನ್ನಡದಲ್ಲಿ ಸ್ವಚ್ಛವಾಗಿ 'ನಮಸ್ತೇ... ಚೆನ್ನಾಗಿದ್ದೀರಾ?" ಎಂದು ಮಾತಿನಾಡಿ ಎಲ್ಲರ ಹುಬ್ಬೇರಿಸಿದರು ರೆಹಮಾನ್. ಅವರು ಕನ್ನಡ ಚಿತ್ರವೊಂದಕ್ಕೆ ಸಂಗೀತ ನೀಡಿರುವುದೇ ದೊಡ್ಡ ವಿಷಯ. ಅಷ್ಟೇ ಅಲ್ಲದೇ ಆಡಿಯೋ ಬಿಡುಗಡೆಗೆ ಸ್ವತಃ ಬೆಂಗಳೂರಿಗೆ ಬಂದಿದ್ದು ತೀರಾ ವಿಶೇಷ.
"ನಾನು ಅದೆಷ್ಟೋ ವಿದೇಶಗಳನ್ನು ಸುತ್ತಿದ್ದೇನೆ. ಎಲ್ಲೆಡೆಯಲ್ಲೂ ಕನ್ನಡದ ಅಭಿಮಾನಿಗಳಿದ್ದಾರೆ. ಇಷ್ಟು ದಿನ ಹಿಂದಿ, ತಮಿಳು ಚಿತ್ರಗಳ ಗೀತೆಗಳನ್ನು ಹಾಡಿ ಜನರ ಮನಸ್ಸನ್ನು ರಂಜಿಸುತ್ತಿದ್ದೆ. ಆದರೆ ಇನ್ಮುಂದೆ ಅಲ್ಲಿ ಯಾವುದೇ ದೇಶಕ್ಕೆ ಹೋದರೂ ಕನ್ನಡದ ಹಾಡನ್ನೂ ಹಾಡುತ್ತೇನೆ" ಎಂದರು ಎ ಆರ್ ರೆಹಮಾನ್.
ಮುಂದುವರಿದ ರೆಹಮಾನ್, "ಸಂಗೀತ ದಿಗ್ಗಜರಾದ ವಿಜಯಭಾಸ್ಕರ್, ವೆಂಕಟೇಶ್, ಹಂಸಲೇಖಾ ಹಾಗೂ ವಿಜಯಾನಂದ ಇವರೊಂದಿಗೆ ಚೆನ್ನೈಲಿದ್ದಾಗ ಕೆಲಸ ಮಾಡಿದ್ದೇನೆ. ಅದು ನಾನು ಎಂದೂ ಮರೆಯಲಾರದ ಅನುಭವ. ಬೆಂಗಳೂರಿನಲ್ಲೂ ಸಾಕಷ್ಟು ದಿನ ಸಂಗೀತ ಕೆಲಸ ಮಾಡಿದ್ದೇನೆ.
ಆಗಿನಿಂದಲೂ ನನಗೆ ಕನ್ನಡ ಚಿತ್ರಕ್ಕೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದು ಈಗ 'ಗಾಡ್ ಫಾದರ್' ಚಿತ್ರದ ಮೂಲಕ ಈಡೇರಿದೆ. ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರಗಳ ಗೀತೆಗಳ ಬಗ್ಗೆ ಸಾಕಷ್ಟು ಮೆಚ್ಚಿ ಮಾತನಾಡಿದರು ರೆಹಮಾನ್, ಅವರ ಬಾಯಿಂದ ಕನ್ನಡದ ಗುಣಗಾನ ನಡೆಯುತ್ತಿದ್ದರೆ ಅಲ್ಲಿ ನೆರೆದಿದ್ದ ಗಣ್ಯರನ್ನೂ ಸೇರಿ ಎಲ್ಲರೂ ಸ್ತಬ್ಧಚಿತ್ರಗಳಾಗಿದ್ದರು.
25 ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದ ಈ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಅವರಿಗೆ ಕನ್ನಡ ಚಿತ್ರರಂಗದ ಪರವಾಗಿ 'ಗಾಡ್ ಫಾದರ್' ಚಿತ್ರತಂಡ ಮೈಸೂರು ಪೇಟ ತೊಡಿಸಿ ಸನ್ಮಾನಿಸಿತು. ಶ್ರೀಗಂಧದ ನಾಡಿನ ಗಂಧನ ಮಾಲೆಯನ್ನು ಅವರ ಕೊರಳಿಗೆ ತೊಡಿಸಿ ಧನ್ಯವಾಯಿತು ಚಿತ್ರತಂಡ. ಅಂದಹಾಗೆ, ಈ ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜು.
ಈ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಹಿರಿಯ ನಟ ಅಂಬರೀಷ್, ಸುಮಲತಾ, ದ್ವಾರಕೀಶ್, ನಿರ್ಮಾಪಕ ಕೆ. ಮಂಜು, ನಿರ್ದೇಶಕ ಶ್ರೀರಾಮ್, ಉಪೇಂದ್ರ, ಪ್ರಿಯಾಂಕ, ನಾಯಕಿ ಸೌಂದರ್ಯ ಜಯಮಾಲಾ, ರಮೇಶ್ ಅರವಿಂದ, ಹಂಸಲೇಖ, ವಿ ಮನೋಹರ್, ಗೀತಸಾಹಿತಿಗಳಾದ ಕೆ ಕಲ್ಯಾಣ್, ಕವಿರಾಜ್, ಗಾಯಕ ವಿಜಯ ಪ್ರಕಾಶ್ ಮುಂತಾದವರು ಹಾಜರಿದ್ದರು.
ಒಟ್ಟಿನಲ್ಲಿ ಕೆ ಮಂಜು, ತಮ್ಮ ಸಾರಥ್ಯದ ಗಾಡ್ ಫಾದರ್ ಚಿತ್ರದ ಬಿಡುಗಡೆಗೂ ಮೊದಲೇ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಅವರನ್ನು ಬೆಂಗಳೂರಿಗೆ ಕರೆಸಿ ಹೊಸ ಸಾಧನೆ ಮಾಡಿದ್ದಾರೆ. ರೆಹಮಾನ್ ಗಾಡ್ ಫಾದರ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಲ್ಲದೇ ಆಡಿಯೋ ಬಿಡುಗಡೆಗೂ ಕೂಡ ಆಗಮಿಸಿ ಹೊಸ ಸಂಚಲನ ಮೂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಚಿತ್ರ ಬಿಡುಗಡೆಗೂ ಮೊದಲೇ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. (ಒನ್ ಇಂಡಿಯಾ ಕನ್ನಡ)