ಮಡಿಕೇರಿಯಲ್ಲಿ ಮನಸಾರೆ ಸುಖಿಸಿದವರು
ದಿಗಂತ್ಗೆ ಈ ಚಿತ್ರ ಮರೆಯಲಾಗದ ಅನುಭವ ಕೊಟ್ಟಿದೆ. ಅಂದ್ರಿತಾ ರೇ ಕೂಡ ತಮಗೂ ಹಾಗೇ ಆಗಿದೆ ಅಂತ ಮಾತು ಸೇರಿಸುತ್ತಾರೆ. ಇಬ್ಬರೂ ನಡುರಾತ್ರಿ ಬ್ಯಾಡ್ಮಿಂಟನ್ ಆಡಿದ್ದಾರೆ. ಶೂಟಿಂಗ್ ನಡುವೆ ಪುರುಸೊತ್ತಿನಲ್ಲಿ ಮೋಂಬತ್ತಿ ಬೆಳಕಲ್ಲಿ ಊಟ ಮಾಡಿ ಸುಖಿಸಿದ್ದಾರೆ. ಇನ್ನೂ ದಣಿವು ಅನ್ನಿಸಿದಾಗ ಈಜುಕೊಳಕ್ಕೆ ಧುಮುಕಿ ಈಜಾಡಿ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ದಿಗಂತ್ ಪಾಲಿಗೆ ಇದು ಅದ್ಭುತ ಔಟಿಂಗ್.
ಮಡಿಕೇರಿ ಅಂದಮೇಲೆ ಕೇಳಬೇಕೆ? ತಂಪು ಹವೆ. ಎಲ್ಲೆಲ್ಲೂ ಹಸಿರು. ಸ್ವರ್ಗ ಸುಖ ಅಂದರೆ ಇದಪ್ಪಾ ಅನ್ನುವ ಅಂದ್ರಿತಾ ಕಥೆ ಬಗ್ಗೆ ಕೇಳಿದರೆ ಮಾತ್ರ ತುಟಿ ಹೊಲೆದುಕೊಳ್ಳುತ್ತಾರೆ. ಇಲ್ಲಿನ ಜೈಲಿನಲ್ಲಿ ಯೋಗರಾಜ್ ಭಟ್ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಅಂದರೆ, ಇದು ಜೈಲು ಪ್ರೇಮಕಥೆಯಾ? ಭಟ್ಟರು ಏನೇನೋ ಯೋಚನೆ ಮಾಡುತ್ತಾರೆ. ಹಾಗಾಗಿ ಹೀಗೇ ಅಂತ ಹೇಳೋಕಾಗೋಲ್ಲ. ಇದೊಂದು ಬೇರೆ ಟೈಪ್ ಸಿನಿಮಾ ಆಗುತ್ತೆ ಅಂತ ದಿಗಂತ್ ಹೇಳಿ ಶೂಟಿಂಗ್ ಮುಂದುವರಿಸಿದರು. ಭಟ್ಟರು ಮಾತ್ರ ಬರವಣಿಗೆ ತಿದ್ದುವುದರಲ್ಲಿ ಬ್ಯುಸಿ.
ಯೋಗರಾಜ ಭಟ್ಟರ ಮನಸಾರೆ ಸೆಟ್ಟೇರಿದೆ
ಯೋಧನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್
ಲಗೋರಿಯನ್ನು ಕೈಬಿಟ್ಟ ಧೀರ ರಾಕ್ ಲೈನ್ ?
ಅಪ್ಪನಾಗಿ ಬಡ್ತಿ ಪಡೆದ ಯೋಗರಾಜ್ ಭಟ್!


Click it and Unblock the Notifications












