Don't Miss!
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಳೆ ನೃತ್ಯದಿಂದ ವೆಂಕಟನ ಗೆದ್ದ ಶರ್ಮಿಳಾ
ಕಣ್ ಕಣ್ಣ ಸಲಿಗೆಯಿಂದಲೇ ರಸಿಕರ ಪ್ರೀತಿ ಸುಲಿಗೆ ಮಾಡಿರುವ ಗ್ಲಾಮರ್ ಬೊಂಬೆ 'ಸಜನಿ' ಶರ್ಮಿಳಾ ಮಾಂಡ್ರೆ 'ವೆಂಕಟ ಇನ್ ಸಂಕಟ' ಚಿತ್ರದಲ್ಲಿ ಕನ್ನಡದ ಸಮಸ್ತ ನಾಯಕಿಯರೂ ನಾಚುವಂತೆ ನರ್ತಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೃತಕ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿರುವ ಶರ್ಮಿಳಾ ಹಿಂದಿಯ ಊರ್ಮಿಳಾ ಕೂಡ ನಾಚಬೇಕು ಎಂಬಂತೆ ಕುಣಿದಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರ ಅವಕೃಪೆಗೆ ಪಾತ್ರವಾಗಿರುವ ಶಿವಮಣಿ ಚಿತ್ರದಲ್ಲಿ ಕಾಣಿಸಿದ್ದಕ್ಕಿಂತ ರಮಣೀಯವಾಗಿ ವೆಂಕಟ ಇನ್ ಸಂಕಟ ಚಿತ್ರದಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ರಮೇಶ್ ಊರ್ಫ್ ವೆಂಕಟನ ಸಂಕಟವಂತೂ ದೂರ ಮಾಡಿದ್ದಾರೆ ಶರ್ಮಿಳಾ.
ತೊಯ್ದು ತೊಪ್ಪೆಯಾಗಿ ಆಕ್ಷಿ ಆಕ್ಷಿ ಅನ್ನುತ್ತಿದ್ದರೂ ಬಿಡದೆ ನಿರ್ದೇಶಕರಿಗೆ ಮನತೃಪ್ತಿಯಾಗುವಂತೆ ಶರ್ಮಿಳಾ ಮಳೆ ಹಾಡಿನಲ್ಲಿ ಕುಣಿದಿದ್ದಾರೆ. ಒದ್ದೆ ಒದ್ದೆ ಸೀರೆಯಲ್ಲಿ ಅಭಿನಯಿಸಿದರೂ ಎಳ್ಳಷ್ಟೂ ಅಶ್ಲೀಲವಾಗಿ ಬಂದಿಲ್ಲ ಎನ್ನುವುದು ಶರ್ಮಿಳಾ ಅಭಿಪ್ರಾಯ. ಎಷ್ಟು ಸುಂದರವಾಗಿ ಚಿತ್ರೀಕರಿಸಲಾಗಿದೆಯೆಂದರೆ ಅದನ್ನು ವಲ್ಗರ್ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶರ್ಮಿಳಾ ಹೇಳಿರುವುದು ನಿರ್ದೇಶಕರ ಸೌಂದರ್ಯಪ್ರಜ್ಞೆಗೆ ನೀಡಿರುವ ಸರ್ಟಿಫಿಕೇಟ್.
ಮಳೆಯಲಿ ನೆನೆದು ಹಾಡಿ ಕುಣಿದಾಡುವ ಸೀರೆ ಸುಂದರಿಯರನ್ನು ನೋಡುವುದು ಪ್ರೇಕ್ಷಕರಿಗೇನೋ ಸೊಗಸಾಗಿರುತ್ತದೆ. ಆದರೆ, ನಾವು ಪಡುವ ಪಾಡು ರಾಮ ರಾಮಾ ಅನ್ನುತ್ತಾರೆ ಶರ್ಮಿಳಾ. ಶರ್ಮಿಳಾ ಅವರ ಸಂಕಟವನ್ನು ಅರ್ಥ ಮಾಡಿಕೊಂಡ ನಿರ್ದೇಶಕ ರಮೇಶ್ ಚಿತ್ರೀಕರಣದ ಮಧ್ಯದಲ್ಲಿ ಮೈಯನ್ನು ಒಣಗಿಸಿಕೊಳ್ಳಲು ಆಗಾಗ ಅನುವು ಮಾಡಿಕೊಡುತ್ತಿದ್ದರಂತೆ.
ಸಜನಿ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದ ಶರ್ಮಿಳಾ ಇಲ್ಲಿವರೆಗೆ ಕೃಷ್ಣ, ಈ ಬಂಧನ, ನವಗ್ರಹ, ಶಿವಮಣಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವುಗಳಲ್ಲೆಲ್ಲ ಗ್ಲಾಮರ್ ಗೊಂಬೆಯಾಗಿಯಷ್ಟೆ ಅವರ ಪಾತ್ರಗಳು ಸೀಮಿತವಾಗಿವೆ. ಅವರ ನಟನೆಯಲ್ಲಿ ಅವರಿಗಿರುವ ಲಿಮಿಟ್ಟನ್ನು ಶರ್ಮಿಳಾ ಕೂಡ ಅರಿತಿದ್ದಾರೆ. ಅದಕ್ಕಾಗಿಯೇ ಸವಾಲೆನ್ನಿಸುವ ಪಾತ್ರವನ್ನೂ ಅವರು ಆಯ್ದುಕೊಂಡಿಲ್ಲ. ಸಿಕ್ಕಿಲ್ಲ ಅನ್ನುವುದು ಹೆಚ್ಚು ಸೂಕ್ತವೇನೋ.
(ದಟ್ಸ್ ಸಿನಿ ವಾರ್ತೆ)