Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾಧ್ಯಮ ಕ್ಷೇತ್ರಕ್ಕೆ ತೆಲುಗು ಮೆಗಾ ಸ್ಟಾರ್ ಚಿರಂಜೀವಿ
ಈಗಾಗಲೆ ರಾಜಕೀಯ ಕ್ಷೇತ್ರಕ್ಕೆ ಅಡಿಯಿಟ್ಟಿರುವ ತೆಲುಗು ಚಿತ್ರರಂಗದ ನಟ ಚಿರಂಜೀವಿ ಈಗ ಮಾಧ್ಯಮ ಕ್ಷೇತ್ರಕ್ಕೆ ಅಡಿಯಿಡಲು ಸಿದ್ಧತೆ ನಡೆಸಿದ್ದಾರೆ. 2008ರಲ್ಲಿ 'ಪ್ರಜಾ ರಾಜ್ಯಂ' ಪಕ್ಷವನ್ನು ಸ್ಥಾಪಿಸುವ ಮೂಲಕ ಚಿರಂಜೀವಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದರು.
ಆಂಧ್ರದಲ್ಲಿ ಈಗಾಗಲೆ ಒಂದೊಂದು ಪಕ್ಷಕ್ಕೂ ತನ್ನದೇ ಆದಂತಹ ಟಿವಿ ಚಾನಲ್, ಪತ್ರಿಕೆಗಳು ಇವೆ.ಅವೆಲ್ಲವೂ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಲೂ ಇವೆ. ಇದನ್ನೂ ನೋಡುತ್ತಾ ಸುಮ್ಮನೆ ಕೂರಲು ಮನಸ್ಸಾಗದ ಚಿರಂಜೀವಿಗೆ ತಾನೂ ಏಕೆ ಚಾನಲ್ ಆರಂಭಿಸಬಾರದು ಎನ್ನಿಸಿರಬೇಕು.
ಅವರು ಆರಂಭಿಸಲಿರುವ ಟಿವಿ ಚಾನಲ್ಗೆ 'ಆರ್ ಕೆ ನ್ಯೂಸ್' ಎಂದು ಹೆಸರಿಡಲಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಜೊತೆಜೊತೆಗೆ ಮುದ್ರಣ ಮಾಧ್ಯಮಕ್ಕೂ ಚಿರಂಜೀವಿ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ಆಂಧ್ರದಲ್ಲಿ ಸಂಚನಲ ಉಂಟು ಮಾಡಿದೆ. ಆಂಧ್ರದಲ್ಲಿ ಸಿನಿಮಾ ಮತ್ತು ರಾಜಕೀಯ ಒಂದಕ್ಕೊಂದು ತಳುಕು ಹಾಕಿಕೊಂಡೇ ಮುನ್ನಡೆಯುತ್ತಿವೆ.
ಈ ಹಿಂದೆ ವೈ ಎಸ್ ಜಗನ್ ಮೋಹನ್ ರೆಡ್ಡಿ, ಎನ್ ಚಂದ್ರಬಾಬು ನಾಯ್ಡು ಹಾಗೂ ಕೆ ಚಂದ್ರಶೇಖರ್ ರಾವ್ ಮಾಧ್ಯಮ ಕ್ಷೇತ್ರಕ್ಕೆ ಅಡಿಯಿಟ್ಟಿದ್ದರು. ಈಗ ಚಿರಂಜೀವಿ ಕೂಡ ಅದೇ ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ಆಂಧ್ರ ರಾಜಕೀಯ ಮತ್ತಷ್ಟು ರಂಗೇರುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ.