Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಡ್ಡ ಚಿತ್ರಕ್ಕೆ ಮತ್ತೆ ವಿಘ್ನ: ಶ್ರೀನಿವಾಸ್ ಕೆಂಡಾಮಂಡಲ
ಅಡ್ಡ ಶೀರ್ಷಿಕೆಗೂ ವಿವಾದಕ್ಕೂ ಅದೇನು ನಂಟೋ. ಅಡ್ಡ ಶೀರ್ಷಕೆಯ ಬಗ್ಗೆ ಆದ ವಾದ-ವಿವಾದಗಳು ಎಲ್ಲರಿಗೂ ಗೊತ್ತೇ ಇದೆ. ಈಗ ವಾದ-ವಿವಾದಗಳ ಹಂತ ಮುಗಿದು ವಿಘ್ನ ಪ್ರಾರಂಭವಾಗಿದೆ. ನಿರ್ಮಾಪಕ ಬಿ ಕೆ ಶ್ರೀನಿವಾಸ ಸಿನಿಮಾ ಪ್ರಾರಂಭ ಘೋಷಿಸಿ ಕಲಾವಿದರಿಗೆ ಅಡ್ವಾನ್ಸ್ ನೀಡಿದ್ದೂ ಆಗಿದೆ.
ಆದರೆ ಇದೀಗ ಕಲಾವಿದರು ಕಳವಳಕ್ಕೊಳಗಾಗಿದ್ದಾರೆ. ಕಾರಣ ಶ್ರೀನಿವಾಸ ಅವರ ಅಡ್ಡಕ್ಕೆ ವಿರುದ್ಧವಾಗಿ ನಿರ್ದೇಶಕ ಪ್ರೇಮ್ 'ಪ್ರೇಮ್ ಅಡ್ಡ' ಹೆಸರಿನ ಇನ್ನೊಂದು ಚಿತ್ರ ಮಾಡಲಿದ್ದಾರೆ. ಹೀಗೆ ಒಂದೇ ರೀತಿಯ ಎರಡು ಚಿತ್ರಗಳು ಬಂದರೆ ಪ್ರೇಕ್ಷಕರು ಗೊಂದಲದಲ್ಲಿ ಬೀಳುತ್ತಾರೆ. ಈ ಹೇಳಿಕೆ ನೀಡಿ ಕಲಾವಿದರು ನಟಿಸಲು ಹಿಂದೇಟು ಹಾಕಿದ್ದಾರೆ.
ಹಾಗಾಗಿ ನಿರ್ಮಾಪಕ ಬಿ ಕೆ ಶ್ರೀನಿವಾಸ್ ತೊಂದರೆಗೆ ಒಳಗಾಗಿದ್ದಾರೆ. "ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಚಲನಚಿತ್ರ ವಾಣಿಜ್ಯ ಮಂಡಳಿ. 'ಪ್ರೇಮ್ ಅಡ್ಡ' ಎಂಬ ಇನ್ನೊಂದು ಶೀರ್ಷಿಕೆ ನೀಡಿ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ. ನಾನಂತೂ ಎಷ್ಟೇ ವಿಘ್ನಗಳು ಬಂದರೂ ಅಡ್ಡ ಚಿತ್ರ ಮಾಡುತ್ತೇನೆ, ಬಿಡುವುದಲ್ಲ" ಎಂದು ಚಾಲೆಂಜ್ ಮಾಡಿದ್ದಾರೆ. ಆದರೆ ಕಲಾವಿದರು ಬರಬೇಕಲ್ಲಾ! (ಒನ್ ಇಂಡಿಯಾ ಕನ್ನಡ)