Don't Miss!
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾರ್ವಜನಿಕ ಬದುಕಿನಿಂದ ರಂಜಿತಾ ನಿವೃತ್ತಿ
ಚಿತ್ರನಟಿ ರಂಜಿತಾ ಈಗೇನು ಮಾಡುತ್ತಿದ್ದಾರೆ? ಇಷ್ಟಕ್ಕೂ ಆಕೆ ಎಲ್ಲಿದ್ದಾರೆ? ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಸದ್ಯಕ್ಕೆನಟಿ ರಂಜಿತಾ ಸಾರ್ವಜನಿಕ ಬದುಕಿಗೆ ಗುಡ್ ಬೈ ಹೇಳಿದ್ದು ಕೇರಳದ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಹಾಗಂತ ಆಕೆಯ ಪರ ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮಿ ನಿತ್ಯಾನಂದ ಕಾಮಕೇಳಿ ಜಗಜ್ಜಾಹೀರಾದ ಮೇಲೆ ನಟಿ ರಂಜಿತಾ ತೀವ್ರವಾಗಿ ಮನನೊಂದಿದ್ದು, ಖಿನ್ನ ಮನಸ್ಕಳಾಗಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಸ್ವಾಮಿ ನಿತ್ಯಾನಂದ ಕಾಮಕೇಳಿಗೆ ಸಂಬಂಧಿಸಿದಂತೆ ನಟಿ ರಂಜಿತಾರನ್ನು ಕರ್ನಾಟಕ ಪೊಲೀಸರು ವಿಚಾರಣೆ ನಡೆಸಿಲ್ಲ ಎಂದೂ ಪ್ರಕಟಣೆ ತಿಳಿಸಿದೆ.
ಸನ್ ಟಿವಿಯಲ್ಲಿ ಮೊದಲು ಬೆಳಕು ಕಂಡ ಸ್ವಾಮಿ ನಿತ್ಯಾನಂದ ಕಾಮಕೇಳಿಯಲ್ಲಿ ನಟಿಯ ಮುಖ ಮಸುಕು ಮಾಡಿ ತೋರಿಸಲಾಗಿತ್ತು. ನಿತ್ಯಾನಂದನ ಜೊತೆಗೆ ಸಿಡಿಯಲ್ಲಿರುವ ನಟಿ ಮತ್ತ್ಯಾರು ಅಲ್ಲ ಆಕೆ ನಟಿ ರಂಜಿತಾ ಎಂದು ಅನುಮಾನ ವ್ಯಕ್ತವಾಗಿತ್ತು. ರಂಜಿತಾ ಹಾಗೂ ನಿತ್ಯಾನಂದ ಕಡೆಗೂ ಮಾಧ್ಯಮಗಳ ಮುಂದೆ ಬರಲೇ ಇಲ್ಲ. ಬಳಿಕ ನಿತ್ಯಾನಂದ ಪರಿಸ್ಥಿತಿ ಏನಾಯಿತು ಎಂಬುದು ಗೊತ್ತೇ ಇವೆ.