Don't Miss!
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ನೊಂದು ಜನ್ಮ ಅಂತಿದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ
ಹಾಡು ಯಾರಿಗೂ ಸ್ವಂತ ಅಲ್ಲ. ಅದನ್ನು ಜನರಿಗೆ ಇನ್ನೂ ಹತ್ತಿರವಾಗುವಂತೆ ತಲುಪಿಸುವುದು ಇಂದಿನ ಯುವ ಗಾಯಕರ ಕರ್ತವ್ಯವಾಗಿದೆ. ನಾನು ಸೂಪರ್ ಸ್ಟಾರ್ ನಟನ ಪಾತ್ರಕ್ಕಾಗಲಿ, ಹೊಸದಾಗಿ ಪರಿಚಯವಾಗುತ್ತಿರುವ ನಟನ ಪಾತ್ರಕ್ಕಾಗಲಿ ಹಾಡುವಾಗ ಆ ಹಾಡಿನ ಮೇಲಷ್ಟೇ ಗಮನವಿರುತ್ತದೆ. ಹಾಡು ಚೆನ್ನಾಗಿ ಬರಬೇಕೆಂಬುದಷ್ಟೇ ನಮ್ಮ ಉದ್ದೇಶವಾಗಿರುತ್ತದೆ ಎಂದು ದಕ್ಷಿಣಭಾರತದ ಹೆಸರಾಂತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ.
ಅವರು ಭಾನುವಾರ (ಜು.21) ಸಂಜೆ ಸೌಂಡ್ ಅಂಡ್ ಮ್ಯೂಸಿಕ್ ನ ಗುರುರಾಜ್ ಅವರು ಸಂಗ್ರಹಿಸಿ ಹೊರತಂದ 'ಮಧುರ ಮಧುರವೀ ಮಂಜುಳಗಾನ' ಎಂಬ 514 ಹಳೇ ಚಿತ್ರಗೀತೆಗಳ ಸಾಹಿತ್ಯ ಸಂಗ್ರಹದ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಾನು 1966ರಲ್ಲಿ ಗಾಯಕನಾಗಿ ಚಿತ್ರರಂಗಕ್ಕೆ ಬಂದ ನಂತರ ಹಾಡಿದ ಎರಡನೇ ಹಾಡು ಕನ್ನಡ ಚಿತ್ರದ್ದು. ನನ್ನನ್ನು ಅಂದಿನಿಂದ ಇಂದಿನವರೆಗೂ ಹರಸಿ ಬೆಳೆಸಿ ಪ್ರೋತ್ಸಾಹಿಸಿದ ಕನ್ನಡಿಗರಿಗೆ ನಾನು ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು. ನನಗೇನಾದರೂ ಇನ್ನೊಂದು ಜನ್ಮ ಎಂಬುದಿದ್ದರೆ ಕರ್ನಾಟಕದಲ್ಲೇ ಹುಟ್ಟಬೇಕೆಂಬುದು ನನ್ನ ಆಸೆ ಎಂದು ಎಸ್.ಪಿ.ಬಿ ಕರ್ನಾಟಕದ ಜನತೆ ಹೃದಯಪೂರ್ವಕ ಧನ್ಯವಾದ ತಿಳಿಸಿದರು.
ಸೌಂಡ್ ಅಂಡ್ ಮ್ಯೂಸಿಕ್ ನ ಗುರುರಾಜ್ ಅವರು ಈ ಪುಸ್ತಕದ ಬಗ್ಗೆ ಮಾತನಾಡುತ್ತ ಸುಮಾರು ಎರಡು ವರ್ಷಗಳ ಕಾಲ ಶ್ರಮವಹಿಸಿ ಈ ಪುಸ್ತಕವನ್ನು ಹೊರತಂದಿದ್ದೇನೆ. ಇದರಲ್ಲಿ ಹಲವಾರು ಮಹನೀಯರ ಸಹಕಾರವಿದೆ ಎಂದರು. ಗಾಯಕ ಎಸ್.ಪಿ.ಬಿ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು. (ಒನ್ಇಂಡಿಯಾ ಕನ್ನಡ)