ನಾಗಾಭರಣ ನಿರ್ದೇಶನದಲ್ಲಿ ಗಾನಯೋಗಿ ಜೀವನ ಚರಿತ್ರೆ

ಈ ಹಿಂದೆ ಪುಟ್ಟರಾಜ ಗವಾಯಿ ಅವರ ಗುರು ಗಾನಯೋಗಿ ಪಂಚಾಕ್ಷರಿ ಗವಾಯಿ ಜೀವನ ಚರಿತ್ರೆ ಕುರಿತ ಚಿತ್ರ ತೆರೆಗೆ ಬಂದಿತ್ತು. ಈ ಚಿತ್ರವನ್ನು ಚಿಂದೋಡಿ ಬಂಗಾರೇಶ್ ನಿರ್ದೇಶಿಸಿದ್ದರು. ಲೋಕೇಶ್ ಮತ್ತು ಗಿರೀಶ್ ಕಾರ್ನಾಡ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಹಂಸಲೇಖ ಅವರ ಸಂಗೀತ ಸಂಯೋಜನೆ, ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾಯನ ಚಿತ್ರಕ್ಕಿತ್ತು.
ಈ ಗ ಬರಲಿರುವ ಪುಟ್ಟರಾಜ ಗವಾಯಿ ಚಿತ್ರವನ್ನು ಮಾರುತಿ ಜೆಡಿಯವರ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು 'ಧರ್ಮದೇವತೆ' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಒಂಭತ್ತನೇ ಚಿತ್ರ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ. ಗವಾಯಿ ಅವರ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ.
ಈ ಚಿತ್ರದ ಮುಹೂರ್ತ ಶೀಘ್ರದಲ್ಲೇ ನಡೆಯಲಿದೆ. ಅಂದಹಾಗೆ ನಿರ್ಮಾಪಕ ಮಾರುತಿ ಅವರು ಗವಾಯಿಗಳ ಸ್ವಸ್ಥಳ ಗದುಗಿನವರು. ಹಾಗಾಗಿ ಈ ಚಿತ್ರವನ್ನು ಇವರು ತುಂಬ ಮುತುವರ್ಜಿಯಿಂದ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ನಡೆಯಲಿದೆ. ಹಿಂದೂಸ್ತಾನಿ ಸಂಗೀತದಲ್ಲಿ ಮೂಡಿಬರುತ್ತಿರುವುದು ಈ ಚಿತ್ರದ ವಿಶೇಷ. ಗವಾಯಿಗಳ ಅಪಾರ ಶಿಷ್ಯವೃಂದಕ್ಕೆ ಈ ಚಿತ್ರ ಸ್ಫೂರ್ತಿಯಾಗಲಿದೆ.


Click it and Unblock the Notifications











