Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಮಲಯಾಳಂಗೆ ಹೊರಟ ರವಿ ಬಸ್ರೂರು
'ಉಗ್ರಂ', 'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಭಾರಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಹಿಂದಿಯಲ್ಲಿ ಸಲ್ಮಾನ್ ಖಾನ್ ಸಿನಿಮಾಕ್ಕೂ ಸಂಗೀತ ನೀಡಿರುವ ರವಿ ಬಸ್ರೂರು, ತೆಲುಗು, ತಮಿಳು ಸಿನಿಮಾಗಳಿಗೂ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದಾರೆ.
'ಮಡ್ಡಿ' ಹೆಸರಿನ ಮಲಯಾಳಂ ಸಿನಿಮಾ ಒಂದಕ್ಕೂ ಸಂಗೀತ ನೀಡಿದ್ದ ರವಿ ಬಸ್ರೂರು ಇದೀಗ ಮತ್ತೆ ಮಲಯಾಳಂ ಸಿನಿಮಾ ಒಂದಕ್ಕೆ ಸಂಗೀತ ನೀಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಮಲಯಾಳಂನ ಸ್ಟಾರ್ ನಟನ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.
ಮಲಯಾಳಂ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ
ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ರ ಹೊಸ ಮಲಯಾಳಂ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ. ಹಲವು ಭಿನ್ನ-ಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿರುವ ಪೃಥ್ವಿರಾಜ್ ಸುಕುಮಾರನ್ ಇದೀಗ ಪೌರಾಣಿಕ ಸಿನಿಮಾಕ್ಕೆ ಕೈ ಇಟ್ಟಿದ್ದು, 'ಕಾಲಿಯನ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ರವಿ ಬಸ್ರೂರು ಚಿತ್ರ ಹಂಚಿಕೊಂಡ ಪೃಥ್ವಿರಾಜ್ ಸುಕುಮಾರನ್
ಈ ವಿಷಯವನ್ನು ಸ್ವತಃ ಪೃಥ್ವಿರಾಜ್ ಸುಕುಮಾರನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರವಿ ಬಸ್ರೂರು ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹಂಚಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, 'ಕಾಲಿಯನ್' ರವಿ ಬಸ್ರೂರು' ಎಂದು ಬರೆದುಕೊಂಡಿದ್ದಾರೆ. ಪೃಥ್ವಿರಾಜ್ ಹಂಚಿಕೊಂಡಿರುವ ಚಿತ್ರದಲ್ಲಿ ರವಿ ಬಸ್ರೂರು ಜೊತೆಗೆ ಸಿನಿಮಾದ ನಿರ್ದೇಶಕ ಎಸ್ ಮಹೇಶ್, ನಿರ್ಮಾಪಕ ರಾಜೀವ್ ಗೋವಿಂದನ್ ಸಹ ಇದ್ದಾರೆ.
ಸಿನಿಮಾದಿಂದ ಹಿಂದೆ ಸರಿದ ಶಂಕರ್-ಎಹಸಾನ್-ಲಾಯ್
'ಕಾಲಿಯನ್' ಸಿನಿಮಾಕ್ಕೆ ಬಾಲಿವುಡ್ನ ಶಂಕರ್-ಎಹಸಾನ್-ಲಾಯ್ ಸಂಗೀತ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಈ ಸಿನಿಮಾ ತಡವಾಗುತ್ತಲೇ ಸಾಗಿದ್ದರಿಂದ ಸಿನಿಮಾದಿಂದ ಹೊರಗುಳಿದರು ಶಂಕರ್-ಎಹಸಾನ್-ಲಾಯ್. ಸಿನಿಮಾವು 17ನೇ ಶತಮಾನದ ಕತೆ ಹೊಂದಿದ್ದು, ವೇನಾಡ್ನ 'ಕಾಲಿಯನ್' ಹೆಸರಿನ ಯೋಧನೊಬ್ಬ ಅಪಾಯಕಾರಿ ಕಾರ್ಯವೊಂದನ್ನು ಸಾಧಿಸಲು ಹೊರಡುವ ಕತೆಯನ್ನು ಸಿನಿಮಾ ಒಳಗೊಂಡಿದೆ.
ಹಲವು ಸಿನಿಮಾಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ಬ್ಯುಸಿ
ಈ ಸಿನಿಮಾದಲ್ಲಿ ತಮಿಳಿನ ಸತ್ಯರಾಜ್ ಸಹ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ. ಸಿನಿಮಾದ ನಾಯಕಿ ಯಾರಾಗುತ್ತಾರೆ, ಇತರೆ ಪಾತ್ರವರ್ಗಗಳ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ಪೃಥ್ವಿರಾಜ್ ಸುಕುಮಾರನ್ ಬಹಳ ಬ್ಯುಸಿ ನಟ ಮತ್ತು ನಿರ್ದೇಶಕ ಆಗಿದ್ದಾರೆ. ತೆಲುಗಿನ 'ಸಲಾರ್' ಮಲಯಾಳಂನ 'ಗೋಲ್ಡ್', 'ರೈಲ್ವೆ ಗಾರ್ಡ್', 'ಕಾಪ', 'ಬರೋಜ್', ಹೊಂಬಾಳೆ ನಿರ್ಮಿಸುತ್ತಿರುವ 'ಟೈಸನ್', 'ಎಂಪುರಾನ್', 'ತೀರ್ಪು' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.