Don't Miss!
- News Ballari Lok Sabha Election: ಶ್ರೀರಾಮುಲು ಪತ್ನಿ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಸು ದೀಕ್ಷಿತ್ ಕಂಠದಿಂದ ಪುರಂದರ ದಾಸರ ಪದ ಕೇಳಲು ಮರೆಯಬೇಡಿ
ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಹಾಡಿರುವ ಒಂದು ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯೂಟ್ಯೂಬ್, ಫೇಸ್ ಬುಕ್... ಎಲ್ಲಿ ನೋಡಿದರೂ ವಾಸು ದೀಕ್ಷಿತ್ ಗಾನ ಲಹರಿಯದ್ದೇ ಸದ್ದು.
ವಾಸು ದೀಕ್ಷಿತ್ ಹಾಡಿರುವ ''ರಾಗಿ ತಂದೀರಾ... ಭಿಕ್ಷೆಗೆ ರಾಗಿ ತಂದೀರಾ...'' ಎಂಬ ಹಾಡು ಈಗ ಎಲ್ಲರೂ ಗುನುಗುವಂತೆ ಮಾಡಿದೆ. ಪುರಂದರದಾಸರ ಈ ಕೀರ್ತನೆಗೆ ಮ್ಯೂಸಿಕ್ ನೀಡಿ ಹಾಡಿನ ರೂಪದಲ್ಲಿ ತಂದಿದ್ದಾರೆ. 'ರಾಗಿ'ಯ ಮಹತ್ವವನ್ನು ಸಾರುವ ಈ ಹಾಡಿಗೆ ಆಧುನಿಕ ಟಚ್ ನೀಡಿದ್ದಾರೆ.
ಈ ಹಾಡಿನ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಬೆಂಗಳೂರಿನ ಬಸ್ಸು, ರಸ್ತೆ, ದೇವಸ್ಥಾನ, ಬಸ್ ನಿಲ್ದಾಣ, ಹೋಟೆಲ್ ಎಲ್ಲ ಕಡೆ ಪುರಂದರದಾಸರ ಈ ಪದವನ್ನು ಹಾಡಿ ಜನರಿಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೆ ಇಂದಿನ ಜನರ ಬಾಯಲ್ಲಿ ದಾಸರ ಹಾಡನ್ನು ಹಾಡಿಸಿದ್ದಾರೆ.
ರಘು ದೀಕ್ಷಿತ್ ಸಂತ ಶಿಶುನಾಳ ಶರೀಫರ ಹಾಡನ್ನು ದೇಶ ವಿದೇಶಗಳಲ್ಲಿನ ಜನರಿಗೆ ತಲುಪಿಸುತ್ತಿದ್ದಾರೆ. ಇತ್ತ ಅವರ ಸಹೋದರ ವಾಸು ದೀಕ್ಷಿತ್ ಸಹ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮೂರು ತಿಂಗಳ ಹಿಂದೆಯೇ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಆಗಿದ್ದರೂ, ಈಗೀಗ ಹಾಡಿಗೆ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ವಾಸು ದೀಕ್ಷಿತ್ ಕಂಠದಲ್ಲಿ ಪುರಂದರದಾಸರ ಪದ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ.