Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೇರೆ ಭಾಷೆಗಳಲ್ಲಿ ಕ್ರಾಂತಿ 'ಧರಣಿ' ಹಾಡಿನ ಶೀರ್ಷಿಕೆ ಏನು, ಅಲ್ಲಿ ಸಾಹಿತಿಗಳು ಹಾಗೂ ಗಾಯಕರು ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಮೊದಲ ಹಾಡು 'ಧರಣಿ ಮಂಡಲ ಮಧ್ಯದಲಿ' ಇಂದು ( ಡಿಸೆಂಬರ್ 10 ) ಮೈಸೂರಿನಲ್ಲಿ ಬಿಡುಗಡೆಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವತಃ ನಿರೂಪಣೆ ಮಾಡಿದ್ದು, ದರ್ಶನ್ ನೆಚ್ಚಿನ ಸೆಲೆಬ್ರಿಟಿಗಳಾದ ಅಭಿಮಾನಿಗಳೇ ಈ ಹಾಡನ್ನು ರಿಲೀಸ್ ಮಾಡಿದ್ದಾರೆ. ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಈ ಹಾಡಿಗಾಗಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾದು ಕುಳಿತಿದ್ದರು. ಈಗ ಈ ಹಾಡು ಕೇಳಲು ಲಭ್ಯವಿದ್ದು, ಎಲ್ಲೆಡೆ ಸದ್ದು ಮಾಡಲು ಸಿದ್ಧವಾಗಿದೆ.
ಇನ್ನು ಕ್ರಾಂತಿ ಚಿತ್ರವನ್ನು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಧರಣಿ ಹಾಡನ್ನೂ ಸಹ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಸಹ ಬಿಡುಗಡೆಗೊಳಿಸಲಾಗಿದೆ. ಕನ್ನಡದಲ್ಲಿ ಧರಣಿ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವನ್ನು ಬರೆದಿದ್ದರೆ, ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ ಹಾಗೂ ಪೂಜಾ ರಾವ್ ಹೀಗೆ ಒಂಬತ್ತು ಗಾಯಕ ಹಾಗೂ ಗಾಯಕಿಯರು ಹಾಡಿಗೆ ದನಿ ನೀಡಿದ್ದಾರೆ.
ಹೀಗೆ ಕನ್ನಡದಲ್ಲಿ ಧರಣಿ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿರುವ ಹಾಡು ಇತರೆ ಭಾಷೆಗಳಲ್ಲಿ ಯಾವ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಲಿದೆ ಹಾಗೂ ಅಲ್ಲಿ ಯಾರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ ಮತ್ರು ದನಿ ನೀಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಮಲಯಾಳಂ
ಕ್ರಾಂತಿ ಚಿತ್ರದ ಥೀಮ್ ಹಾಡು ಮಲಯಾಳಂನಲ್ಲಿಯೂ ಧರಣಿ ಎಂಬ ಪದದಿಂದಲೇ ಆರಂಭವಾಗಲಿದೆ. ಹೀಗಾಗಿ ಅಲ್ಲಿಯೂ ಸಹ ಧರಣಿ ಥೀಮ್ ಹಾಡು ಎಂದೇ ಶೀರ್ಷಿಕೆ ಇಡಲಾಗಿದ್ದು, ಸುದಂಶು ಎಂಬುವವರು ಹಾಡಿಗೆ ಸಾಹಿತ್ಯ ಬರೆದಿದ್ದರೆ, ಅಜಯ್ ವಾರಿಯರ್, ರೆಂಜಿತ್ ಉನ್ನಿ, ಜಿತಿನ್ ರಾಜ್, ಶ್ರೀರಾಜ್ ಶಹಜಾನ್, ಕಮಲಾ ಜಾ, ಐಶ್ವರ್ಯಾ ಹಾಗೂ ಫೆಜಿ ದೇವು ಎಂಬವವರು ಹಾಡಿಗೆ ದನಿ ನೀಡಿದ್ದಾರೆ.

ತಮಿಳು
ತಮಿಳಿನಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಉಳಗಿಲ್' ಎಂಬ ಶೀರ್ಷಿಕೆ ಇಡಲಾಗಿದೆ. ಅಲ್ಲಿ ಈ ಹಾಡಿಗೆ ಮಧುರಕವಿ ಎಂಬುವವರು ಸಾಹಿತ್ಯ ಗೀಚಿದ್ದು, ಬಾಲಾಜಿ ಶ್ರೀ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.

ತೆಲುಗು
ತೆಲುಗಿನಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಮಟ್ಟಿ' ಎಂಬ ಶೀರ್ಷಿಕೆ ಇಡಲಾಗಿದೆ, ಈ ಹಾಡಿಗೆ ಭಾಸ್ಕರ್ ಭಾಟ್ಲಾ ಸಾಹಿತ್ಯ ಬರೆದಿದ್ದು, ಹೇಮಂತ್, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.

ಹಿಂದಿ
ಹಿಂದಿಯಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಧರಣಿ' ಎಂದೇ ಹೆಸರನ್ನು ಇಡಲಾಗಿದ್ದು, ಈ ಹಾಡಿಗೆ ದೀಪಕ್ ವಿ ಭಾರ್ತಿ ಸಾಹಿತ್ಯ ಬರೆದಿದ್ದಾರೆ ಹಾಗೂ ಪಂಚಮ್ ಜೀವಾ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.