Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ: ದುನಿಯಾ ವಿಜಿ-ಭಟ್ರ 'ಕಾವೇರಿ ಗಾನ'ದ ಸಣ್ಣ ಝಲಕ್
ಯೋಗರಾಜ್ ಭಟ್ರು ಅಂದ್ರೆ ಹಾಗೆ, ಏನಾದ್ರೂ ವಿಶೇಷತೆ ಇದ್ರೆ, ಅಥವಾ ಯಾವುದೋ ವಿಚಾರಕ್ಕೆ ಟಾಂಗ್ ಕೊಟ್ಟು, ಹಾಡೋ, ಡೈಲಾಗೋ, ಕವಿತೆನೋ ಬರೆದು ಬಿಡ್ತಾರೆ. ಭಟ್ರ ಈ ಚೇಷ್ಟೆಗೆ ದುನಿಯಾ ವಿಜಯ್ ಅವರು ಸಾಥ್ ಕೊಡ್ತಾರೆ.
ಇತ್ತೀಚೆಗಷ್ಟೇ ಪಿಯುಸಿ ವಿದ್ಯಾರ್ಥಿಗಳ ರಾಸಾಯನಿಕ ಪ್ರಶ್ನೆ ಪತ್ರಿಕೆ ಸೋರಿ ಹೋಗಿದ್ದಾಗ, ನಿರ್ದೇಶಕ ಯೋಗರಾಜ್ ಭಟ್ ಮತ್ತು ದುನಿಯಾ ವಿಜಯ್ ಅವರು ಒಂದು ವಿಶೇಷ ಹಾಡು ರಚಿಸಿ, ಬಿಡುಗಡೆ ಮಾಡಿದ್ದರು. ಭಟ್ರು ಮತ್ತು ವಿಜಿ ಹಾಡಿದ ಹಾಡು ಸಾಕಷ್ಟು ಸುದ್ದಿ ಮಾಡಿತ್ತು.[ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ.! ಯಾರೀಕೆ.?]
ಇದೀಗ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಕೂಡ ಯೋಗರಾಜ್ ಭಟ್ರು ವಿಶೇಷ ಹಾಡು ಬರೆದಿದ್ದಾರೆ. ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿ, ಭಟ್ರ ಮಿರ್ಚಿಗೆ, ಇನ್ನಷ್ಟು ಮಸಾಲೆ ಬೆರೆಸಿದ್ದಾರೆ.
ಭಟ್ರ ಸಾಹಿತ್ಯಕ್ಕೆ ದುನಿಯಾ ವಿಜಿ ಅವರು ತಮ್ಮ ಧ್ವನಿ ನೀಡಿದ್ದು, ಸಖತ್ ಆಗಿ ಹಾಡಿದ್ದಾರೆ. ಈ ಹಾಡನ್ನು ವಿಜಿ ಮತ್ತು ಪ್ರಿಯಾಮಣಿ ಕಾಣಿಸಿಕೊಂಡಿರುವ 'ದನ ಕಾಯೋನು' ಚಿತ್ರದಲ್ಲಿ ಬಳಸಿಕೊಳ್ಳುತ್ತಾರಂತೆ. ಈಗಾಗಲೇ ಬಿಡುಗಡೆ ಆಗಿರುವ ಈ ವಿಡಿಯೋ ಸಾಂಗ್ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!]
ದುನಿಯಾ ವಿಜಯ್ ಮತ್ತು ಯೋಗರಾಜ್ ಭಟ್ರ 'ದನ ಕಾಯೋನು' ಚಿತ್ರ ಬಿಡುಗಡೆಗೆ ತಯಾರಾಗಿದ್ದು, ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.
ದುನಿಯಾ ವಿಜಿ ಮತ್ತು ಭಟ್ರ ಕಾಂಬಿನೇಷನ್ 'ಕಾವೇರಿ ನೀರು' ಹಾಡಿನ ಮೇಕಿಂಗ್ ಝಲಕ್ ಇಲ್ಲಿದೆ ನೋಡಿ....