Don't Miss!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳ್ಳಿಯಲ್ಲಿ ಅರಳಿದ ಬಂಗಾರದ ಮನುಷ್ಯ
ಅಣ್ಣಾವ್ರಿಗೆ ತುಮಕೂರಿನ ಅಭಿಮಾನಿ ದೇವರುಗಳು ಬೆಳ್ಳಿಯ ವಿಗ್ರಹ ಮಾಡಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಅಭಿಮಾನಿ ದೇವರುಗಳು ಈ ಸಾಹಸ ಮಾಡಿದ್ದಾರೆ. ಒಟ್ಟು 6.35 ಕೆ.ಜಿ ತೂಕದ ಬೆಳ್ಳಿ ವಿಗ್ರ ವಿಗ್ರಹಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಖರ್ಚಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ 'ಮೈಲಾರಿ' ಸೆಟ್ಟೇರಿದ ಪ್ರಯುಕ್ತ ಅಣ್ಣಾವ್ರ ಬೆಳ್ಳಿ ವಿಗ್ರಹವನ್ನು ಅಭಿಮಾನಿಗಳು ಪ್ರದರ್ಶಿಸಿದರು. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಬಂಗಾರದ ಮನುಷ್ಯನ ಬೆಳ್ಳಿ ವಿಗ್ರಹವಿಟ್ಟು ಸಂಭ್ರಮಿಸಿದರು. ನಾಕೋಡ್ ಕಮಲೇಶ್ ಎಂಬ ಲೋಹ ಶಿಲ್ಪಿ ಈ ವಿಗ್ರಹವನ್ನು ಸುಂದರವಾಗಿ ರೂಪಿಸಿದ್ದಾರೆ.
ಅಣ್ಣಾವ್ರ ಬೆಳ್ಳಿವಿಗ್ರಹವನ್ನು ನೋಡಿದ ಶಿವಣ್ಣ ಒಂದೆರಡು ಕ್ಷಣ ಭಾವುಕರಾದರು. ಅಭಿಮಾನಿಗಳ ಅಭಿಮಾನಕ್ಕೆ ಶಿವಣ್ಣ ಶಿರಬಾಗಿದರು. ಏಪ್ರಿಲ್ 24ರ ಅಣ್ಣಾವ್ರ ಹುಟ್ಟುಹಬ್ಬದಂದು ಈ ಬೆಳ್ಳಿ ವಿಗ್ರಹವನ್ನು ಶತಶೃಂಗರಾಜ ರಾಜ್ ಅಭಿಮಾನಿಗಳ ಸಂಘ ತುಮಕೂರಿನಲ್ಲಿ ಪ್ರತಿಷ್ಠಾಪಿಸಲಿದೆ.