Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಂಗಾಳಿ ಚಿತ್ರಕ್ಕೆ ಒಲಿಯಿತು ಲಂಕೇಶ್ ಚಿತ್ರ ಪ್ರಶಸ್ತಿ
ಲಂಕೇಶ್ ಚಿತ್ರ ಪ್ರಶಸ್ತಿಗಾಗಿ ತಲಾ ಒಂದೊಂದು ಇಂಗ್ಲಿಷ್, ಕನ್ನಡ, ರಾಜಸ್ತಾನಿ, ಮಲಯಾಳಂ, ತಮಿಳು, ಅಸ್ಸಾಮಿ, ಕೊಂಕಣಿ ಸೇರಿದಂತೆ ಆರು ಹಿಂದಿ ಹಾಗೂ ಎರಡು ಬಂಗಾಳಿ ಚಿತ್ರಗಳು ಸ್ಪರ್ಧಿಸಿದ್ದವು. ಖ್ಯಾತ ನಟ ಪ್ರಕಾಶ್ ರೈ, ಕನ್ನಡ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಹಾಗೂ ಚಿತ್ರ ವಿಮರ್ಶಕ ಸಂದೀಪ ನಾಯಕ ಅವರನ್ನೊಳಗೊಂಡ ಆಯ್ಕೆ ಸಮಿತಿ ಅತನು ಘೋಷ್ ಅವರ ಚಿತ್ರವನ್ನು ಆಯ್ಕೆ ಮಾಡಿದೆ.
ಮಾರ್ಚ್ 7ರ ಪ್ರಶಸ್ತಿ ಪ್ರದಾನದ ಬಳಿಕ ಸಂಜೆ 6ಗಂಟೆಗೆ ಅತನು ಘೋಷ್ ಅವರ ಚಿತ್ರವನ್ನು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಪ್ರದರ್ಶಿಸಲಾಗುತ್ತದೆ. 2000ದಲ್ಲಿ ಪಿ ಲಂಕೇಶ್ ನಿಧನರಾದ ಬಳಿಕ ಅವರ ಹೆಸರಿನಲ್ಲಿ ಅವರ ಮಗಳು ಕವಿತಾ ಲಂಕೇಶ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. ಪಿ ಲಂಕೇಶರು 'ಪಲ್ಲವಿ'ಯಂತಹ ಉತ್ತಮ ಚಿತ್ರವನ್ನು ನಿರ್ದೇಶಿಸಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. ಕವಿತಾ ಲಂಕೇಶ್ ಸಹ ತಮ್ಮ ಚೊಚ್ಚಲ ನಿರ್ದೇಶನದ 'ದೇವೀರಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
ಸಿನಿಮಾ ಮಾಡಬೇಕೆಂಬ ಆಕಾಂಕ್ಷೆಯುಳ್ಳ ನಾಲ್ಕು ಮಂದಿಯ ಕತೆಯೇ 'ಅಂಗ್ಷುಮನೇರ್ ಚೊಬ್ಬಿ'. ಇಟಲಿಯಲ್ಲಿ ಚಿತ್ರ ನಿರ್ದೇಶನ ತರಬೇತಿ ಪಡೆದು ಭಾರತಕ್ಕೆ ಮರಳುತ್ತಾನೆ ಚಿತ್ರದಲ್ಲಿನ ಚಿತ್ರ ನಿರ್ದೇಶಕ. ಆತನ ಬಳಿ ಉತ್ತಮ ಚಿತ್ರಕತೆಯಿರುತ್ತದೆ. ಎಪ್ಪತ್ತು ವರ್ಷದ ಪೈಂಟರ್ ಹಾಗೂ ಯುವ ನರ್ಸ್ ಒಬ್ಬಳ ನಡುವಿನ ಸಂಬಂಧದ ಬಗ್ಗೆ ಚಿತ್ರ ಕುತೂಹಭರಿತವಾಗಿ ಸಾಗುತ್ತದೆ.