Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೇರೆ ಭಾಷೆಗಳಲ್ಲಿ ಕ್ರಾಂತಿ 'ಧರಣಿ' ಹಾಡಿನ ಶೀರ್ಷಿಕೆ ಏನು, ಅಲ್ಲಿ ಸಾಹಿತಿಗಳು ಹಾಗೂ ಗಾಯಕರು ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಮೊದಲ ಹಾಡು 'ಧರಣಿ ಮಂಡಲ ಮಧ್ಯದಲಿ' ಇಂದು ( ಡಿಸೆಂಬರ್ 10 ) ಮೈಸೂರಿನಲ್ಲಿ ಬಿಡುಗಡೆಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವತಃ ನಿರೂಪಣೆ ಮಾಡಿದ್ದು, ದರ್ಶನ್ ನೆಚ್ಚಿನ ಸೆಲೆಬ್ರಿಟಿಗಳಾದ ಅಭಿಮಾನಿಗಳೇ ಈ ಹಾಡನ್ನು ರಿಲೀಸ್ ಮಾಡಿದ್ದಾರೆ. ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಈ ಹಾಡಿಗಾಗಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾದು ಕುಳಿತಿದ್ದರು. ಈಗ ಈ ಹಾಡು ಕೇಳಲು ಲಭ್ಯವಿದ್ದು, ಎಲ್ಲೆಡೆ ಸದ್ದು ಮಾಡಲು ಸಿದ್ಧವಾಗಿದೆ.
ಇನ್ನು ಕ್ರಾಂತಿ ಚಿತ್ರವನ್ನು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಧರಣಿ ಹಾಡನ್ನೂ ಸಹ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಸಹ ಬಿಡುಗಡೆಗೊಳಿಸಲಾಗಿದೆ. ಕನ್ನಡದಲ್ಲಿ ಧರಣಿ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವನ್ನು ಬರೆದಿದ್ದರೆ, ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ ಹಾಗೂ ಪೂಜಾ ರಾವ್ ಹೀಗೆ ಒಂಬತ್ತು ಗಾಯಕ ಹಾಗೂ ಗಾಯಕಿಯರು ಹಾಡಿಗೆ ದನಿ ನೀಡಿದ್ದಾರೆ.
ಹೀಗೆ ಕನ್ನಡದಲ್ಲಿ ಧರಣಿ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿರುವ ಹಾಡು ಇತರೆ ಭಾಷೆಗಳಲ್ಲಿ ಯಾವ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಲಿದೆ ಹಾಗೂ ಅಲ್ಲಿ ಯಾರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ ಮತ್ರು ದನಿ ನೀಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಮಲಯಾಳಂ
ಕ್ರಾಂತಿ ಚಿತ್ರದ ಥೀಮ್ ಹಾಡು ಮಲಯಾಳಂನಲ್ಲಿಯೂ ಧರಣಿ ಎಂಬ ಪದದಿಂದಲೇ ಆರಂಭವಾಗಲಿದೆ. ಹೀಗಾಗಿ ಅಲ್ಲಿಯೂ ಸಹ ಧರಣಿ ಥೀಮ್ ಹಾಡು ಎಂದೇ ಶೀರ್ಷಿಕೆ ಇಡಲಾಗಿದ್ದು, ಸುದಂಶು ಎಂಬುವವರು ಹಾಡಿಗೆ ಸಾಹಿತ್ಯ ಬರೆದಿದ್ದರೆ, ಅಜಯ್ ವಾರಿಯರ್, ರೆಂಜಿತ್ ಉನ್ನಿ, ಜಿತಿನ್ ರಾಜ್, ಶ್ರೀರಾಜ್ ಶಹಜಾನ್, ಕಮಲಾ ಜಾ, ಐಶ್ವರ್ಯಾ ಹಾಗೂ ಫೆಜಿ ದೇವು ಎಂಬವವರು ಹಾಡಿಗೆ ದನಿ ನೀಡಿದ್ದಾರೆ.
ತಮಿಳು
ತಮಿಳಿನಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಉಳಗಿಲ್' ಎಂಬ ಶೀರ್ಷಿಕೆ ಇಡಲಾಗಿದೆ. ಅಲ್ಲಿ ಈ ಹಾಡಿಗೆ ಮಧುರಕವಿ ಎಂಬುವವರು ಸಾಹಿತ್ಯ ಗೀಚಿದ್ದು, ಬಾಲಾಜಿ ಶ್ರೀ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.
ತೆಲುಗು
ತೆಲುಗಿನಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಮಟ್ಟಿ' ಎಂಬ ಶೀರ್ಷಿಕೆ ಇಡಲಾಗಿದೆ, ಈ ಹಾಡಿಗೆ ಭಾಸ್ಕರ್ ಭಾಟ್ಲಾ ಸಾಹಿತ್ಯ ಬರೆದಿದ್ದು, ಹೇಮಂತ್, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.
ಹಿಂದಿ
ಹಿಂದಿಯಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಧರಣಿ' ಎಂದೇ ಹೆಸರನ್ನು ಇಡಲಾಗಿದ್ದು, ಈ ಹಾಡಿಗೆ ದೀಪಕ್ ವಿ ಭಾರ್ತಿ ಸಾಹಿತ್ಯ ಬರೆದಿದ್ದಾರೆ ಹಾಗೂ ಪಂಚಮ್ ಜೀವಾ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.