Don't Miss!
- Lifestyle
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಶ್ಚಿಕ, ಧನು ರಾಶಿಯವರಿಗೆ ಆರ್ಥಿಕವಾಗಿ ಶುಭ ದಿನ
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಅಡ್ಡ ಚಿತ್ರಕ್ಕೆ ಮತ್ತೆ ವಿಘ್ನ: ಶ್ರೀನಿವಾಸ್ ಕೆಂಡಾಮಂಡಲ
ಅಡ್ಡ ಶೀರ್ಷಿಕೆಗೂ ವಿವಾದಕ್ಕೂ ಅದೇನು ನಂಟೋ. ಅಡ್ಡ ಶೀರ್ಷಕೆಯ ಬಗ್ಗೆ ಆದ ವಾದ-ವಿವಾದಗಳು ಎಲ್ಲರಿಗೂ ಗೊತ್ತೇ ಇದೆ. ಈಗ ವಾದ-ವಿವಾದಗಳ ಹಂತ ಮುಗಿದು ವಿಘ್ನ ಪ್ರಾರಂಭವಾಗಿದೆ. ನಿರ್ಮಾಪಕ ಬಿ ಕೆ ಶ್ರೀನಿವಾಸ ಸಿನಿಮಾ ಪ್ರಾರಂಭ ಘೋಷಿಸಿ ಕಲಾವಿದರಿಗೆ ಅಡ್ವಾನ್ಸ್ ನೀಡಿದ್ದೂ ಆಗಿದೆ.
ಆದರೆ ಇದೀಗ ಕಲಾವಿದರು ಕಳವಳಕ್ಕೊಳಗಾಗಿದ್ದಾರೆ. ಕಾರಣ ಶ್ರೀನಿವಾಸ ಅವರ ಅಡ್ಡಕ್ಕೆ ವಿರುದ್ಧವಾಗಿ ನಿರ್ದೇಶಕ ಪ್ರೇಮ್ 'ಪ್ರೇಮ್ ಅಡ್ಡ' ಹೆಸರಿನ ಇನ್ನೊಂದು ಚಿತ್ರ ಮಾಡಲಿದ್ದಾರೆ. ಹೀಗೆ ಒಂದೇ ರೀತಿಯ ಎರಡು ಚಿತ್ರಗಳು ಬಂದರೆ ಪ್ರೇಕ್ಷಕರು ಗೊಂದಲದಲ್ಲಿ ಬೀಳುತ್ತಾರೆ. ಈ ಹೇಳಿಕೆ ನೀಡಿ ಕಲಾವಿದರು ನಟಿಸಲು ಹಿಂದೇಟು ಹಾಕಿದ್ದಾರೆ.
ಹಾಗಾಗಿ ನಿರ್ಮಾಪಕ ಬಿ ಕೆ ಶ್ರೀನಿವಾಸ್ ತೊಂದರೆಗೆ ಒಳಗಾಗಿದ್ದಾರೆ. "ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಚಲನಚಿತ್ರ ವಾಣಿಜ್ಯ ಮಂಡಳಿ. 'ಪ್ರೇಮ್ ಅಡ್ಡ' ಎಂಬ ಇನ್ನೊಂದು ಶೀರ್ಷಿಕೆ ನೀಡಿ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ. ನಾನಂತೂ ಎಷ್ಟೇ ವಿಘ್ನಗಳು ಬಂದರೂ ಅಡ್ಡ ಚಿತ್ರ ಮಾಡುತ್ತೇನೆ, ಬಿಡುವುದಲ್ಲ" ಎಂದು ಚಾಲೆಂಜ್ ಮಾಡಿದ್ದಾರೆ. ಆದರೆ ಕಲಾವಿದರು ಬರಬೇಕಲ್ಲಾ! (ಒನ್ ಇಂಡಿಯಾ ಕನ್ನಡ)