Don't Miss!
- News
ತರಗತಿಯಲ್ಲಿ ಒಬ್ಬ ಶಿಕ್ಷಕ ಇಬ್ಬರು ಶಿಕ್ಷಕಿಯರೊಂದಿಗೆ ಲವ್ವಿಡವ್ವಿ- ಅರೆಬೆತ್ತಲೆ ಫೋಟೋ ವೈರಲ್
- Finance
ಪಿಜಿಐಎಂ ಎಎಂಸಿ ಸಿಇಒ ಅಜಿತ್ ಮೆನನ್ ಸೇರಿ ನಾಲ್ವರಿಗೆ 36 ಲಕ್ಷ ರೂ. ದಂಡ ವಿಧಿಸಿದ ಸೆಬಿ
- Lifestyle
ಜುಲೈ 2022ರಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ದಿನ ಹಾಗೂ ಮುಹೂರ್ತ
- Automobiles
ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ
- Sports
120 ವರ್ಷಗಳಲ್ಲಿ ಇದೇ ಮೊದಲು!: ಸ್ಪೋಟಕ ಶತಕ ಸಿಡಿಸಿ ಪಂತ್ ಮುರಿದ ದಾಖಲೆ ಒಂದೆರಡಲ್ಲ!
- Technology
ಸ್ಯಾಮ್ಸಂಗ್ ಟಿವಿ ಖರೀದಿಸುವವರಿಗೆ ಇದಕ್ಕಿಂತ ಬೆಸ್ಟ್ ಟೈಂ ಸಿಗೋದಿಲ್ಲ!
- Education
Cochin Shipyard Limited Recruitment 2022 : 330 ವೆಲ್ಡರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಚಿಂಗಾರಿ ವೇದಿಕೆಯಲ್ಲಿ ದರ್ಶನ್ ಬಗ್ಗೆ ಸುದೀಪ್ ಮಾತು
ಇತ್ತೀಚಿಗೆ ಬಿಡುಗಡೆಯಾದ 'ಚಿಂಗಾರಿ' ಚಿತ್ರದ ಆಡಿಯೋ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಸುದೀಪ್ ಬಂದಿದ್ದರು. ದರ್ಶನ್ ಪಕ್ಕ ಸುದೀಪ್ ಬಂದು ಕುಳಿತಾಗ ಸಹಜವಾಗಿಯೇ ಸೇರಿದ್ದ ಜನರಿಗೆ ಆಶ್ಚರ್ಯ ಹಾಗೂ ಖುಷಿ ಒಟ್ಟಿಗೆ ಆಯ್ತು. ಕಾರಣ ಒಂದೇ ವೇಳೆಯಲ್ಲಿ ಚಿತ್ರರಂಗಕ್ಕೆ ಬಂದು ಪ್ರತಿಸ್ಪರ್ಧಿಗಳಂತೆ ಬೆಳೆದವರು. ಒಟ್ಟಗೆ ವೇದಿಕೆ ಹಂಚಿಕೊಂಡಿದ್ದು ತೀರಾ ಕಡಿಮೆ.
ಆದರೆ ಅಂದು ಸುದೀಪ್ ಮನಬಿಚ್ಚಿ ಮಾತನಾಡಿದರು. ದರ್ಶನ್ ಚಿತ್ರ ಸಾರಥಿಯನ್ನು ಮೆಚ್ಚಿಕೊಂಡಿದ್ದಲ್ಲದೇ ಚಿತ್ರರಂಗಕ್ಕೆ ಸರಿಯಾದ ವೇಳೆಯಲ್ಲಿ ಸಾರಥಿ ಅಗತ್ಯವಿದ್ದ ಗೆಲುವಿನ 'ಕೊಡುಗೆ' ನೀಡಿದೆ ಅಂದರು. ದರ್ಶನ್ ವೈಯಕ್ತಿಕ ಜೀವನದಲ್ಲಿ ನಡೆದ 'ಜೈಲು ದರ್ಶನ' ಘಟನೆಯ ಬಗ್ಗೆ ಸಂಕ್ಷಿಪ್ತ ಹಾಗೂ ನೇರವಾಗಿ ಅವರಾಡಿದ ಮಾತನ್ನು ಎಲ್ಲರೂ ಮೆಚ್ಚಿಕೊಂಡರು.
ದರ್ಶನ್ ತಮ್ಮ ಗೆಳೆಯ ಎಂದ ಸುದೀಪ್ "ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ಕೆಲವರು ಮಾತ್ರ ಸಿಕ್ಕಿಹಾಕಿಕೊಳ್ಳುತ್ತಾರೆ" ಎಂದರು. ಆ ಮಾತನ್ನು ವೇದಿಕೆಯಲ್ಲಿ ಇದ್ದವರೆಲ್ಲಾ ಅನುಮೋದಿಸಿ ತಲೆ ಅಲ್ಲಾಡಿಸಿದ್ದು ಕಂಡುಬಂತು. ಚಿಂಗಾರಿಗೆ ಯಶಸ್ಸನ್ನು ಕೋರಿ ಮಾತು ಮುಗಿಸಿದರು ಸುದೀಪ್. ದರ್ಶನ್ ಕೂಡ ತಮಗೆ ಸುದೀಪ್ ಒಳ್ಳೆಯ ಗೆಳೆಯ ಅಂದರು. (ಒನ್ ಇಂಡಿಯಾ ಕನ್ನಡ)