Don't Miss!
- News Lok sabha election 2024: ಮತ್ತೆ ಮೋದಿಗೆ ಕಮಾಲ್ ಎಂದ ಸಮೀಕ್ಷೆ; ಇಂಡಿಯಾ ಮೈತ್ರಿ ಕೂಟಕ್ಕೆ ಎಷ್ಟು ಸ್ಥಾನ?
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Automobiles Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- Lifestyle ಸರ್ಕಸ್ನಿಂದ ತಪ್ಪಿಸಿಕೊಂಡು ಓಡಿದ ಆನೆ..! ಆಮೇಲೆ ಆಗಿದ್ದೇನು..?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಿಯಾ ಹಾಸನ್, ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಮಾಲಾಶ್ರೀ
ಎಲ್ಲ ನಿರೀಕ್ಷೆಗಳನ್ನೂ ಹುಸಿ ಮಾಡಿ 'ಜಂಬದ ಹುಡುಗಿ' ಪ್ರಿಯಾ ಹಾಸನ್ ಅಭಿನಯದ 'ಬಿಂದಾಸ್ ಹುಡುಗಿ' ಚಿತ್ರ ಸೆಂಚುರಿ ಬಾರಿಸಿದೆ. ಇತ್ತೀಚೆಗೆ ಈ ಸಂಭ್ರಮವನ್ನು ಬೆಂಗಳೂರಿನ ಬೆಲ್ ಹೋಟೆಲ್ನಲ್ಲಿ ಪ್ರಿಯಾ ಹಾಸನ್ ಮಾಧ್ಯಮ ಮಿತ್ರರೊಡನೆ ಹಂಚಿಕೊಂಡರು. ಅದರ ಹೈಲೈಟ್ಸ್ ಇಲ್ಲಿವೆ ಓದಿ. 'ಬಿಂದಾಸ್ ಹುಡುಗಿ' ಸಾಧನೆಯನ್ನು ಕನ್ನಡ ಚಿತ್ರರಂಗದ ಹಿರಿಯ ತಾರೆಗಳಾದ ಅಭಿನಯ ಶಾರದೆ ಜಯಂತಿ ಹಾಗೂ ಗಿರಿಜಾ ಲೋಕೇಶ್ ಮನಸಾರೆ ಹೊಗಳಿದರು.
ಅಭಿನೇತ್ರಿ ಜಯಂತಿ ಅವರು ಮಾತನಾಡುತ್ತಾ, ಪುರುಷರಿಗೆ ಹೋಲಿಸಿದರೆ ಮಹಿಳೆಯರದೇ ಒಂದು ಕೈ ಮೇಲು. ಪ್ರಿಯಾ ಹಾಸನ್ ಇದನ್ನು ನಿರೂಪಿಸಿದ್ದಾರೆ. 'ಬಿಂದಾಸ್ ಹುಡುಗಿ' ಚಿತ್ರ ಮಾಡಬೇಕಾದರೆ ಅವರು ಏನೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಮುಂದಿನ ಚಿತ್ರಕ್ಕೆ ಈ ರೀತಿಯ ಕಷ್ಟಗಳು ಎದುರಾಗದಿರಲಿ ಎಂದರು.
ಮಹಿಳೆಯರನ್ನು ಬೆಂಬಲಿಸದ ಪುರುಷರನ್ನು ಜಯಂತಿ ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ಈ ಮಾತಿಗೆ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಕೂಡ ಧ್ವನಿಗೂಡಿಸಿದರು. ದಯವಿಟ್ಟು ಬಾಯಿಗೆ ಬಂದಂತೆ ಬರೆಯಬೇಡಿ. ನನ್ನಂತಹವರನ್ನು ಹುರುದುಂಭಿಸಿ. ತಮ್ಮಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಪ್ರಿಯಾ ಹಾಸನ್ ವಿನಂತಿಸಿಕೊಂಡರು.
ಕನ್ನಡ ಚಿತ್ರರಂಗಕ್ಕೆ ದೊರೆತ ಮತ್ತೊಬ್ಬ ಮಾಲಾಶ್ರೀ ಅಥವಾ ಮಂಜುಳ ಎಂದು ಪ್ರಿಯಾ ಹಾಸನ್ ಅವರನ್ನು ಕೆಸಿಎನ್ ಚಂದ್ರಶೇಖರ್ ಬಣ್ಣಿಸಿದರು. 'ಗಂಡುಬೀರಿ' ಮತ್ತು 'ರೆಬೆಲ್' ಎಂಬ ಮತ್ತೆರಡು ಚಿತ್ರಗಳ ಮೂಲಕ ಪ್ರಿಯಾ ಹಾಸನ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹಿಮಾಲಯದ ಎತ್ತರಕ್ಕೆ ಪ್ರಿಯಾ ಹಾಸನ್ ಬೆಳೆಯಲಿ ಎಂದು ಹಿರಿಯರ ಕಲಾವಿದರು ಪ್ರಿಯಾ ಹಾಸನ್ರನ್ನು ಹಾರೈಸಿದ್ದಾರೆ.