Don't Miss!
- News EPFO: ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ, 1 ಲಕ್ಷದವರೆಗೂ ಹಣ ಬಿಡಿಸಿಕೊಳ್ಳಬಹುದು!
- Automobiles ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಜು ವೆಡ್ಸ್ ಗೀತಾ ಇನ್ ಹೆವನ್ ನಲ್ಲಿ ಶ್ರೀನಗರ ಕಿಟ್ಟಿ
'ಒಲವೇ ಜೀವನ ಲೆಕ್ಕಾಚಾರ' ಹಾಗೂ 'ಸವಾರಿ' ಚಿತ್ರಗಳ ಯಶಸ್ಸು ಶ್ರೀನಗರ ಕಿಟ್ಟಿಗೆ ವರವಾಗಿ ಪರಿಣಮಿಸಿದೆ. ಈಗ ಮತ್ತಷ್ಟು ಅವಕಾಶಗಳು ಶ್ರೀನಗರ ಕಿಟ್ಟಿಯನ್ನು ಹುಡುಕಿಕೊಂಡು ಬಂದಿವೆ. 'ಮರಳಿ ಮರೆಯಾಗಿ' ಮತ್ತು 'ಸಂಜು ವೆಡ್ಸ್ ಗೀತಾ, ಇನ್ ಹೆವೆನ್' ಎಂಬ ಎರಡು ಚಿತ್ರಗಳು ಶೀಘ್ರದಲ್ಲೇ ಸೆಟ್ಟೇರಲಿವೆ.
ಕಿಟ್ಟಿ ನಟಿಸಲಿರುವ ಒಂದು ಚಿತ್ರಕ್ಕ್ಕೆ ಸವಾರಿ ಚಿತ್ರದ ಜನಪ್ರಿಯ 'ಮರಳಿ ಮರೆಯಾಗಿ' ಹಾಡು ಶೀರ್ಷಿಕೆಗೆ ಸ್ಫೂರ್ತಿಯಾಗಿದೆ. ಇದೊಂದು ರಿಮೇಕ್ ಚಿತ್ರವಾಗಿದ್ದು ರಣದೀಪ್ ಹೂಡ ಮತ್ತು ಶಹನಾ ಗೋಸ್ವಾಮಿ ನಟಿಸಿದ 'ರುಬರು' ಹಿಂದಿ ಚಿತ್ರದ ರೀಮೇಕ್. ಜುಲೈ ಅಂತ್ಯಕ್ಕೆ ಈ ಚಿತ್ರ ಸೆಟ್ಟೇರಲಿದೆ.
ಈ ಚಿತ್ರದ ಮೂಲಕ ನಾಗಶೇಖರ್ ಕನ್ನಡ ಚಿತ್ರರಂಗಕ್ಕೆ ಬಹಳ ವರ್ಷಗಳ ಹಿಂದೆಯೇ ಅಡಿಯಿಡಬೇಕಾಗಿತ್ತು. ಗಣೇಶ್ ರ ಅರಮನೆ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕ ನಂತರ ಈ ಚಿತ್ರವನ್ನು ಅವರು ಕೈಬಿಟ್ಟಿದ್ದರು. ಈಗ ಮತ್ತೆ ಕಾಲಕೂಡಿಬಂದಿದ್ದು ಅದೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ ನಲ್ಲಿ ಸೆಟ್ಟೇರಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)