twitter
    For Quick Alerts
    ALLOW NOTIFICATIONS  
    For Daily Alerts

    ಜೈಲಿಂದ ತಿರುಗಿ ಬಂದ ನಟ ಆನಂದನ ಕಥೆ

    |

    Anand
    ನಟ ಆನಂದ ಗೊತ್ತಲ್ಲ. ಅದೇ 'ಮನುಸುಗಳ ಮಾತು ಮಧುರ' ಚಿತ್ರದ ಹೀರೋ. ಮೊದಲು ಟಿವಿ ನಿರೂಪಕನಾಗಿದ್ದ ಆನಂದ್ ಚಿತ್ರರಂಗಕ್ಕೆ ಅಡಿಯಿಟ್ಟು ಬೆಳೆಯುತ್ತಿರುವಾಗಲೇ ಕೌಟುಂಬಿಕ ಕಲಹದ ಕಾರಣಕ್ಕೆ ಜೈಲು ಸೇರಿದ ಕಥೆ ಎಲ್ಲರಿಗೂ ಗೊತ್ತೇ ಇದೆ. ನಂತರದ ಕಥೆ ಇಲ್ಲಿದೆ ನೋಡಿ.

    ಅವಮಾನ, ಮಾನಸಿಕ ಹಿಂಸೆಗಳಿಂದ ನೊಂದಿದ್ದ ಆನಂದ್ ಆ ಕ್ಷಣದಲ್ಲಿ ಆತ್ಮಹತ್ಯೆಗೆ ಯೋಚಿಸಿದ್ದರಂತೆ. ನಂತರ ಆ ಮನಸ್ಥಿತಿಯಿಂದ ಹೊರಬಂದು ಬದುಕನ್ನು ತಿರುಗಿ ಕಟ್ಟಿಕೊಳ್ಳಲು ಯೋಚಿಸಿ ಅದರಂತೆ ಒಂದ ವರ್ಷ ಜಿಮ್ ನಲ್ಲಿ ದೇಹ ದಂಡಿಸಿ, ಹೊಸ ಆಕಾರ್, ಹೊಸ ಮನಸ್ಥಿತಿಯೊಂದಿಗೆ ಇದೀಗ ಮತ್ತೆ ತೆರೆಗೆ ಬರಲು ರೆಡಿಯಾಗಿದ್ದಾರೆ.

    ಇದೀಗ ಸುಧೀರ್ ಮಗ, ನಟ ತರುಣ ನಿರ್ದೇಶನದಲ್ಲಿ ಜನವರಿಯಲ್ಲಿ ಪ್ರಾರಂಭವಾಗಲಿರುವ ಹೊಸ ಚಿತ್ರದಲ್ಲಿ ಆನಂದ್ ನಟಿಸಲಿದ್ದಾನೆ. ಅದೊಮ್ಮೆ ಸಾವೇ ಕೊನೆಯ ಆಯ್ಕೆ ಎಂದುಕೊಂಡಿದ್ದ ಆನಂದ್, ಇದೀಗ ಮತ್ತೆ ವೃತ್ತಿಜೀವನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಆನಂದ್ ಹೊಸ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. (ಒನ ಇಂಡಿಯಾ ಕನ್ನಡ)

    English summary
    Actor Anand is now ready for acting. He returned from jail and shaped his body in new look. Acting in actor tharun sudhir's direction movie in January.
 
    Saturday, November 5, 2011, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X