ಪೂಜಾ ಗಾಂಧಿಯ ದಂಡುಪಾಳ್ಯ ತೆರೆಗೆ ಬರಲು ರೆಡಿ
ದಂಡುಪಾಳ್ಯ ಚಿತ್ರದ ಚಿತ್ರೀಕರಣ ಮುಗಿದಿದೆ. ಆರಂಭದಲ್ಲಿ ಸ್ವಲ್ಪವೇ ಸದ್ದು ಮಾಡಿದ್ದ ದಂಡುಪಾಳ್ಯ' ಪೂಜಾ ಗಾಂಧಿ'ಯ ಬೆತ್ತಲೆ ಪ್ರದರ್ಶನದಿಂದ ಬಹಳಷ್ಟು ಸುದ್ದಿಯಾಯ್ತು. ಘಟನೆ ನಡೆದಾಗ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ದರೋಡಕೋರರ ಒಂದು ಕೃತ್ಯ ಸಿನಿಮಾ ಆಗಿದೆ. ಸಹಜವಾಗಿಯೇ ಚಿತ್ರ ಭೀಕರ ದೃಶ್ಯ ಒಳಗೊಂಡಿದೆ.
1993 ರಿಂದ 2001 ರವೆರಗೂ ದಂಡುಪಾಳ್ಯದ ಹೆಸರೆತ್ತಿದರೇ ಇಡೀ ಬೆಂಗಳೂರು ಬೆಚ್ಚಿಬೀಳುತ್ತಿತ್ತು. ಕಾರಣ ಆ ಗ್ಯಾಂಗು ಮಾಡಿದ 75 ಕೊಲೆ, ಲೆಕ್ಕವಿಲ್ಲದಷ್ಟು ಅತ್ಯಾಚಾರ, ದರೋಡೆಗಳು. ನಂತರ ದಂಡುಪಾಳ್ಯದ ಸದ್ದು ಅಡಗಿದ್ದರೂ ಎಂದಿಗೂ ಜನರು ಅವರ ಕೃತ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲ.
ಈ ನೈಜ ಘಟನೆಯನ್ನು ಆಧರಿಸಿ ಶ್ರೀನಿವಾಸರಾಜು ಸಿನಿಮಾ ತಯಾರಿಸಿದ್ದಾರೆ. ಶೇ. 90ರಷ್ಟು ನೈಜ ಘಟನೆ ಹಾಗೂ ಶೇ. 10ರಷ್ಟು ಸಿನಿಮಾಗೆ ಬೇಕಾದ ಮಸಾಲೆ ಸೇರಿಸಿದ್ದಾಗಿ ನಿರ್ದೆಶಕರು ಹೇಳಿದ್ದಾರೆ. ಕಥೆ-ಚಿತ್ರಕಥೆ ಬರೆದಿರುವ ಶ್ರೀನಿವಾಸರಾಜು ಹಾಗೂ ಸಂಭಾಷಣೆ ಬರೆದಿರುವ ಆನಂದಪ್ರಿಯ, ಈ ಗ್ಯಾಂಗ್ ಕೃತ್ಯಗಳ ಬಗ್ಗೆ ಸಾಕಷ್ಟು ಅಧ್ಯಯನವನ್ನೂ ಮಾಡಿದ್ದಾರಂತೆ. ಈ ಎಲ್ಲಾ ಕಾರಣಗಳಿಂದ ಚಿತ್ರ ಚೆನ್ನಾಗಿ ಬಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಮುಂದಿನ ಪುಟ ನೋಡಿ...


Click it and Unblock the Notifications











