Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರೋದ್ಯಮದ ತ್ರೈಮಾಸಿಕ ಫಲಿತಾಂಶ!
ಈ ವರ್ಷದ ಮೊದಲ ಚಿತ್ರ ಪ್ರಜ್ವಲ್ ದೇವರಾಜ್ ಅಭಿನಯದ 'ಗುಲಾಮ' ಮೂರೇ ವಾರದಲ್ಲಿ ಎತ್ತಂಗಡಿಯಾಗಿ ಫ್ಲಾಪ್ ಹಣೆಪಟ್ಟಿ ಹಚ್ಚಿಕೊಂಡಿತು. 'ಒರಟ ಐ ಲವ್ ಯು' ಚಿತ್ರದ ಯಶಸ್ಸಿನಿಂದ ಬೇಡಿಕೆ ಹೆಚ್ಚಿಸಿಕೊಂಡಿದ್ದ ಪ್ರಶಾಂತ್ ಅಭಿನಯದ 'ಅಂಜದಿರು' ಮಕಾಡೆ ಮಲಗಿಕೊಂಡಿತು. ಹೊಸಬರು ಯಶಸ್ಸು ಸಾಧಿಸಬಹುದು ಅನ್ನುವ ಗಾಂಧಿನಗರದ ಲೆಕ್ಕಾಚಾರ ತಲೆಕೆಳಗಾಯಿತು.
ಈ ಸಂಭಾಷಣೆ, ಬಾಜಿ, ತಬ್ಬಲಿ ಮುಂತಾದ ಚಿತ್ರಗಳು ಕಷ್ಟಪಟ್ಟು ಒಂದುವಾರ ಪ್ರದರ್ಶನ ಕಂಡು, ನಿರ್ಮಾಪಕರಿಗೆ ಪ್ರಿಂಟ್ ದುಡ್ಡು ಕೂಡ ವಾಪಾಸ್ಸು ಬರಲಿಲ್ಲ. ಪೂಜಾಗಾಂಧಿ ಅಭಿನಯದ "ಅನು" ಚಿತ್ರಕ್ಕೆ ಒಳ್ಳೆ ಪ್ರಶಂಸೆಯೇನೋ ಬಂತು, ಆದರೆ ಗಲ್ಲಾಪೆಟ್ಟಿಗೆಯಲ್ಲಿ ಅದ್ಯಾಕೋ ಸದ್ದು ಮಾಡಲಿಲ್ಲ. ಆದಿನಗಳು ಚಿತ್ರದ ನಂತರ ಹೊಸ ಭರವಸೆ ಹುಟ್ಟಿಸಿದ್ದ ಚೇತನ್ ಅಭಿನಯದ 'ಬಿರುಗಾಳಿ' ಉತ್ತಮ ಓಪನಿಂಗ್ ಕಂಡರೂ ನಿರ್ಮಾಪಕರಿಗೆ ಅಬ್ಬಬ್ಬಾ ಎಂದರೆ ಹಾಕಿರುವ ಬಂಡವಾಳ ತಂದಿರಬಹುದು.
ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕ,ವಿತರಕರಿಗೆ ಗಾಬರಿ ಹುಟ್ಟಿಸುವ ವಿಷಯವೆಂದರೆ ವಿಷ್ಣುವರ್ಧನ್ ಅಭಿನಯದ, ನಾಗಾಭರಣ ನಿರ್ದೇಶನದ "ನಂ ಯಜಮಾನ್ರು" ಚಿತ್ರ. ಸುಮಾರು 4.5 ಕೋಟಿ ರುಪಾಯಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರದಿಂದ ನಿರ್ಮಾಪಕರಿಗೆ ದಕ್ಕಿದ್ದು ಕೇವಲ 75 ಲಕ್ಷ ರುಪಾಯಿ!! ಹೀರೋ ಪಟ್ಟ ಉಳಿಸಿಕೊಳ್ಳಲು ಹಲವಾರು ನಾಯಕರು ಪರದಾಡುವಂತಾಗಿದೆ. ಜನವರಿಯಿಂದ ಇದುವರೆಗೆ ಕೇವಲ 20 ಹೊಸ ಚಿತ್ರಗಳು ಮಹೂರ್ತ ಕಂಡಿವೆ. ಎಷ್ಟೋ ವಿತರಕರು ಗಾಂಧಿನಗರದ ಸಹವಾಸ ಸಾಕು ಎಂದು ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ.
ಸ್ವಲ್ಪ ನೆಮ್ಮದಿ ಪಡುವ ವಿಷವೇನೆಂದರೆ ದುನಿಯಾ ವಿಜಯ್ ಅಭಿನಯದ ಜಂಗ್ಲಿ, ಲೂಸ್ ಮಾದ ಯಾನೆ ಯೊಗೀಶ್ ಅಭಿನಯದ ಅಂಬಾರಿ ಮಾತ್ರ. ಗಾಂಧಿನಗರ ಬೆರಗಾಗುವಂತೆ ಕಲೆಕ್ಷನ್ ಗಳಿಸುತ್ತಾ ಮುನ್ನುಗ್ಗುತ್ತಿರುವುದು. ಈ ಮಧ್ಯೆ ಸುದೀಪ್ ಅಭಿನಯದ 'ವೀರ ಮದಕರಿ' ಮತ್ತು ಮಾಲಾಶ್ರೀ ಅಭಿನಯದ 'ಕನ್ನಡದ ಕಿರಣ್ ಬೇಡಿ' ಸದ್ಯದ ಮಟ್ಟಿಗೆ ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಕನ್ನಡ ಚಿತ್ರರಂಗ ತನ್ನ ಹಳೆಯ ವೈಭವದ ದಿನವನ್ನು ಮತ್ತೆ ಆದಷ್ಟು ಬೇಗ ಕಾಣುವಂತಾಗಲಿ ಅನ್ನುವುದು ಚಿತ್ರರಸಿಕರ ಆಶಯ.
ಬಾಕ್ಸಾಫೀಸ್
ಗಳಿಕೆಯಲ್ಲಿ
ದಾಖಲೆ
ಬರೆದ
ಜಂಗ್ಲಿ
ಎಲ್ಲ
ಯೋಗೀಶನ
ಮಹಿಮೆ,
ಶತಕದತ್ತ
ಅಂಬಾರಿ
ವೀರ
ಮದಕರಿ:
ನೂರಕ್ಕೆ
ಅರುವತ್ತು
ಮಾರ್ಕುಡು!
ನಮ್
'ಆಪ್ತಮಿತ್ರ'
ಯಜಮಾನ್ರು