Don't Miss!
- News Namma Metro: ಈ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲೂ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ-ಎಲ್ಲೆಲ್ಲಿ? ಮಾಹಿತಿ ತಿಳಿಯಿರಿ
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಪ್ರಿಲ್ನಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹಂಗಾಮ
ಕಡೆಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ಗೆ ಮುಹೂರ್ತ ನಿಗದಿಯಾಗಿದೆ. ಈ ಹಿಂದೆ ಜನವರಿ 2011ರಿಂದ ಶುರುವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆ ಮಾತು ಸುಳ್ಳಾಯಿತು. ಫೆಬ್ರವರಿ ಕೊನೆಗೆ ಖಂಡಿತ ಶುರವಾಗಲಿದೆ ಎಂಬ ಮಾತೂ ಅರ್ಥ ಕಳೆದುಕೊಂಡಿತು. ಏಪ್ರಿಲ್ನಿಂದ ಸಿಸಿಎಲ್ ಪಂದ್ಯಾವಳಿ ನಡೆಯುವುದು ಪಕ್ಕಾ ಎಂದಿದ್ದಾರೆ 'ಕರ್ನಾಟಕ ಬುಲ್ಡೋಜರ್ಸ್' ತಂಡದ ನಾಯಕ ಕಿಚ್ಚ ಸುದೀಪ್.
ಈಗಾಗಲೆ ಪ್ರಾಕ್ಟೀಸ್ ಕೂಡ ಆರಂಭವಾಗಿದ್ದು ಕನ್ನಡ ಸಿನಿಮಾ ತಾರೆಗಳು ಅರಮನೆ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಅಶೋಕ್ ಖೇಣಿ ಕನ್ನಡ ಸಿನಿಮಾ ತಾರೆಗಳ ತಂಡವನ್ನು ರು.17 ಕೋಟಿಗೆ ಖರೀದಿಸಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಬೆಳಗ್ಗೆ 6.15ರಿಂದ ವಾರದಲ್ಲಿ ಮೂರು ದಿನ ಪ್ರಾಕ್ಟೀಸ್ ಭರದಿಂದಸಾಗುತ್ತಿದೆ.
ಈ ಹಿಂದೆ ಕರ್ನಾಟಕ ತಂಡಕ್ಕೆ 'ಬೆಂಗಳೂರು ರಾಯಲ್ಸ್' ಎಂದು ಹೆಸರಿಡಲಾಗಿತ್ತು. ಬಳಿಕ ಅದನ್ನು 'ಕರ್ನಾಟಕ ಬುಲ್ಡೋಜರ್ಸ್' ಎಂದು ಮರುನಾಮಕರಣ ಮಾಡಿದ್ದಾರೆ ಅಶೋಕ್ ಖೇಣಿ. ಮುಂಬೈ ಬಾಲಿವುಡ್ ತಂಡಕ್ಕೆ ನಾಯಕನಾಗಿರುವ ಸಲ್ಮಾನ್ ಖಾನ್ ಅವರ ತಂಡವನ್ನು ಮಣ್ಣುಮುಕ್ಕಿಸುವ ಶಪಥವನ್ನು ಖೇಣಿ ತೊಟ್ಟಿದ್ದಾರೆ.